ಬೆಂಗಳೂರು: ಕೌಟುಂಬಿಕ ವಿಚಾರವಾಗಿ ಇಬ್ಬರ ನಡುವೆ ನಡೆದ ಜಗಳ ಒಬ್ಬರ ಕೊಲೆಯಲ್ಲಿಕೊನೆಯಾಗಿರುವ ಘಟನೆ ರಾಮಮೂರ್ತಿನಗರದಲ್ಲಿನಡೆದಿದೆ. ಜಗಳ ಬಿಡಿಸಲು ಬಂದವನನ್ನೇ ಆತನ ನಾಲ್ವರು ಸ್ನೇಹಿತರು ಸೇರಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದು ಸದ್ಯ ಎಲ್ಲಆರೋಪಿಗಳನ್ನು ಬಂಧಿಸಲಾಗಿದೆ.
ನೇಪಾಳ ಮೂಲದ ರಾಜೇಂದ್ರ ಬಿಸ್ವಾ(27) ಕೊಲೆಯಾದ ಸೆಕ್ಯುರಿಟಿ ಗಾರ್ಡ್. ಕೊಲೆ ಮಾಡಿದ ಆರೋಪದ ಮೇಲೆ ರಾಜೇಂದ್ರನ ಹತ್ತಿರದ ಸಂಬಂಧಿಗಳಿಬ್ಬರು ಸೇರಿ ನಾಲ್ವರು ಬಂಧಿತರಾಗಿದ್ದಾರೆ.
ನಡೆದದ್ದೇನು ?
ಕೊಲೆಯಾದ ರಾಜೇಂದ್ರ ಬಿಸ್ವಾ ಹಾಗೂ ಬಂಧಿತರೆಲ್ಲರೂ ನೇಪಾಳದವರೇ ಆಗಿದ್ದು ಎಲ್ಲರೂ ಕಸ್ತೂರಿನಗರದಲ್ಲಿವಾಸವಾಗಿದ್ದಾರೆ. ಎಲ್ಲರೂ ಸೆಕ್ಯುರಿಟಿ ಗಾರ್ಡ್ಗಳಾಗಿ ಕೆಲಸ ಮಾಡಿಕೊಂಡಿದ್ದಾರೆ . ಅಮಿತ್ ಮತ್ತು ಆತನ ಸ್ನೇಹಿತ ಭೀಮಾ ಬಿಸ್ವಾ ಒಂದೇ ಕುಟುಂಬದ ಅಕ್ಕ-ತಂಗಿಯರನ್ನು ಮದುವೆ ಮಾಡಿಕೊಂಡಿದ್ದು ಸಂಬಂಧಿಗಳಾಗಿದ್ದಾರೆ. ಕೌಟುಂಬಿಕ ಕಾರಣಗಳಿಂದ ಕೆಲ ವಾರಗಳಿಂದ ಅಮಿತ್ ಪತ್ನಿಯಿಂದ ದೂರವಾಗಿ ಒಬ್ಬನೇ ನೆಲೆಸಿದ್ದ. ಇದೇ ವಿಚಾರವಾಗಿ ಭೀಮಾ ಮತ್ತು ಅಮಿತ್ ನಡುವೆ ಪದೇ ಪದೆ ಜಗಳ ನಡೆಯುತ್ತಿತ್ತು. ಪತ್ನಿ ಜತೆ ನೆಲೆಸುವಂತೆ ಅಮಿತ್ಗೆ ಒತ್ತಾಯಿಸುತ್ತಲೇ ಇದ್ದ. ಈ ವೇಳೆ ಇವರಿಬ್ಬರ ಜತೆಯಲ್ಲೇ ಕೆಲಸ ಮಾಡುವ ರಾಜೇಂದ್ರ ಬಿಸ್ವಾ ಮಧ್ಯ ಪ್ರವೇಶಿಸಿ ಜಗಳ ಬಿಡಿಸುತ್ತಿದ್ದ. ಇದು ಉಳಿದೆಲ್ಲರ ಅಸಮಾಧಾನಕ್ಕೆ ಕಾರಣವಾಗಿತ್ತು. ಈತ ಸುಖಾ ಸುಮ್ಮನೆ ಅಮಿತ್ ಹಾಗೂ ಭೀಮಾರ ಕೌಟುಂಬಿಕ ವಿಚಾರಕ್ಕೆ ತಲೆ ಹಾಕುತ್ತಿದ್ದಾನೆ ಎಂದು ಆಕ್ರೋಶಗೊಂಡಿದ್ದರು ಎನ್ನುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.
ಅ.6 ರಂದು ಬೆಳಗ್ಗೆ ಇದೇ ವಿಚಾರಕ್ಕೆ ಅಮಿತ್ ಮತ್ತು ಭೀಮಾ ನಡುವೆ ಮತ್ತೆ ಜಗಳ ಶುರುವಾಗಿತ್ತು. ಈ ವೇಳೆ ಜಗಳ ಬಿಡಿಸಲು ಬಂದ ರಾಜೇಂದ್ರ ಬಿಸ್ವಾ ನನ್ನು ಉಳಿದೆಲ್ಲರೂ ಸೇರಿ ಚಾಕುವಿನಿಂದ ಇರಿದು ಸ್ಥಳದಿಂದ ಪರಾರಿಯಾಗಿದ್ದಾರೆ. ಅಕ್ಕ ಪಕ್ಕದವರು ವಿಷಯವನ್ನು ಪೊಲೀಸರಿಗೆ ಮಾಹಿತಿ ರವಾನಿಸಿದ್ದರು. ಸ್ಥಳಕ್ಕೆ ಬಂದ ರಾಮಮೂರ್ತಿನಗರ ಠಾಣೆ ಪೊಲೀಸರು ರಕ್ತದ ಮಡುವಿನಲ್ಲಿಬಿದ್ದಿದ್ದ ರಾಜೇಂದ್ರನನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಿದರಾದರೂ ಆತ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಬಳಿಕ ತನಿಖೆ ಮುಂದುವರೆಸಿದ ಅಧಿಕಾರಿಗಳು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರ ವಿಚಾರಣೆ ಮುಗಿದಿದ್ದು ಎಲ್ಲರನ್ನೂ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.
ನೇಪಾಳ ಮೂಲದ ರಾಜೇಂದ್ರ ಬಿಸ್ವಾ(27) ಕೊಲೆಯಾದ ಸೆಕ್ಯುರಿಟಿ ಗಾರ್ಡ್. ಕೊಲೆ ಮಾಡಿದ ಆರೋಪದ ಮೇಲೆ ರಾಜೇಂದ್ರನ ಹತ್ತಿರದ ಸಂಬಂಧಿಗಳಿಬ್ಬರು ಸೇರಿ ನಾಲ್ವರು ಬಂಧಿತರಾಗಿದ್ದಾರೆ.
ನಡೆದದ್ದೇನು ?
ಕೊಲೆಯಾದ ರಾಜೇಂದ್ರ ಬಿಸ್ವಾ ಹಾಗೂ ಬಂಧಿತರೆಲ್ಲರೂ ನೇಪಾಳದವರೇ ಆಗಿದ್ದು ಎಲ್ಲರೂ ಕಸ್ತೂರಿನಗರದಲ್ಲಿವಾಸವಾಗಿದ್ದಾರೆ. ಎಲ್ಲರೂ ಸೆಕ್ಯುರಿಟಿ ಗಾರ್ಡ್ಗಳಾಗಿ ಕೆಲಸ ಮಾಡಿಕೊಂಡಿದ್ದಾರೆ . ಅಮಿತ್ ಮತ್ತು ಆತನ ಸ್ನೇಹಿತ ಭೀಮಾ ಬಿಸ್ವಾ ಒಂದೇ ಕುಟುಂಬದ ಅಕ್ಕ-ತಂಗಿಯರನ್ನು ಮದುವೆ ಮಾಡಿಕೊಂಡಿದ್ದು ಸಂಬಂಧಿಗಳಾಗಿದ್ದಾರೆ. ಕೌಟುಂಬಿಕ ಕಾರಣಗಳಿಂದ ಕೆಲ ವಾರಗಳಿಂದ ಅಮಿತ್ ಪತ್ನಿಯಿಂದ ದೂರವಾಗಿ ಒಬ್ಬನೇ ನೆಲೆಸಿದ್ದ. ಇದೇ ವಿಚಾರವಾಗಿ ಭೀಮಾ ಮತ್ತು ಅಮಿತ್ ನಡುವೆ ಪದೇ ಪದೆ ಜಗಳ ನಡೆಯುತ್ತಿತ್ತು. ಪತ್ನಿ ಜತೆ ನೆಲೆಸುವಂತೆ ಅಮಿತ್ಗೆ ಒತ್ತಾಯಿಸುತ್ತಲೇ ಇದ್ದ. ಈ ವೇಳೆ ಇವರಿಬ್ಬರ ಜತೆಯಲ್ಲೇ ಕೆಲಸ ಮಾಡುವ ರಾಜೇಂದ್ರ ಬಿಸ್ವಾ ಮಧ್ಯ ಪ್ರವೇಶಿಸಿ ಜಗಳ ಬಿಡಿಸುತ್ತಿದ್ದ. ಇದು ಉಳಿದೆಲ್ಲರ ಅಸಮಾಧಾನಕ್ಕೆ ಕಾರಣವಾಗಿತ್ತು. ಈತ ಸುಖಾ ಸುಮ್ಮನೆ ಅಮಿತ್ ಹಾಗೂ ಭೀಮಾರ ಕೌಟುಂಬಿಕ ವಿಚಾರಕ್ಕೆ ತಲೆ ಹಾಕುತ್ತಿದ್ದಾನೆ ಎಂದು ಆಕ್ರೋಶಗೊಂಡಿದ್ದರು ಎನ್ನುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.
ಅ.6 ರಂದು ಬೆಳಗ್ಗೆ ಇದೇ ವಿಚಾರಕ್ಕೆ ಅಮಿತ್ ಮತ್ತು ಭೀಮಾ ನಡುವೆ ಮತ್ತೆ ಜಗಳ ಶುರುವಾಗಿತ್ತು. ಈ ವೇಳೆ ಜಗಳ ಬಿಡಿಸಲು ಬಂದ ರಾಜೇಂದ್ರ ಬಿಸ್ವಾ ನನ್ನು ಉಳಿದೆಲ್ಲರೂ ಸೇರಿ ಚಾಕುವಿನಿಂದ ಇರಿದು ಸ್ಥಳದಿಂದ ಪರಾರಿಯಾಗಿದ್ದಾರೆ. ಅಕ್ಕ ಪಕ್ಕದವರು ವಿಷಯವನ್ನು ಪೊಲೀಸರಿಗೆ ಮಾಹಿತಿ ರವಾನಿಸಿದ್ದರು. ಸ್ಥಳಕ್ಕೆ ಬಂದ ರಾಮಮೂರ್ತಿನಗರ ಠಾಣೆ ಪೊಲೀಸರು ರಕ್ತದ ಮಡುವಿನಲ್ಲಿಬಿದ್ದಿದ್ದ ರಾಜೇಂದ್ರನನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಿದರಾದರೂ ಆತ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಬಳಿಕ ತನಿಖೆ ಮುಂದುವರೆಸಿದ ಅಧಿಕಾರಿಗಳು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರ ವಿಚಾರಣೆ ಮುಗಿದಿದ್ದು ಎಲ್ಲರನ್ನೂ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.