ಬೆಂಗಳೂರು/ಪೀಣ್ಯ ದಾಸರಹಳ್ಳಿ: ನಗರದ ಚಿಕ್ಕ ಬಾಣಾವಾರ ರೈಲು ನಿಲ್ದಾಣದ ಹಳಿಗಳ ಪಕ್ಕದಲ್ಲಿ ಯಾರೋ ಹೂತಿಟ್ಟಿದ್ದ ಪಿಸ್ತೂಲ್ವೊಂದು ತುಕ್ಕು ಹಿಡಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. 36 ದಿನಗಳ ಹಿಂದೆ ರೈಲ್ವೆ ಸಿಬ್ಬಂದಿ ಕಾಮಗಾರಿಗಾಗಿ ನೆಲ ಅಗೆಯುತ್ತಿದ್ದಾಗ ಈ ಪಿಸ್ತೂಲ್ ಪತ್ತೆಯಾಗಿದ್ದು ಈ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ.
ಕಾಲೇಜಿನ ವಿರುದ್ಧ ಪ್ರತಿಭಟನೆ ಮಾಡಿದ್ದಕ್ಕೆ 14 ಲಕ್ಷ ರೂ. ಪ್ಯಾಕೇಜಿನ ಆಫರ್ ಲೆಟರ್ ನಾಶ; ಬೆಂಗಳೂರಿನಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ
ಚಿಕ್ಕ ಬಾಣಾವಾರ ರೈಲು ನಿಲ್ದಾಣದಲ್ಲಿ ಇಟಲಿ ಮೇಡ್ ಪಿಸ್ತೂಲೊಂದು 9 ಬುಲೆಟ್ಗಳ ಸಮೇತ ಪತ್ತೆಯಾಗಿದೆ ಎನ್ನುವ ಮಾಹಿತಿ ಸಾಮಾಜಿಕ ತಾಣಗಳಲ್ಲಿ ಸೋಮವಾರ ಬೆಳಗ್ಗೆಯಿಂದ ಹರಿದಾಡಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ರೈಲ್ವೆ ಪೊಲೀಸ್ನ ಎಸ್ಪಿ, ''ಯಾರೋ ಯಾವತ್ತೋ ಪಿಸ್ತೂಲೊಂದನ್ನು ಹಳಿಗಳ ಪಕ್ಕದಲ್ಲಿ ಗುಂಡು ತೆಗೆದು ಹೂತು ಹಾಕಿದ್ದಿರಬಹುದು. ಈಗ್ಗೆ ಒಂದು ತಿಂಗಳ ಹಿಂದೆ ರೈಲ್ವೆ ಸಿಬ್ಬಂದಿ ಕಾಮಗಾರಿಗಾಗಿ ನೆಲ ಅಗೆಯುವಾಗ ಅದು ಕಾಣಿಸಿದೆ. ಸಂಪೂರ್ಣ ತುಕ್ಕು ಹಿಡಿದ ಸ್ಥಿತಿಯಲ್ಲಿ ಇದ್ದ ಪಿಸ್ತೂಲನ್ನು ಆರ್ಪಿಎಫ್ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಘಟನೆ ನಡೆದು ತಿಂಗಳಿಗೂ ಹೆಚ್ಚು ದಿನ ಆಗಿದೆ. ಆದರೆ ಯಾರೋ ಇಟಲಿ ಮೇಡ್ ಎಂದು ಸುಳ್ಳು ಸುದ್ದಿಯನ್ನು ಸಾಮಾಜಿಕ ತಾಣಗಳಲ್ಲಿ ಹರಡಿಸುತ್ತಿದ್ದಾರೆ'' ಎಂದು ತಿಳಿಸಿದ್ದಾರೆ.
ಮುಳುವಾಯ್ತು ಮುಂಗೋಪ: ಕ್ಯಾಬ್ ಡ್ರೈವರ್ ಜೊತೆ ಜಗಳವಾಡಿ ಪೊಲೀಸ್ ಪೇದೆಗೆ ಥಳಿಸಿದ ಟೆಕ್ಕಿ!
ಒಂದು ತಿಂಗಳ ಹಿಂದೆ ನೆಲ ಅಗೆಯುವಾಗ ಕಾರ್ಮಿಕ ಮುರಳಿಗೆ ಪಿಸ್ತೂಲು ಕಾಣಿಸಿತ್ತು. ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಅದನ್ನು ವಶಕ್ಕೆ ಪಡೆದಿದ್ದರು. ಆದರೆ ಬೆಂಗಳೂರಿನಲ್ಲಿ ಆತಂಕ ಸೃಷ್ಟಿಸಲು ಯಾರೋ ಕಿಡಿಗೇಡಿಗಳು ತುಕ್ಕು ಹಿಡಿದ ಪಿಸ್ತೂಲಿಗೆ ಇಟಲಿ ಪಿಸ್ತೂಲು ಎಂದು ಸಾಮಾಜಿಕ ತಾಣಗಳಲ್ಲಿ ಹರಿ ಬಿಟ್ಟಿರಬೇಕು ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
ಮೋಜಿನ ಜೀವನಕ್ಕಾಗಿ ಸುಲಿಗೆ, ಕಳ್ಳತನ: ಆರೋಪಿಗಳಿಂದ 7 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 15 ಮೊಬೈಲ್ ವಶ
ಕಾಲೇಜಿನ ವಿರುದ್ಧ ಪ್ರತಿಭಟನೆ ಮಾಡಿದ್ದಕ್ಕೆ 14 ಲಕ್ಷ ರೂ. ಪ್ಯಾಕೇಜಿನ ಆಫರ್ ಲೆಟರ್ ನಾಶ; ಬೆಂಗಳೂರಿನಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ
ಚಿಕ್ಕ ಬಾಣಾವಾರ ರೈಲು ನಿಲ್ದಾಣದಲ್ಲಿ ಇಟಲಿ ಮೇಡ್ ಪಿಸ್ತೂಲೊಂದು 9 ಬುಲೆಟ್ಗಳ ಸಮೇತ ಪತ್ತೆಯಾಗಿದೆ ಎನ್ನುವ ಮಾಹಿತಿ ಸಾಮಾಜಿಕ ತಾಣಗಳಲ್ಲಿ ಸೋಮವಾರ ಬೆಳಗ್ಗೆಯಿಂದ ಹರಿದಾಡಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ರೈಲ್ವೆ ಪೊಲೀಸ್ನ ಎಸ್ಪಿ, ''ಯಾರೋ ಯಾವತ್ತೋ ಪಿಸ್ತೂಲೊಂದನ್ನು ಹಳಿಗಳ ಪಕ್ಕದಲ್ಲಿ ಗುಂಡು ತೆಗೆದು ಹೂತು ಹಾಕಿದ್ದಿರಬಹುದು. ಈಗ್ಗೆ ಒಂದು ತಿಂಗಳ ಹಿಂದೆ ರೈಲ್ವೆ ಸಿಬ್ಬಂದಿ ಕಾಮಗಾರಿಗಾಗಿ ನೆಲ ಅಗೆಯುವಾಗ ಅದು ಕಾಣಿಸಿದೆ. ಸಂಪೂರ್ಣ ತುಕ್ಕು ಹಿಡಿದ ಸ್ಥಿತಿಯಲ್ಲಿ ಇದ್ದ ಪಿಸ್ತೂಲನ್ನು ಆರ್ಪಿಎಫ್ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಘಟನೆ ನಡೆದು ತಿಂಗಳಿಗೂ ಹೆಚ್ಚು ದಿನ ಆಗಿದೆ. ಆದರೆ ಯಾರೋ ಇಟಲಿ ಮೇಡ್ ಎಂದು ಸುಳ್ಳು ಸುದ್ದಿಯನ್ನು ಸಾಮಾಜಿಕ ತಾಣಗಳಲ್ಲಿ ಹರಡಿಸುತ್ತಿದ್ದಾರೆ'' ಎಂದು ತಿಳಿಸಿದ್ದಾರೆ.
ಮುಳುವಾಯ್ತು ಮುಂಗೋಪ: ಕ್ಯಾಬ್ ಡ್ರೈವರ್ ಜೊತೆ ಜಗಳವಾಡಿ ಪೊಲೀಸ್ ಪೇದೆಗೆ ಥಳಿಸಿದ ಟೆಕ್ಕಿ!
ಒಂದು ತಿಂಗಳ ಹಿಂದೆ ನೆಲ ಅಗೆಯುವಾಗ ಕಾರ್ಮಿಕ ಮುರಳಿಗೆ ಪಿಸ್ತೂಲು ಕಾಣಿಸಿತ್ತು. ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಅದನ್ನು ವಶಕ್ಕೆ ಪಡೆದಿದ್ದರು. ಆದರೆ ಬೆಂಗಳೂರಿನಲ್ಲಿ ಆತಂಕ ಸೃಷ್ಟಿಸಲು ಯಾರೋ ಕಿಡಿಗೇಡಿಗಳು ತುಕ್ಕು ಹಿಡಿದ ಪಿಸ್ತೂಲಿಗೆ ಇಟಲಿ ಪಿಸ್ತೂಲು ಎಂದು ಸಾಮಾಜಿಕ ತಾಣಗಳಲ್ಲಿ ಹರಿ ಬಿಟ್ಟಿರಬೇಕು ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
ಮೋಜಿನ ಜೀವನಕ್ಕಾಗಿ ಸುಲಿಗೆ, ಕಳ್ಳತನ: ಆರೋಪಿಗಳಿಂದ 7 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 15 ಮೊಬೈಲ್ ವಶ