ಆ್ಯಪ್ನಗರ

ಗರ್ಭಿಣಿ ಮೇಲೆ ಚಿಕ್ಕಪ್ಪನಿಂದ ಹಲ್ಲೆ

ಎರಡು ತಿಂಗಳ ಗರ್ಭಿಣಿ ಮೇಲೆ ಚಿಕ್ಕಪ್ಪನೇ ಹಲ್ಲೆ ನಡೆಸಿರುವ ಘಟನೆ ಎಚ್‌ಎಎಲ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Vijaya Karnataka 27 Feb 2019, 5:00 am
ಬೆಂಗಳೂರು: ಎರಡು ತಿಂಗಳ ಗರ್ಭಿಣಿ ಮೇಲೆ ಚಿಕ್ಕಪ್ಪನೇ ಹಲ್ಲೆ ನಡೆಸಿರುವ ಘಟನೆ ಎಚ್‌ಎಎಲ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
Vijaya Karnataka Web jail


ಅನ್ನಸಂದ್ರಪಾಳ್ಯದ ನಿವಾಸಿ ಆಂಜಿನಪ್ಪ ರೆಡ್ಡಿ ಅವರ ಪುತ್ರಿ ರೂಪಾ ಹಲ್ಲೆಗೆ ಒಳಗಾದವರು. ಆಸ್ತಿ ವಿವಾದದ ಸಂಬಂಧ ಹಲ್ಲೆ ನಡೆದಿದ್ದು ಕ್ರಿಮಿನಲ್‌ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಬಂಧನಕ್ಕೆ ಮುಂದಾಗಿದ್ದಾರೆ.

ಆಂಜಿನಪ್ಪ ರೆಡ್ಡಿ ಮತ್ತು ನಾರಾಯಣರೆಡ್ಡಿ ಇಬ್ಬರೂ ಸಹೋದರರು. ಕೆಲವು ವರ್ಷಗಳ ಹಿಂದೆ ಆಸ್ತಿ ವಿಭಾಗವಾದಾಗ ಆಂಜಿನಪ್ಪ ರೆಡ್ಡಿ ಅವರ ಪಾಲಿಗೆ ಬಂದಿದ್ದ ಜಾಗದಲ್ಲಿ 250 ಅಡಿ ಜಾಗವನ್ನು ತಾನು ಇಟ್ಟುಕೊಂಡು 150 ಅಡಿ ಜಾಗವನ್ನು ಮಾತ್ರ ನಾರಾಯಣ ರೆಡ್ಡಿ ಕೊಟ್ಟಿದ್ದರು. ತನ್ನ ಬಳಿ ಇಟ್ಟುಕೊಂಡಿದ್ದ 250 ಅಡಿ ಜಾಗದಲ್ಲಿ ಮನೆ ಕಟ್ಟಿಸಿಕೊಡುವುದಾಗಿ ಅವರು ಆಗ ಮಾತು ಕೊಟ್ಟಿದ್ದರು. ಆದರೆ, ಜಾಗ ಪಡೆದು ಐದು ವರ್ಷ ಕಳೆದರೂ ಮನೆ ಕಟ್ಟಿ ಕೊಟ್ಟಿರಲಿಲ್ಲ ಎಂದು ರೂಪಾ ಅವರು ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಐದು ವರ್ಷದಿಂದ ಮನೆ ಕಟ್ಟಿ ಕೊಟ್ಟಿಲ್ಲವಾದ್ದರಿಂದ ಜಾಗವನ್ನಾದರೂ ವಾಪಾಸ್‌ ಕೊಡಿ ಎಂದು ಕೇಳಲು ರೂಪಾ ಅವರು ತಾಯಿ ಜತೆಗೆ ನಾರಾಯಣ ರೆಡ್ಡಿ ಮನೆಗೆ ತೆರಳಿದ್ದರು. ಈ ವೇಳೆ ರೆಡ್ಡಿ ದಂಪತಿ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಗರ್ಭಿಣಿ ರೂಪಾ ಪೊಲೀಸರಿಗೆ ದೂರು ನೀಡಿದ್ದು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಾಗಿದ್ದಾರೆ. ಎಚ್‌ಎಎಲ್‌ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ