ಆ್ಯಪ್ನಗರ

ಜೈಲಿನಲ್ಲಿ ಕೈದಿಗಳ ಬಡಿದಾಟ

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಊಟ ಮಾಡುವ ವೇಳೆ ಇಬ್ಬರು ಸಜಾ ಬಂದಿಗಳ ನಡುವೆ ಉಂಟಾದ ಜಗಳದಲ್ಲಿ ಒಬ್ಬನಿಗೆ ಗಂಭೀರ ಗಾಯಗಳಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಲಾಗಿದೆ.

Vijaya Karnataka 25 Jan 2019, 5:00 am
ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಊಟ ಮಾಡುವ ವೇಳೆ ಇಬ್ಬರು ಸಜಾ ಬಂದಿಗಳ ನಡುವೆ ಉಂಟಾದ ಜಗಳದಲ್ಲಿ ಒಬ್ಬನಿಗೆ ಗಂಭೀರ ಗಾಯಗಳಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಲಾಗಿದೆ.
Vijaya Karnataka Web jail


ಗಾಯಾಳು ಕಾಮಣ್ಣ (23) ಗಾಯಗೊಂಡವರು. ಹಲ್ಲೆ ಮಾಡಿದ ಆರೋಪಿ ಕೈದಿ ಚೌಡಪ್ಪ(28) ವಿರುದ್ಧ ಜೈಲು ಮುಖ್ಯ ಅಧೀಕ್ಷಕ ಎಂ.ಸೋಮಶೇಖರ್‌ ಅವರು ಪರಪ್ಪನ ಅಗ್ರಹಾರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಜ.21ರಂದು ಊಟ ವಿತರಿಸುವ ವೇಳೆ ಚೌಡಪ್ಪ ಮತ್ತು ಕಾಮಣ್ಣನ ನಡುವೆ ಊಟದ ವಿಚಾರಕ್ಕೆ ಜಗಳವಾಗಿದೆ. ಈ ವೇಳೆ ಕುಪಿತಗೊಂಡ ಚೌಡಪ್ಪ, ಕಾಮಣ್ಣನ ಮೇಲೆ ದಾಳಿ ನಡೆಸಿ ಹಲ್ಲೆ ನಡೆಸಿದ್ದು, ಜೈಲು ಸಿಬ್ಬಂದಿ ಜಗಳ ಬಿಡಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ