ಆ್ಯಪ್ನಗರ

ಮುದ್ರಾ ಯೋಜನೆಯಡಿ ಸಾಲ ಕೊಡಿಸುವುದಾಗಿ ನಂಬಿಸಿ 7.12 ಲಕ್ಷ ರೂ. ವಂಚನೆ

ಕೇಂದ್ರ ಸರಕಾರದ 'ಮುದ್ರಾ' ಯೋಜನೆಯಡಿ ಸಾಲ ಕೊಡಿಸುವುದಾಗಿ ಹೇಳಿ ಮಹಿಳೆಯೊಬ್ಬರಿಗೆ ಪರಿಚಿತರು 7.12 ಲಕ್ಷ ರೂ. ವಂಚನೆ ಮಾಡಿದ್ದಾರೆ.

Vijaya Karnataka 30 May 2018, 5:00 am
ಬೆಂಗಳೂರು: ಕೇಂದ್ರ ಸರಕಾರದ 'ಮುದ್ರಾ' ಯೋಜನೆಯಡಿ ಸಾಲ ಕೊಡಿಸುವುದಾಗಿ ಹೇಳಿ ಮಹಿಳೆಯೊಬ್ಬರಿಗೆ ಪರಿಚಿತರು 7.12 ಲಕ್ಷ ರೂ. ವಂಚನೆ ಮಾಡಿದ್ದಾರೆ.
Vijaya Karnataka Web rs 7 12 lakh was believed to be lending under the mudra scheme fraud
ಮುದ್ರಾ ಯೋಜನೆಯಡಿ ಸಾಲ ಕೊಡಿಸುವುದಾಗಿ ನಂಬಿಸಿ 7.12 ಲಕ್ಷ ರೂ. ವಂಚನೆ


ವೈಟ್‌ಫೀಲ್ಡ್‌ ನಿವಾಸಿ ಕೆ. ಪುಷ್ಪಾ ಎಂಬುವವರು ವೈಟ್‌ಫೀಲ್ಡ್‌ ಪೊಲೀಸ್‌ ಠಾಣೆಯಲ್ಲಿ ವಂಚಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪುಷ್ಪಾ ಅವರು ಕಿರು ಉದ್ಯಮ ಸ್ಥಾಪನೆಗಾಗಿ ಸಾಲಕ್ಕಾಗಿ ಮೊಬೈಲ್‌ ಆ್ಯಪ್‌ ಮೂಲಕ 2017ರಲ್ಲಿ ಅರ್ಜಿ ಸಲ್ಲಿಸಿದ್ದರು. 2018ರಲ್ಲಿ ಅನಿಲ್‌ ಅಪ್ಸರ್‌ ಎಂಬಾತ ಪುಷ್ಪಾ ಅವರಿಗೆ ಕರೆ ಮಾಡಿ ತಾನು ಎಯು ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್‌ನಿಂದ ಕರೆ ಮಾಡುತ್ತಿರುವುದಾಗಿ ಪರಿಚಯಿಸಿಕೊಂಡಿದ್ದ. ಆನ್‌ಲೈನ್‌ನಲ್ಲಿ ಸಲ್ಲಿಸಿದ ಅರ್ಜಿಗೆ 21 ಲಕ್ಷ ರೂ. ಸಾಲ ದೊರೆಯುತ್ತದೆ. ಅದಕ್ಕಾಗಿ ಉದ್ಯಮ ಆರಂಭಕ್ಕೆ ಸಂಬಂಧಿಸಿದ ದಾಖಲಿಎಗಳನ್ನು ಇ ಮೇಲ್‌ ಮೂಲಕ ಕಳುಹಿಸಿಕೊಡುವಂತೆ ಹೇಳಿದ್ದ. ಅದರಂತೆ ಪುಷ್ಪಾ ಅವರು ದಾಖಲೆಗಳನ್ನು ಕಳುಹಿಸಿದ್ದ.

2018ರ ಫೆ. 17ರಂದು ಎಚ್‌ಎಎಲ್‌ ಮುಖ್ಯ ರಸ್ತೆಯ ರಾಜೇಶ್ವರಿ ಬಸ್‌ ನಿಲ್ದಾಣದ ಬಳಿ ಅನಿಲ್‌ ಶರ್ಮಾ ಎಂಬ ವ್ಯಕ್ತಿ ಪುಷ್ಪಾ ಅವರನ್ನು ಭೇಟಿ ಮಾಡಿ ಸಾಲ ಸಿಗಲು ಮುಂಗಡ ಹಣ ಪಾವತಿ ಮಾಡಬೇಕು ಎಂದು ಹೇಳಿದ್ದ. ಅದರಂತೆ ಪುಷ್ಪಾ 4 ಲಕ್ಷ ರೂ. ಕೊಟ್ಟಿದ್ದರು. ಬಳಿಕ ದಾಖಲೆಗಳ ಪರಿಶೀಲನೆಗಾಗಿ ಹೆಚ್ಚುವರಿ ಹಣ ನೀಡಬೇಕು ಎಂದು ಬ್ಯಾಂಕ್‌ನ ಅಧಿಕಾರಿಗಳು ಎಂದು ಪರಿಚಯಿಸಿಕೊಂಡ ಕರಣ್‌, ತಿವಾರಿ, ಅಂಕಿತ್‌, ವಿರಾಟ್‌, ಶ್ಯಾಮ್‌ ಲಾಲ್‌ ಎಂಬುವರು ಒತ್ತಾಯಿಸಿದ್ದರು. ಹಾಗಾಗಿ ಪುಷ್ಪಾ ಅವರು ಹಂತ ಹಂತವಾಗಿ ಒಟ್ಟು 3.12 ಲಕ್ಷ ರೂ. ಕಳುಹಿಸಿದ್ದಾರೆ. ಹಣ ಪಡೆದ ಬಳಿಕ ಆರೋಪಿಗಳು ಯಾವುದೇ ಪ್ರತಿಕ್ರಿಯೆ ನೀಡದ ಕಾರಣ , ಪುಷ್ಪಾ ಅವರು ಏಳು ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಹತ್ತಾರು ಆ್ಯಪ್‌ಗಳು !

ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಮುದ್ರಾ ಲೋನ್‌ ಹೆಸರಿನಲ್ಲಿ ಹತ್ತಾರು ಆ್ಯಪ್‌ಗಳಿವೆ. ಆದರೆ, ಸರಕಾರದ ಮುದ್ರಾ ಆ್ಯಪ್‌ ಇಲ್ಲ. ಆನ್‌ಲೈನ್‌ನಲ್ಲಿ ಅರ್ಜಿಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಲು ಹಾಗೂ ಸಾಲಕ್ಕಾಗಿ ಅರ್ಜಿ ಸಲ್ಲಿಸಲು ಪಾಲಿಸಬೇಕಾದ ಕ್ರಮಗಳ ಕುರಿತು ಅಧಿಕೃತ ವೆಬ್‌ಸೈಟ್‌ನಲ್ಲಿ ವಿವರಣೆ ನೀಡಲಾಗಿದೆ.

ನಕಲಿ ಆ್ಯಪ್‌ಗಳು ಸಾರ್ವಜನಿಕರ ಮಾಹಿತಿ ಕಳವು ಮಾಡಲು ಹಾಗೂ ದುರುಪಯೋಗಪಡಿಸಿಕೊಳ್ಳಲು ಹುಟ್ಟಿಕೊಂಡಿವೆ ಎಂದು ಗೊತ್ತಾಗಿದೆ. ಕೆಲವು ಆ್ಯಪ್‌ಗಳಲ್ಲಿ ಇದು ಅಧಿಕೃತ ಆ್ಯಪ್‌ ಅಲ್ಲ ಎಂದು ತಿಳಿಸಲಾಗಿದೆ. ಆದರೆ, ಬಹುತೇಕ ಆ್ಯಪ್‌ಗಳು ಅಧಿಕೃತ ಅಥವಾ ಅನಧಿಕೃತ ಎನ್ನುವುದನ್ನು ಘೋಷಿಸಿಕೊಂಡಿಲ್ಲ. ಹೀಗಾಗಿ, ಪುಷ್ಪಾ ಅವರ ಮಾಹಿತಿಯನ್ನು ಅನಧಿಕೃತವಾಗಿ ಸಂಗ್ರಹಿಸಿದ ಆನ್‌ಲೈನ್‌ ವಂಚಕರು, ಸಾಲ ಕೊಡಿಸುವ ಸೋಗಿನಲ್ಲಿ ಹಣ ಪಡೆದು ವಂಚಿಸಿರುವ ಸಾಧ್ಯತೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ