ಆ್ಯಪ್ನಗರ

ಬಿಸಿ ಸಾಂಬಾರು ಬಿದ್ದು ಬಾಲಕ ಸಾವು

ಊಟ ಮಾಡುತ್ತಿದ್ದ ವೇಳೆ ಬಿಸಿ ಸಾಂಬಾರು ಮೈಮೇಲೆ ಚೆಲ್ಲಿ ಸುಟ್ಟ ಗಾಯಗಳಿಂದ ಆಸ್ಪತ್ರೆಗೆ ದಾಖಲಾಗಿದ್ದ ನಾಲ್ಕು ವರ್ಷದ ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಧಾರುಣ ಘಟನೆ ಜಯನಗರದಲ್ಲಿ ನಡೆದಿದೆ.

Vijaya Karnataka 4 Aug 2018, 9:52 am
ಬೆಂಗಳೂರು: ಊಟ ಮಾಡುತ್ತಿದ್ದ ವೇಳೆ ಬಿಸಿ ಸಾಂಬಾರು ಮೈಮೇಲೆ ಚೆಲ್ಲಿ ಸುಟ್ಟ ಗಾಯಗಳಿಂದ ಆಸ್ಪತ್ರೆಗೆ ದಾಖಲಾಗಿದ್ದ ನಾಲ್ಕು ವರ್ಷದ ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಧಾರುಣ ಘಟನೆ ಜಯನಗರದಲ್ಲಿ ನಡೆದಿದೆ.
Vijaya Karnataka Web suicide


ಜಯನಗರ ನಾಲ್ಕನೇ 'ಟಿ'ಬ್ಲಾಕ್‌ ನಿವಾಸಿ ಸುರೇಶ್‌ ಮತ್ತು ಆಶಾ ದಂಪತಿಯ ಪುತ್ರ ವಿವೇಕ್‌ ಮೃತ ಬಾಲಕ. ಊಟಕ್ಕೆ ಸಾರು ಹಾಕಿಕೊಳ್ಳುವುದಕ್ಕಾಗಿ ಬಿಸಿ ಸಾಂಬಾರು ತುಂಬಿದ್ದ ಪಾತ್ರೆಯನ್ನು ಎಳೆದಾಗ ಅದು ಮೈಮೇಲೆ ಬಿದ್ದಿತ್ತು.

ಶಿವಮೊಗ್ಗ ಮೂಲದ ಸುರೇಶ್‌ ದಂಪತಿ ಐದು ವರ್ಷಗಳ ಹಿಂದೆ ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬಂದಿದ್ದರು. ಸುರೇಶ್‌ ಜ್ಯೂಸ್‌ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು, ಆಶಾ ಅವರು ಜಯನಗರದ 'ಟಿ'ಬ್ಲಾಕ್‌ನಲ್ಲಿ ನೆಲೆಸಿರುವ ರಾಮಚಂದ್ರ ಎನ್ನುವವರ ಮನೆಯಲ್ಲಿ ಮನೆಗೆಲಸಕ್ಕೆ ಹೋಗುತ್ತಿದ್ದರು. ದಂಪತಿ ಉಳಿದುಕೊಳ್ಳಲು ರಾಮಚಂದ್ರ ಅವರು ತಮ್ಮ ಮನೆಯ ಕಾಂಪೌಂಡಿನಲ್ಲೇ ಇರುವ ಸಣ್ಣ ಮನೆಯಲ್ಲಿ ಅವಕಾಶ ನೀಡಿದ್ದರು. ಇದೇ ಮನೆಯಲ್ಲಿ ಅನಾಹುತ ನಡೆದಿದೆ.

ರಾಮಚಂದ್ರ ಕುಟುಂಬ ಕೆಲ ದಿನಗಳ ಹಿಂದೆ ವಿದೇಶ ಪ್ರವಾಸಕ್ಕೆ ತೆರಳಿತ್ತು. ಮನೆಯಲ್ಲಿ ಕಾರ್ಪೆಂಟರಿ ಕೆಲಸವೂ ನಡೆಯುತ್ತಿತ್ತು. ಜು.29 ರಂದು ಕಾರ್ಪೆಂಟರ್‌ಗಳು ಕೆಲಸಕ್ಕೆಂದು ಬಂದಿದ್ದರು. ಈ ವೇಳೆ ಮಗನ ಜತೆ ಊಟ ಮಾಡುತ್ತಾ ಕುಳಿತಿದ್ದ ಆಶಾ ಅವರು, ಮಾಲೀಕರ ಮನೆಯ ಬೀಗ ತೆಗೆಯಲೆಂದು ಎದ್ದು ಹೋಗಿದ್ದರು. ಊಟ ಮಾಡುತ್ತಾ ಕುಳಿತಿದ್ದ ಬಾಲಕ ಅಡುಗೆ ಮನೆ ಕಟ್ಟೆ ಮೇಲೆ ಇಟ್ಟಿದ್ದ ಬಿಸಿ ಸಾಂಬಾರಿನ ಪಾತ್ರೆಯನ್ನು ಎಳೆದಿದ್ದರಿಂದ ಅದರಲ್ಲಿದ್ದ ಸಾಂಬಾರು ಪೂರ್ತಿಯಾಗಿ ಮೈಮೇಲೆ ಚೆಲ್ಲಿತ್ತು. ಕಿರುಚಾಟ ಕೇಳಿ ಓಡಿ ಬಂದ ತಾಯಿ ಸ್ಥಳೀಯರ ನೆರವಿನಿಂದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು. ಈ ಸಂಬಂಧ ತಿಲಕ್‌ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ