ಆ್ಯಪ್ನಗರ

ಜಯಲಲಿತಾ ಸಂಬಂಧಿ ಎಂದು ನಂಬಿಸಿ ಹೈಟೆಕ್ ವಂಚನೆ

ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಕುಟುಂಬಕ್ಕೆ ಸೇರಿದವನು ಎಂದು ಹೇಳಿಕೊಂಡು ಆಭರಣ ವಿನ್ಯಾಸಕಿಯೊಬ್ಬರಿಗೆ ವಂಚಿಸಿದ್ದ ಆರೋಪಿಯನ್ನು ಕಬ್ಬನ್‌ಪಾರ್ಕ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ವಿಕ ಸುದ್ದಿಲೋಕ 14 Mar 2016, 4:54 am
-ಆಭರಣ ವಿನ್ಯಾಸಕಿಗೆ ಫೇಸ್‌ಬುಕ್ ಮೂಲಕ ವಂಚನೆ-
Vijaya Karnataka Web promising related high tech fraud
ಜಯಲಲಿತಾ ಸಂಬಂಧಿ ಎಂದು ನಂಬಿಸಿ ಹೈಟೆಕ್ ವಂಚನೆ


ಬೆಂಗಳೂರು: ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಕುಟುಂಬಕ್ಕೆ ಸೇರಿದವನು ಎಂದು ಹೇಳಿಕೊಂಡು ಆಭರಣ ವಿನ್ಯಾಸಕಿಯೊಬ್ಬರಿಗೆ ವಂಚಿಸಿದ್ದ ಆರೋಪಿಯನ್ನು ಕಬ್ಬನ್‌ಪಾರ್ಕ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಗೌಡನಪಾಳ್ಯ ನಿವಾಸಿ ನಿಜನ್‌ಸನ್ ಬಂಧಿತ ಆರೋಪಿ. ಈತ ಫೇಸ್‌ಬುಕ್‌ನಲ್ಲಿ ತನ್ನನ್ನು ಜಯಲಲಿತಾ ಕುಟುಂಬಕ್ಕೆ ಸೇರಿದವನು ಎಂದು ಪ್ರೊಫೈಲ್ ರಚಿಸಿಕೊಂಡಿದ್ದ. ಆ ಮೂಲಕ ಹಲವಾರು ಯುವತಿಯರ ಗೆಳೆತನ ಸಂಪಾದಿಸಿದ್ದ. ಈತನ ಪ್ರೊಫೈಲ್ ನಂಬಿ ಗೆಳೆತನಕ್ಕೆ ಗಂಟುಬಿದ್ದ ಆಭರಣ ವಿನ್ಯಾಸಕಿಯೊಬ್ಬರನ್ನು ಐಷಾರಾಮಿ ಹೋಟೆಲಿಗೆ ಕರೆಸಿ ಅವರ ಎಟಿಎಂ ಕಾರ್ಡ್‌ನಿಂದಲೇ ಐಷಾರಾಮಿ ಮೊಬೈಲ್ ಖರೀದಿಸಿ, 5 ಲಕ್ಷ ರೂ. ನಕಲಿ ಚೆಕ್ ನೀಡಿ ವಂಚಿಸಿ ಪರಾರಿಯಾಗಿದ್ದ. ಈ ಬಗ್ಗೆ ಅವರು ಕೊಟ್ಟಿದ್ದ ದೂರನ್ನು ಆಧರಿಸಿ ಗೌಡನಪಾಳ್ಯದ ಆತನ ನಿವಾಸದಿಂದಲೇ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಫೇಸ್‌ಬುಕ್ ಮೂಲಕ ನಿಜನ್‌ಸನ್ ಪರಿಚಯ ಮಾಡಿಕೊಂಡಿದ್ದ ವಿನ್ಯಾಸಕಿ, ತಮ್ಮ ಕಷ್ಟಸುಖಗಳನ್ನೆಲ್ಲಾ ಆತನ ಜತೆ ಹಂಚಿಕೊಂಡಿದ್ದರು. ತಾಯಿ ಮೃತಪಟ್ಟ ಬಳಿಕ ಒಬ್ಬಂಟಿಯಾಗಿದ್ದೇನೆ ಎಂದು ಅಳಲು ತೋಡಿಕೊಂಡಿದ್ದರು. ಅದನ್ನೇ ಬಂಡವಾಳ ಮಾಡಿಕೊಂಡ ಆರೋಪಿ ‘‘ತಾನು ಚೆನ್ನೈನಿಂದ ಬೆಂಗಳೂರಿಗೆ ಬರುತ್ತಿದ್ದೇನೆ. ಬಂದು ನಿಮ್ಮನ್ನು ಭೇಟಿ ಮಾಡಿ ಸಹಾಯ ಮಾಡುತ್ತೇನೆ,’’ ಎಂದು ಫೇಸ್‌ಬುಕ್ ಮೂಲಕ ಸಾಂತ್ವನ ಹೇಳಿದ್ದ. ಆ ಮಾತುಗಳಿಗೆ ಮರುಳಾದ ಮಹಿಳೆ ಆತ ಬೆಂಗಳೂರಿಗೆ ಬರುವುದನ್ನೇ ಕಾದಿದ್ದರು. ಆತ ಬೆಂಗಳೂರಿಗೆ ಬಂದಿದ್ದೇನೆ ಎಂದು ತಿಳಿಸಿ, ಮಹಿಳೆಯನ್ನು ಯುಬಿ ಸಿಟಿಯ ಹೋಟೆಲಿಗೆ ಕರೆಸಿಕೊಂಡಿದ್ದ. ಅಲ್ಲಿ ಗಂಟೆಗಟ್ಟಲೆ ಮಾತನಾಡಿದ ವಂಚಕ ನಂತರ 5 ಲಕ್ಷ ರೂ. ನ ಚೆಕ್ ತೆಗೆದುಕೊಟ್ಟಿದ್ದ. ಆ ಚೆಕ್ಕನ್ನು ಮಹಿಳೆ ತಮ್ಮ ಬ್ಯಾಗಿಗೆ ಹಾಕಿಕೊಂಡ ಬಳಿಕ ಆತನ ಅವರನ್ನು ವಂಚಿಸಲು ಆರಂಭಿಸಿದ್ದಾನೆ. ‘‘ತನ್ನ ಮೊಬೈಲ್ ಕೈ ಕೊಟ್ಟಿದೆ, ಎಟಿಎಂ ಕಾರ್ಡ್ ಮರೆತು ಬಂದಿದ್ದೇನೆ,’’ ಎಂದು ಹೇಳಿ ಆ ಮಹಿಳೆಯ ಎಟಿಎಂ ಕಾರ್ಡ್ ಬಳಸಿ ಹೊಸ ಮೊಬೈಲ್ ಖರೀದಿಸಿದ್ದ. ಬಳಿಕ ಸಂಜೆ ಮನೆಗೆ ಬಂದು ಹಣ ಕೊಡುತ್ತೇನೆ ಎಂದು ಹೇಳಿ ಅಲ್ಲಿಂದ ತೆರಳಿದ್ದ. ಆತ ಅಲ್ಲಿಂದ ಹೋದ ಸ್ವಲ್ಪ ಹೊತ್ತಿನಲ್ಲೇ ನಿಜನ್‌ಸನ್‌ನ ಮೊಬೈಲ್ ನಂಬರ್, ಪೇಸ್‌ಬುಕ್ ಖಾತೆ ಎಲ್ಲವೂ ಸ್ಥಗಿತಗೊಂಡಿದೆ. ಸಂಜೆಯವರೆಗೂ ಕಾದು ಕಾದು ಸುಸ್ತಾದ ಮಹಿಳೆಗೆ ತಾನು ವಂಚನೆಗೆ ಒಳಗಾಗಿದ್ದೇನೆ ಎನ್ನುವುದು ಖಚಿತವಾದ ನಂತರ ಕಬ್ಬನ್‌ಪಾರ್ಕ್ ಠಾಣೆಗೆ ತೆರಳಿ ದೂರು ದಾಖಲಿಸಿದ ್ದರು. ಕಂಪ್ಯೂಟರ್ ಐಪಿ ವಿಳಾಸ ಪತ್ತೆಹಚ್ಚಿದ ಪೊಲೀಸರು ಆರೋಪಿಯನ್ನು ಗೌಡನಪಾಳ್ಯದಲ್ಲಿ ಬಂಧಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ