ಆ್ಯಪ್ನಗರ

50 ಲಕ್ಷಕ್ಕಾಗಿ ಬಿಜೆಪಿ ಮುಖಂಡನ ಮನೆಗೆ ಬೆಂಕಿ ಇಟ್ರು! ಆರೋಪಿಗಳ ಬಂಧನಕ್ಕೆ ಪೊಲೀಸರು ಕಾಲಿಗೆ ಗುಂಡಿಟ್ರು

ಐವತ್ತು ಲಕ್ಷ ಹಣಕ್ಕಾಗಿ ಬಿಜೆಪಿ ಮುಖಂಡ, ಉದ್ಯಮಿ ಆರ್‌. ಶ್ರೀನಿವಾಸ್‌ ಅವರ ಪುತ್ರನಿಗೆ ಬೆದರಿಕೆ ಹಾಕಿ, ಮನೆಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿರುವ ಘಟನೆ ನಡೆದಿದ್ದು, ಆರೋಪಿಗಳನ್ನು ಪೊಲೀಸರು ಬಂದಿಸಿದ್ದಾರೆ.

Vijaya Karnataka Web 13 Nov 2019, 8:31 am
ಬೆಂಗಳೂರು: ಐವತ್ತು ಲಕ್ಷ ರೂ.ಗಾಗಿ ಟಿ. ದಾಸರಹಳ್ಳಿಯ ಬಿಜೆಪಿ ಮುಖಂಡ, ಉದ್ಯಮಿ ಆರ್‌. ಶ್ರೀನಿವಾಸ್‌ ಅವರ ಪುತ್ರನಿಗೆ ಬೆದರಿಕೆ ಹಾಕಿ, ಮನೆಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ್ದ ಇಬ್ಬರು ಆರೋಪಿಗಳ ಕಾಲಿಗೆ ಉತ್ತರ ವಿಭಾಗ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ.
Vijaya Karnataka Web dasarahalli


ಬೆಂಗಳೂರು: ದುಷ್ಕರ್ಮಿಗಳಿಂದ ನಾಯಿ ಮೇಲೆ ಗುಂಡಿನ ದಾಳಿ, ಜೀವ ಉಳಿಸಲು ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ

ತಮಿಳುನಾಡಿನ ತಿರುನಲ್ವೇಲಿ ಮೂಲದ ಬಸೀತ್‌ (21) ಮತ್ತು ರಿಯಾಜ್‌ (23) ಗುಂಡೇಟು ತಿಂದವರು. ಈ ಇಬ್ಬರು ಬಂಧಿಸಲು ಮುಂದಾದ ಪೊಲೀಸರ ಮೇಲೆಯೇ ಮಾರಕಾಸ್ತ್ರಗಳಿಂದ ಹಲ್ಲೆಮಾಡಿ ಪರಾರಿಯಾಗಲು ಯತ್ನಿಸಿದ್ದಾರೆ. ಈ ವೇಳೆ ಬಾಗಲಗುಂಟೆ ಠಾಣೆಯ ಪೊಲೀಸ್‌ ಸಿಬ್ಬಂದಿ ಮಲ್ಲಿಕಾರ್ಜುನ ಮತ್ತು ಶ್ರೀನಿವಾಸ ಅವರಿಗೆ ಗಾಯಗಳಾಗಿವೆ. ನಾಲ್ವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೆಲಸ ಸಿಗದೆ ಬೇಸತ್ತ ಎಂಸಿಎ ಪದವೀಧರ, ಶ್ರೀಮಂತರ ಬೆದರಿಸಿ ಹಣ ವಸೂಲು ಮಾಡಲು ಯತ್ನ!


ಟಿ.ದಾಸರಹಳ್ಳಿ 4ನೇ ಕ್ರಾಸ್‌ನಲ್ಲಿ ಶ್ರೀನಿವಾಸ್‌ ಅವರು ಪತ್ನಿ, ಮಗನ ಜೊತೆ ವಾಸವಿದ್ದಾರೆ. ಕುಡಿಯುವ ನೀರಿನ ಕ್ಯಾನ್‌ ಸರಬರಾಜು ಮಾಡುವ ನೀರಿನ ಪ್ಲಾಂಟ್‌ ನಡೆಸುತ್ತಿದ್ದಾರೆ. ಆರೋಪಿಗಳು ಒಂದೂವರೆ ವರ್ಷದ ಹಿಂದೆ ಕೆಲಸ ಅರಸಿ ನಗರಕ್ಕೆ ಬಂದಿದ್ದು, ಶ್ರೀನಿವಾಸ್‌ ಮನೆ ಸಮೀಪದಲ್ಲೇ ಇರುವ ಅಕ್ಕಿ ಮಾರಾಟ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದರು.

ಏರಿಯಾದಲ್ಲಿ ‘ಹವಾ’ ಸೃಷ್ಟಿಸಲು ಕಾರಿಗೆ ಕಲ್ಲು, ಓರ್ವ ರೌಡಿ ಸೇರಿ 7 ಜನ ಅಂದರ್‌

ಶ್ರೀಮಂತರಾಗಿರುವ ಶ್ರೀನಿವಾಸ್‌ ಅವರನ್ನು ಬೆದರಿಸಿ ಹಣ ಸುಲಿಗೆ ಮಾಡಲು ಆರೋಪಿಗಳು ಸಂಚು ರೂಪಿಸಿದ್ದರು. ಇದಕ್ಕಾಗಿ ಶ್ರೀನಿವಾಸ್‌ ಪುತ್ರ ಶರತ್‌ನ ಫೋನ್‌ ನಂಬರ್‌ ಸಂಗ್ರಹಿಸಿದ್ದ ಆರೋಪಿಗಳು, ನಂತರ ಕರೆ ಮಾಡಿ 50 ಲಕ್ಷ ರೂ. ಕೊಡಬೇಕು. ಇಲ್ಲದಿದ್ದರೆ ನಿಮ್ಮ ಮನೆಗೆ ಬೆಂಕಿ ಹಾಕುವುದಾಗಿ ಬೆದರಿಸಿದ್ದರು.

ಸೋಮವಾರ ತಡರಾತ್ರಿ 1.30ರ ಸುಮಾರಿಗೆ ಪೆಟ್ರೋಲ್‌ ತಂದು ಶ್ರೀನಿವಾಸ್‌ ಅವರ ಮನೆ ಆವರಣದಲ್ಲಿ ನಿಲ್ಲಿಸಿದ್ದ ವಾಹನಗಳ ಮೇಲೆ ಸುರಿದು ಬೆಂಕಿ ಹಚ್ಚಿದ್ದಾರೆ. ಪರಿಣಾಮ ಮನೆ ಆವರಣದಲ್ಲಿದ್ದ ನಾಲ್ಕು ದ್ವಿಚಕ್ರ ವಾಹನಗಳು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದ್ದು, ಕಿಟಕಿ, ಬಾಗಿಲು, ವಿದ್ಯುತ್‌ ಉಪಕರಣಗಳು ಸುಟ್ಟು ಕರಕಲಾಗಿವೆ.

ಕಿಡ್ನಾಪರ್ ಬಂಧನಕ್ಕೆ 7 ತಿಂಗಳು ಕಾದಿದ್ರು ಪೊಲೀಸರು! ಒಂದೇ ಒಂದು ಫೋನ್ ಕರೆ ಕೊಡ್ತು ರಿಸಲ್ಟ್!

ಮನೆ ಮುಂದೆ ಬೆಂಕಿ ಹಾಗೂ ದಟ್ಟ ಹೊಗೆ ಕಂಡು ಆತಂಕಗೊಂಡ ಶ್ರೀನಿವಾಸ್‌ ಅವರು ಮಹಡಿ ಮೂಲಕ ಹೊರ ಪ್ರವೇಶಿಸಿ ಜೀವ ಉಳಿಸಿಕೊಂಡಿದ್ದಾರೆ. ಬೆಂಕಿ ಹಚ್ಚಿದ್ದ ಬಳಿಕ ಮತ್ತೆ ಶರತ್‌ ಅವರಿಗೆ ಕರೆ ಮಾಡಿದ ಆರೋಪಿಗಳು, ''ಈಗ ಮಾಡಿರುವುದು ಬರೀ ಸ್ಯಾಂಪಲ್‌ ಮಾತ್ರ. ಹಣ ಕೊಡದಿದ್ದರೆ ನಿಮ್ಮ ನೀರಿನ ಪ್ಲಾಂಟ್‌ಗೂ ಬೆಂಕಿ ಹಚ್ಚುತ್ತೇವೆ. ತಂದೆ-ತಾಯಿಯನ್ನು ಬಿಡುವುದಿಲ್ಲ'' ಎಂದು ಬೆದರಿಕೆ ಹಾಕಿದ್ದಾರೆ. ಈ ಸಂಬಂಧ ಶರತ್‌ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಆರೋಪಿಗಳ ಬಂಧಿಸಲು ಸ್ಕೆಚ್‌:
ಪೊಲೀಸರ ಸೂಚನೆಯಂತೆ ಆರೋಪಿಗಳಿಗೆ ಹಣ ಕೊಡುವುದಾಗಿ ಶರತ್‌ ಒಪ್ಪಿದ್ದಾರೆ. ನಂತರ ಎಲ್ಲಿಗೆ ಬರಬೇಕು ಎಂದು ಕೇಳಿದಾಗ ಆಚಾರ್ಯ ಕಾಲೇಜು ಸಮೀಪ ಬರಲು ಹೇಳಿದ್ದಾರೆ. ಅದರಂತೆ ಪೊಲೀಸರ ತಂಡ ಶರತ್‌ ಅವರೊಂದಿಗೆ ಹಣ ಕೊಡುವವರಂತೆ ಆಚಾರ್ಯ ಕಾಲೇಜು ಬಳಿ ತೆರಳಿ ಆರೋಪಿಗಳನ್ನು ಸುತ್ತುವರಿದಿದ್ದಾರೆ. ಪೊಲೀಸರನ್ನು ಗಮನಿಸುತ್ತಿದ್ದಂತೆಯೇ ಆರೋಪಿಗಳು ಮಾರಕಾಸ್ತ್ರಗಳಿಂದ ಹಲ್ಲೆಮಾಡಿ ಪರಾರಿಯಾಗಲು ಯತ್ನಿಸಿದ್ದಾರೆ. ಈ ವೇಳೆ ಇಬ್ಬರು ಪೊಲೀಸರಿಗೆ ಗಾಯಗಳಾಗಿವೆ. ಆತ್ಮರಕ್ಷಣೆಗಾಗಿ ಸೋಲದೇವನಹಳ್ಳಿ ಇನ್ಸ್‌ಪೆಕ್ಟರ್‌ ಶಿವಸ್ವಾಮಿ ಇಬ್ಬರು ಆರೋಪಿಗಳ ಕಾಲುಗಳಿಗೆ ಗುಂಡು ಹಾರಿಸಿ ನಂತರ ಬಂಧಿಸಿದ್ದಾರೆ.

ಬಂಧಿಸಲು ಮುಂದಾದಾಗ ಆರೋಪಿಗಳು ಪೊಲೀಸರ ಮೇಲೆ ಹಲ್ಲೆಮಾಡಿದ್ದಾರೆ. ಈ ವೇಳೆ ಅವರ ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿದೆ.
- ಶಶಿಕುಮಾರ್‌, ಡಿಸಿಪಿ ಉತ್ತರ ವಿಭಾಗ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ