ಆ್ಯಪ್ನಗರ

ರೌಡಿ ಮನೋಜ್‌ ಕೊಲೆ ಪ್ರಕರಣ: ಮಂಗಳಮುಖಿ ಸೇರಿ ಇಬ್ಬರ ಬಂಧನ

ಸುಂಕದಕಟ್ಟೆಯ ರೋಝಿ ಮತ್ತು ಈಕೆಯ ಪ್ರಿಯಕರ ಶಿವಕುಮಾರ್‌ ಬಂಧಿತರು. ಪ್ರಕರಣದಲ್ಲಿ ಇನ್ನೂ ಕೆಲ ಆರೋಪಿಗಳು ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Vijaya Karnataka 27 Oct 2019, 9:43 am
ಬೆಂಗಳೂರು: ಹೆಗ್ಗನಹಳ್ಳಿ ಕ್ರಾಸ್‌ ರಾಜೇಂದ್ರ ಕಾಲೇಜು ಬಳಿ ಅ.24ರಂದು ನಡೆದಿದ್ದ ರೌಡಿ ಮನೋಜ್‌ ಕೊಲೆ ಪ್ರಕರಣ ಸಂಬಂಧ ಮಂಗಳಮುಖಿ ಸೇರಿ ಇಬ್ಬರು ಆರೋಪಿ ಗಳನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ.
Vijaya Karnataka Web Arrest


ಸುಂಕದಕಟ್ಟೆಯ ರೋಝಿ ಮತ್ತು ಈಕೆಯ ಪ್ರಿಯಕರ ಶಿವಕುಮಾರ್‌ ಬಂಧಿತರು. ಪ್ರಕರಣದಲ್ಲಿ ಇನ್ನೂ ಕೆಲ ಆರೋಪಿಗಳು ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸುಂಕದಕಟ್ಟೆಯಲ್ಲಿ ವಾಸವಿದ್ದ ಮನೋಜ್‌ ಮತ್ತು ರೋಝಿ ಜೊತೆಯಾಗಿ ಸುತ್ತಾಡುತ್ತಿದ್ದರು. ಕೆಲ ದಿನಗಳ ಹಿಂದೆ ಮನೋಜ್‌, ತನ್ನ ಊರಿಗೆ ಹೋಗಿದ್ದ. ಈ ಅವಧಿಯಲ್ಲಿ ರೋಝಿ, ಮತ್ತೊಬ್ಬ ಗೆಳೆಯ ಶಿವಕುಮಾರ್‌ ಜತೆ ಓಡಾಡುತ್ತಿದ್ದಳು. ಅಲ್ಲದೇ ಆತನ ಹೆಸರನ್ನು ಕೈ ಮೇಲೆ ಟ್ಯಾಟು ಹಾಕಿಸಿಕೊಂಡಿದ್ದಳು. ಇತ್ತೀಚೆಗೆ ಊರಿನಿಂದ ಮನೋಜ್‌ ವಾಪಸ್‌ ಬಂದಾಗ ರೋಝಿ ಭೇಟಿಯಾಗಿರಲಿಲ್ಲ.

ಆಕೆ ಮತ್ತೊಬ್ಬ ಹುಡುಗನ ಜತೆ ಓಡಾಡುತ್ತಿರುವ ವಿಷಯ ತಿಳಿದ ಮನೋಜ್‌, ಕುಪಿತಗೊಂಡು ಶಿವಕುಮಾರ್‌ ಜೊತೆ ಸುತ್ತಾಡದಂತೆ ಜೋರು ಮಾಡಿದ್ದ. ಅಲ್ಲದೇ, ಕೈ ಮೇಲಿನ ಟ್ಯಾಟು ಅಳಿಸುವಂತೆ ಸೂಚಿಸಿದ್ದ. ಇದರಿಂದ ಆಕ್ರೋಶಗೊಂಡ ರೋಝಿ, ತನ್ನ ಸ್ನೇಹಿತರ ಜತೆಗೆ ಸೇರಿ ಮನೋಜ್‌ ಕೊಲೆಗೆ ಸಂಚು ರೂಪಿಸಿದ್ದಳು. ಅ.24ರ ರಾತ್ರಿ ಮಾತನಾಡಬೇಕೆಂದು ಕರೆಸಿ ಮನೋಜ್‌ನನ್ನು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ