ಆ್ಯಪ್ನಗರ

ಜಲಮಂಡಳಿಗೆ 2 ಕೋಟಿ ರೂ. ಪಾವತಿಸಿದ ಸಿಂಡಿಕೇಟ್‌ ಬ್ಯಾಂಕ್‌

ಜಲಮಂಡಳಿಯ ಕಿಯೋಸ್ಕ್‌ಗಳಲ್ಲಿ ಗ್ರಾಹಕರು ಪಾವತಿಸಿದ ನೀರಿನ ಶುಲ್ಕವನ್ನು ಸಿಎಂಎಸ್‌ ಸರ್ವಿಸಸ್‌ ಸಂಸ್ಥೆ ದುರುಪಯೋಗಪಡಿಸಿಕೊಂಡ ಪ್ರಕರಣದಲ್ಲಿ ತನ್ನ ತಪ್ಪು ಅರಿತುಕೊಂಡ ಸಿಂಡಿಕೇಟ್‌ ಬ್ಯಾಂಕ್‌ 2.04 ಕೋಟಿ ರೂ. ಅನ್ನು ಜಲಮಂಡಳಿಗೆ ಪಾವತಿಸಿದೆ.

Vijaya Karnataka 24 Jun 2018, 5:00 am
ಬೆಂಗಳೂರು: ಜಲಮಂಡಳಿಯ ಕಿಯೋಸ್ಕ್‌ಗಳಲ್ಲಿ ಗ್ರಾಹಕರು ಪಾವತಿಸಿದ ನೀರಿನ ಶುಲ್ಕವನ್ನು ಸಿಎಂಎಸ್‌ ಸರ್ವಿಸಸ್‌ ಸಂಸ್ಥೆ ದುರುಪಯೋಗಪಡಿಸಿಕೊಂಡ ಪ್ರಕರಣದಲ್ಲಿ ತನ್ನ ತಪ್ಪು ಅರಿತುಕೊಂಡ ಸಿಂಡಿಕೇಟ್‌ ಬ್ಯಾಂಕ್‌ 2.04 ಕೋಟಿ ರೂ. ಅನ್ನು ಜಲಮಂಡಳಿಗೆ ಪಾವತಿಸಿದೆ.
Vijaya Karnataka Web rs 2 crore to the water level paid syndicate bank
ಜಲಮಂಡಳಿಗೆ 2 ಕೋಟಿ ರೂ. ಪಾವತಿಸಿದ ಸಿಂಡಿಕೇಟ್‌ ಬ್ಯಾಂಕ್‌


ಗ್ರಾಹಕರು ನೀರಿನ ಬಿಲ್‌ ಪಾವತಿಸಲು ಜಲಮಂಡಳಿಯು ನಗರದಲ್ಲಿ 74 ಕಿಯೋಸ್ಕ್‌ಗಳನ್ನು ನಿರ್ಮಿಸಿದೆ. ಒಟ್ಟು ಕಿಯೋಸ್ಕ್‌ಗಳ ಪೈಕಿ 46 ರಲ್ಲಿ ಸಂಗ್ರಹವಾಗುವ ಹಣ ಸಿಂಡಿಕೇಟ್‌ ಬ್ಯಾಂಕ್‌ನ ಖಾತೆಯಲ್ಲಿ ಜಮಾ ಆಗುತ್ತದೆ. ಹಣವನ್ನು ಜಮಾ ಮಾಡುವ ಕೆಲಸವನ್ನು ಸಿಂಡಿಕೇಟ್‌ ಬ್ಯಾಂಕ್‌ ತನ್ನ ಅಂಗ ಸಂಸ್ಥೆಯಾದ ಸಿಎಂಎಸ್‌ ಸರ್ವಿಸಸ್‌ಗೆ ವಹಿಸಿದೆ. ರಾಜರಾಜೇಶ್ವರಿ ನಗರದ 4 ಕಿಯೋಸ್ಕ್‌ಗಳಲ್ಲಿ ಸಂಗ್ರಹವಾಗಿದ್ದ 1.54 ಕೋಟಿ ರೂ. ಮೊತ್ತವನ್ನು ಬ್ಯಾಂಕ್‌ಗೆ ಪಾವತಿಸದ ಸಿಎಂಎಸ್‌ ನೌಕರರು, ಐಪಿಎಲ್‌ ಬೆಟ್ಟಿಂಗ್‌ ಆಡಿ ಕಳೆದುಕೊಂಡಿದ್ದರು. ಈ ಕುರಿತು ಜಲಮಂಡಳಿಯು ಹಲಸೂರು ಗೇಟ್‌ ಪೊಲೀಸ್‌ ಠಾಣೆಯಲ್ಲಿ ಸಿಂಡಿಕೇಟ್‌ ಬ್ಯಾಂಕ್‌ ವಿರುದ್ಧ ದೂರು ದಾಖಲಿಸಿತ್ತು. ತಪ್ಪಿನ ಅರಿವಾದ ಬಳಿಕ ಎಚ್ಚೆತ್ತುಕೊಂಡ ಬ್ಯಾಂಕ್‌, 2.04 ಕೋಟಿ ರೂ. ಅನ್ನು ಜಲಮಂಡಳಿಗೆ ನೀಡಿದೆ.

ರಾಜರಾಜೇಶ್ವರಿನಗರ ವ್ಯಾಪ್ತಿಯಲ್ಲಿ ಬಿಲ್‌ ಸಂಗ್ರಹಿಸುತ್ತಿದ್ದ ಸಿಎಂಎಸ್‌ ಸಂಸ್ಥೆಯ ನೌಕರರಾದ ಜೈಶಂಕರ್‌ ಮತ್ತು ಬಿ.ಸಿ.ಮೋಹನ್‌ 7 ತಿಂಗಳಲ್ಲಿ 1.54 ಕೋಟಿ ರೂ. ದುರುಪಯೋಗಪಡಿಸಿಕೊಂಡಿದ್ದರು. ಈ ಹಣವನ್ನು ಬೆಟ್ಟಿಂಗ್‌ಗೆ ಬಳಸಿಕೊಂಡಿದ್ದ ಅವರು, ಬ್ಯಾಂಕ್‌ಗೆ ಜಮಾ ಮಾಡಿರುವ ಬಗ್ಗೆ ಚಲನ್‌ ಪ್ರತಿಯನ್ನೂ ನೀಡಿದ್ದರು. ಆದರೆ ಬ್ಯಾಂಕ್‌ನ ಮಾಸಿಕ ವಿವರಣಾ ಪಟ್ಟಿಯಲ್ಲಿ ಹಣ ಜಮಾ ಆಗದಿರುವುದು ಬೆಳಕಿಗೆ ಬಂದಿತ್ತು. ಜಲಮಂಡಳಿಯು ತನಿಖೆ ನಡೆಸಿದಾಗ, ಒಟ್ಟು 2.04 ಕೋಟಿ ರೂ. ದುರುಪಯೋಗವಾಗಿದ್ದು ಬೆಳಕಿಗೆ ಬಂದಿತ್ತು.

ಸಿಂಡಿಕೇಟ್‌ ಬ್ಯಾಂಕ್‌ನಿಂದ ಹಣ ಸಂಗ್ರಹಿಸುವ ಗುತ್ತಿಗೆ ಪಡೆದಿದ್ದ ಸಿಎಂಎಸ್‌ ಸಂಸ್ಥೆ ಇದೀಗ 2.04 ಕೋಟಿ ರೂ. ಅನ್ನು ಬ್ಯಾಂಕ್‌ಗೆ ಪಾವತಿಸಬೇಕಿದೆ. ಹಣ ದುರುಪಯೋಗ ಸಂಬಂಧ ಜೈಶಂಕರ್‌ ಮತ್ತು ಬಿ.ಸಿ.ಮೋಹನ್‌ನನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ