ಬೆಂಗಳೂರು: ಪಶ್ಚಿಮ ಡಿಸಿಪಿ ವಿಭಾಗದ ಸವೀರ್ಸ್ ರಿವಾಲ್ವರ್ಗಳು ಮತ್ತೆ ಸದ್ದು ಮಾಡಿದ್ದು, ಜು.25ರಂದು ಚೋಳರಪಾಳ್ಯ ಕಾಂಗ್ರೆಸ್ ಕಚೇರಿ ಮೇಲೆ ದಾಳಿ ಮಾಡಿದ್ದ ರೌಡಿಶೀಟರ್ ಶಶಿಕಿರಣ್ ಅಲಿಯಾಸ್ ಕಿರ್ಬನ ಕಾಲಿಗೆ ಗುಂಡು ಹೊಡೆದು ಬಂಧಿಸಲಾಗಿದೆ.
ಕೆ.ಪಿ.ಅಗ್ರಹಾರ ಠಾಣೆ ಇನ್ಸ್ಪೆಕ್ಟರ್ ಮಂಜು ನೇತೃತ್ವದ ತಂಡ ಆರೋಪಿಯ ಬಲಗಾಲಿಗೆ ಗುಂಡು ಹೊಡೆದು ಬಂಧಿಸುವುದರಲ್ಲಿ ಯಶಸ್ವಿಯಾಗಿದ್ದು , ಈ ಮುಖಾಮುಖಿ ವೇಳೆ ಮುಖ್ಯಪೇದೆ ನಾಗರಾಜ್ ಅವರಿಗೆ ಗಾಯಗಳಾಗಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ರೌಡಿ ಕಿರ್ಬ ಮೈಸೂರಿನ ಗುಂಡೂರಾವ್ನಗರದ ನಿವಾಸಿಯಾಗಿದ್ದು, ಬೆಂಗಳೂರಿನಲ್ಲಿ ಸುಲಿಗೆ, ದರೋಡೆ ಸೇರಿದಂತೆ ಹಲವು ಅಪರಾಧ ಕೃತ್ಯಗಳಲ್ಲಿ ತೊಡಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಜು.25ರಂದು ಕೆ ಪಿ ಅಗ್ರಹಾರ ಠಾಣೆ ವ್ಯಾಪ್ತಿಯ ಚೋಳರಪಾಳ್ಯದ ಬ್ಲಾಕ್ ಕಾಂಗ್ರೆಸ್ ಕಚೇರಿ ಮೇಲೆ ದಾಳಿ ನಡೆಸಿದ್ದ ಹತ್ತು ಮಂದಿಯ ಗ್ಯಾಂಗ್ ಕಚೇರಿ ಸಿಬ್ಬಂದಿಯೊಬ್ಬನಿಗೆ ಮಚ್ಚಿನಿಂದ ಹೊಡೆದು ಪೀಠೋಪಕರಣಗಳನ್ನು ಧ್ವಂಸ ಮಾಡಿತ್ತು. ಕಚೇರಿ ಮುಂದೆ ನಿಂತಿದ್ದ ವಾಹನಗಳನ್ನೂ ಜಖಂಗೊಳಿಸಿತ್ತು. ಈ ದೃಶ್ಯ ಕಚೇರಿಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಸ್ಥಳೀಯವಾಗಿ ತಮ್ಮ ಪ್ರಭಾವ ಹೆಚ್ಚಿಸಿಕೊಂಡು ಸುಲಿಗೆ ಮಾಡಲು ಕೊಳ್ಳಲು ದುಷ್ಕರ್ಮಿಗಳು ಕೃತ್ಯ ಎಸಗಿದ್ದರು ಎನ್ನುವ ಸಂಗತಿ ತನಿಖೆ ವೇಳೆ ಕೆ.ಪಿ.ಅಗ್ರಹಾರ ಠಾಣೆ ಪೊಲೀಸರಿಗೆ ಸಿಕ್ಕಿತ್ತು.
ದಾಳಿಯನ್ನು ಗಂಭೀರವಾಗಿ ಪರಿಗಣಿಸಿದ್ದ ಡಿಸಿಪಿ ರವಿ ಚೆನ್ನಣ್ಣನವರ್ ಆರೋಪಿಗಳ ಪತ್ತೆಗೆ ಕೆ.ಪಿ.ಅಗ್ರಹಾರ ಠಾಣೆ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿದ್ದರು. ಈ ತಂಡ ಕಾರ್ಯಾಚರಣೆಗೆ ಇಳಿದಾಗ ದಾಳಿಯ ಪ್ರಮುಖ ರೂವಾರಿ ರೌಡಿ ಕಿರ್ಬ ವಿಜಯನಗರದಲ್ಲಿ ಅಡಗಿದ್ದಾನೆ ಎನ್ನುವ ಮಾಹಿತಿ ಸಿಕ್ಕಿತ್ತು.
ಅದರಂತೆ ಆ ಸ್ಥಳದ ಮೇಲೆ ದಾಳಿ ನಡೆಸಿದಾಗ ಆರೋಪಿ ಪರಾರಿಯಾಗಿದ್ದ. ಜು.28ರ ಮಧ್ಯರಾತ್ರಿ 12.45ರ ಸುಮಾರಿಗೆ ಕೆ.ಪಿ.ಅಗ್ರಹಾರ ರೈಲು ಸೇತುವೆ ಬಳಿಯ ಬಿನ್ನಿ ಕ್ಯಾಂಟೀನ್ನಲ್ಲಿ ಆರೋಪಿ ಅಡಗಿದ್ದಾನೆ ಎನ್ನುವ ಖಚಿತ ಮಾಹಿತಿ ಮೇರೆಗೆ ಅಲ್ಲಿಗೆ ದಾಳಿ ನಡೆಸಿದ್ದರು. ತಕ್ಷಣ ತಪ್ಪಿಸಿಕೊಳ್ಳಲು ಯತ್ನಿಸಿದ ಕಿರ್ಬ ತನ್ನನ್ನು ಹಿಡಿಯಲು ಮುಂದಾಗಿದ್ದ ಮುಖ್ಯಪೇದೆ ನಾಗರಾಜ್ ಅವರ ಮೇಲೆ ಮಚ್ಚಿನಿಂದ ದಾಳಿ ಮಾಡಿದ್ದ. ಶರಣಾಗುವಂತೆ ಕೊಟ್ಟ ಸೂಚನೆಯನ್ನೂ ಲೆಕ್ಕಿಸದೆ ಈತ ದಾಳಿ ಮುಂದುವರಿಸಿದ್ದ . ಹೀಗಾಗಿ ಮೊದಲಿಗೆ ಎರಡು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದ ಇನ್ಸ್ಪೆಕ್ಟರ್ ಆ ನಂತರ ಆರೋಪಿಯ ಬಲಗಾಲಿಗೆ ಗುಂಡು ಹೊಡೆದಿದ್ದರು. ಕುಸಿದು ಬಿದ್ದ ಆತನನ್ನು ಬಂಧಿಸಿದ ಪೊಲೀಸರು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು.
ಕಾಲಿಗೆ ಹೊಕ್ಕಿದ್ದ ಗುಂಡನ್ನು ಹೊರಗೆ ತೆಗೆಯಲಾಗಿದ್ದು, ಪ್ರಾಣಾಪಾಯದಿಂದ ಬಚಾವಾಗಿದ್ದಾನೆ ಎಂದು ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
18ರಿಂದ 24 ವರ್ಷದವರು: ಆರೋಪಿ ಕಿರ್ಬ ಅಲಿಯಾಸ್ ಶಶಿಕಿರಣ್ ಮೈಸೂರು ಮೂಲದವನಾಗಿದ್ದು, ಜೈಲಿನಲ್ಲಿ ತನಗೆ ಪರಿಚಯವಾದ ಕೆ.ಪಿ.ಅಗ್ರಹಾರ ಠಾಣೆಯ ಮತ್ತೊಬ್ಬ ರೌಡಿಶೀಟರ್ ನವೀನ ಎಂಬುವನ ಸಹಚರನಾಗಿದ್ದ. ಈತನ ಜತೆ ಸೇರಿ ಬೆಂಗಳೂರಿನಲ್ಲಿ ಹಲವು ಕೃತ್ಯಗಳಲ್ಲಿ ಭಾಗಿಯಾಗಿದ್ದಾನೆ.
ಬೆಂಗಳೂರಿನಲ್ಲಿ ಖಚಿತ ನೆಲೆ ಇಲ್ಲದ ಈತ ಹೋಟೆಲ್, ಕ್ಯಾಂಟೀನ್ ಮತ್ತು ನಿರ್ಮಾಣ ಹಂತದ ಕಟ್ಟಡಗಳಲ್ಲಿ ಮಲಗುತ್ತಿದ್ದ. ವಿರೋಧಿಸಿದರೆ ಹೋಟೆಲ್ ಕೆಲಸಗಾರರಿಗೆ ಮಾರಕಾಸ್ತ್ರ ತೋರಿಸಿ ಬೆದರಿಸುತ್ತಿದ್ದ . ಈ ಗ್ಯಾಂಗಿನಲ್ಲಿರುವವರೆಲ್ಲಾ 18ರಿಂದ 26 ವರ್ಷದವರಾಗಿದ್ದು, ಎಲ್ಲರ ಬಗ್ಗೆಯೂ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕೆ.ಪಿ.ಅಗ್ರಹಾರ ಠಾಣೆ ಇನ್ಸ್ಪೆಕ್ಟರ್ ಮಂಜು ನೇತೃತ್ವದ ತಂಡ ಆರೋಪಿಯ ಬಲಗಾಲಿಗೆ ಗುಂಡು ಹೊಡೆದು ಬಂಧಿಸುವುದರಲ್ಲಿ ಯಶಸ್ವಿಯಾಗಿದ್ದು , ಈ ಮುಖಾಮುಖಿ ವೇಳೆ ಮುಖ್ಯಪೇದೆ ನಾಗರಾಜ್ ಅವರಿಗೆ ಗಾಯಗಳಾಗಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ರೌಡಿ ಕಿರ್ಬ ಮೈಸೂರಿನ ಗುಂಡೂರಾವ್ನಗರದ ನಿವಾಸಿಯಾಗಿದ್ದು, ಬೆಂಗಳೂರಿನಲ್ಲಿ ಸುಲಿಗೆ, ದರೋಡೆ ಸೇರಿದಂತೆ ಹಲವು ಅಪರಾಧ ಕೃತ್ಯಗಳಲ್ಲಿ ತೊಡಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಜು.25ರಂದು ಕೆ ಪಿ ಅಗ್ರಹಾರ ಠಾಣೆ ವ್ಯಾಪ್ತಿಯ ಚೋಳರಪಾಳ್ಯದ ಬ್ಲಾಕ್ ಕಾಂಗ್ರೆಸ್ ಕಚೇರಿ ಮೇಲೆ ದಾಳಿ ನಡೆಸಿದ್ದ ಹತ್ತು ಮಂದಿಯ ಗ್ಯಾಂಗ್ ಕಚೇರಿ ಸಿಬ್ಬಂದಿಯೊಬ್ಬನಿಗೆ ಮಚ್ಚಿನಿಂದ ಹೊಡೆದು ಪೀಠೋಪಕರಣಗಳನ್ನು ಧ್ವಂಸ ಮಾಡಿತ್ತು. ಕಚೇರಿ ಮುಂದೆ ನಿಂತಿದ್ದ ವಾಹನಗಳನ್ನೂ ಜಖಂಗೊಳಿಸಿತ್ತು. ಈ ದೃಶ್ಯ ಕಚೇರಿಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಸ್ಥಳೀಯವಾಗಿ ತಮ್ಮ ಪ್ರಭಾವ ಹೆಚ್ಚಿಸಿಕೊಂಡು ಸುಲಿಗೆ ಮಾಡಲು ಕೊಳ್ಳಲು ದುಷ್ಕರ್ಮಿಗಳು ಕೃತ್ಯ ಎಸಗಿದ್ದರು ಎನ್ನುವ ಸಂಗತಿ ತನಿಖೆ ವೇಳೆ ಕೆ.ಪಿ.ಅಗ್ರಹಾರ ಠಾಣೆ ಪೊಲೀಸರಿಗೆ ಸಿಕ್ಕಿತ್ತು.
ದಾಳಿಯನ್ನು ಗಂಭೀರವಾಗಿ ಪರಿಗಣಿಸಿದ್ದ ಡಿಸಿಪಿ ರವಿ ಚೆನ್ನಣ್ಣನವರ್ ಆರೋಪಿಗಳ ಪತ್ತೆಗೆ ಕೆ.ಪಿ.ಅಗ್ರಹಾರ ಠಾಣೆ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿದ್ದರು. ಈ ತಂಡ ಕಾರ್ಯಾಚರಣೆಗೆ ಇಳಿದಾಗ ದಾಳಿಯ ಪ್ರಮುಖ ರೂವಾರಿ ರೌಡಿ ಕಿರ್ಬ ವಿಜಯನಗರದಲ್ಲಿ ಅಡಗಿದ್ದಾನೆ ಎನ್ನುವ ಮಾಹಿತಿ ಸಿಕ್ಕಿತ್ತು.
ಅದರಂತೆ ಆ ಸ್ಥಳದ ಮೇಲೆ ದಾಳಿ ನಡೆಸಿದಾಗ ಆರೋಪಿ ಪರಾರಿಯಾಗಿದ್ದ. ಜು.28ರ ಮಧ್ಯರಾತ್ರಿ 12.45ರ ಸುಮಾರಿಗೆ ಕೆ.ಪಿ.ಅಗ್ರಹಾರ ರೈಲು ಸೇತುವೆ ಬಳಿಯ ಬಿನ್ನಿ ಕ್ಯಾಂಟೀನ್ನಲ್ಲಿ ಆರೋಪಿ ಅಡಗಿದ್ದಾನೆ ಎನ್ನುವ ಖಚಿತ ಮಾಹಿತಿ ಮೇರೆಗೆ ಅಲ್ಲಿಗೆ ದಾಳಿ ನಡೆಸಿದ್ದರು. ತಕ್ಷಣ ತಪ್ಪಿಸಿಕೊಳ್ಳಲು ಯತ್ನಿಸಿದ ಕಿರ್ಬ ತನ್ನನ್ನು ಹಿಡಿಯಲು ಮುಂದಾಗಿದ್ದ ಮುಖ್ಯಪೇದೆ ನಾಗರಾಜ್ ಅವರ ಮೇಲೆ ಮಚ್ಚಿನಿಂದ ದಾಳಿ ಮಾಡಿದ್ದ. ಶರಣಾಗುವಂತೆ ಕೊಟ್ಟ ಸೂಚನೆಯನ್ನೂ ಲೆಕ್ಕಿಸದೆ ಈತ ದಾಳಿ ಮುಂದುವರಿಸಿದ್ದ . ಹೀಗಾಗಿ ಮೊದಲಿಗೆ ಎರಡು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದ ಇನ್ಸ್ಪೆಕ್ಟರ್ ಆ ನಂತರ ಆರೋಪಿಯ ಬಲಗಾಲಿಗೆ ಗುಂಡು ಹೊಡೆದಿದ್ದರು. ಕುಸಿದು ಬಿದ್ದ ಆತನನ್ನು ಬಂಧಿಸಿದ ಪೊಲೀಸರು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು.
ಕಾಲಿಗೆ ಹೊಕ್ಕಿದ್ದ ಗುಂಡನ್ನು ಹೊರಗೆ ತೆಗೆಯಲಾಗಿದ್ದು, ಪ್ರಾಣಾಪಾಯದಿಂದ ಬಚಾವಾಗಿದ್ದಾನೆ ಎಂದು ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
18ರಿಂದ 24 ವರ್ಷದವರು: ಆರೋಪಿ ಕಿರ್ಬ ಅಲಿಯಾಸ್ ಶಶಿಕಿರಣ್ ಮೈಸೂರು ಮೂಲದವನಾಗಿದ್ದು, ಜೈಲಿನಲ್ಲಿ ತನಗೆ ಪರಿಚಯವಾದ ಕೆ.ಪಿ.ಅಗ್ರಹಾರ ಠಾಣೆಯ ಮತ್ತೊಬ್ಬ ರೌಡಿಶೀಟರ್ ನವೀನ ಎಂಬುವನ ಸಹಚರನಾಗಿದ್ದ. ಈತನ ಜತೆ ಸೇರಿ ಬೆಂಗಳೂರಿನಲ್ಲಿ ಹಲವು ಕೃತ್ಯಗಳಲ್ಲಿ ಭಾಗಿಯಾಗಿದ್ದಾನೆ.
ಬೆಂಗಳೂರಿನಲ್ಲಿ ಖಚಿತ ನೆಲೆ ಇಲ್ಲದ ಈತ ಹೋಟೆಲ್, ಕ್ಯಾಂಟೀನ್ ಮತ್ತು ನಿರ್ಮಾಣ ಹಂತದ ಕಟ್ಟಡಗಳಲ್ಲಿ ಮಲಗುತ್ತಿದ್ದ. ವಿರೋಧಿಸಿದರೆ ಹೋಟೆಲ್ ಕೆಲಸಗಾರರಿಗೆ ಮಾರಕಾಸ್ತ್ರ ತೋರಿಸಿ ಬೆದರಿಸುತ್ತಿದ್ದ . ಈ ಗ್ಯಾಂಗಿನಲ್ಲಿರುವವರೆಲ್ಲಾ 18ರಿಂದ 26 ವರ್ಷದವರಾಗಿದ್ದು, ಎಲ್ಲರ ಬಗ್ಗೆಯೂ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.