ಆ್ಯಪ್ನಗರ

ಡ್ರಗ್ಸ್ ಕೇಸ್‌: ಮಾಜಿ ಸಚಿವ ರುದ್ರಪ್ಪ ಲಮಾಣಿ ಪುತ್ರ ಗೋವಾದಲ್ಲಿ ಪೊಲೀಸ್‌ ವಶಕ್ಕೆ

ಬಿಟ್ ಕಾಯಿನ್ಸ್ ಮೂಲಕ ಹಣ ಪಾವತಿಸಿ, ವಿದೇಶಗಳಿಂದ ಡ್ರಗ್ಸ್‌ ತರಿಸಿಕೊಂಡು ಮಾರಾಟ ಮಾಡುತ್ತಿದ್ದ ಆರೋಪಿಗಳಾದ ಹೇಮಂತ್ ಮತ್ತು ಸುನೀಶ್ ಎಂಬವರಿಗೆ ದರ್ಶನ್‌ ಕುಮಾರ್‌ ಲಮಾಣಿ ಆಶ್ರಯ ನೀಡಿದ್ದರು ಎನ್ನಲಾಗಿದೆ.

Vijaya Karnataka 9 Nov 2020, 3:42 pm
ಬೆಂಗಳೂರು: ಮಾದಕ ವಸ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಮಾಜಿ ಸಚಿವ ರುದ್ರಪ್ಪ ಮಾನಪ್ಪ ಲಮಾಣಿ ಪುತ್ರ ದರ್ಶನ್ ಕುಮಾರ್ ಲಮಾಣಿಯನ್ನು ಬೆಂಗಳೂರು ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಮತ್ತು ದಕ್ಷಿಣ ವಿಭಾಗ ಪೊಲೀಸರು ವಶಕ್ಕೆ ಪಡೆದಿದ್ದಾರೆ.
Vijaya Karnataka Web Drug
ಸಾಂದರ್ಭಿಕ ಚಿತ್ರ


ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪಿಗಳಿಗೆ ಆಶ್ರಯ ನೀಡಿದ ಆರೋಪದ ಮೇಲೆ ದರ್ಶನ್‌ ಲಮಾಣಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಬಿಟ್ ಕಾಯಿನ್ಸ್ ಮೂಲಕ ಹಣ ಪಾವತಿಸಿ ವಿದೇಶಗಳಿಂದ ಮಾದಕ ವಸ್ತುಗಳನ್ನು ತರಿಸಿಕೊಂಡು ಮಾರಾಟ ಮಾಡುತ್ತಿದ್ದ ಆರೋಪಿಗಳಾದ ಹೇಮಂತ್ ಮತ್ತು ಸುನೀಶ್ ಎಂಬವರಿಗೆ ದರ್ಶನ್‌ ಕುಮಾರ್‌ ಲಮಾಣಿ ಆಶ್ರಯ ನೀಡಿದ್ದರು ಎನ್ನಲಾಗಿದೆ.

ಬೆಂಗಳೂರು ಡ್ರಗ್ಸ್‌ ಪ್ರಕರಣ: ಕೇರಳ ಸಿಪಿಐ(ಎಂ) ಕಾರ್ಯದರ್ಶಿ ಬಾಲಕೃಷ್ಣ ಕೋಡಿಯೇರಿ ಪುತ್ರ ಅರೆಸ್ಟ್‌!
ಕೆಲ ದಿನಗಳ ಹಿಂದೆ ಇದೇ ಜಾಲದ ಆರೋಪಿ ಸುಜಯ್ ಎಂಬಾತನನ್ನು ಬಂಧಿಸಿ 500 ಗ್ರಾಂ ಹೈಡ್ರೋ ಗಾಂಜಾವನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದರು. ಆದರೆ ಇನ್ನಿಬ್ಬರು ಆರೋಪಿಗಳಾದ ಸುನೀಶ್ ಹಾಗೂ ಹೇಮಂತ್ ತಲೆಮರೆಸಿಕೊಂಡಿದ್ದರು.

ಇವರಿಬ್ಬರನ್ನು ಬೆನ್ನತ್ತಿ ಸೋಮವಾರ ಗೋವಾದಲ್ಲಿ ಬಂಧಿಸಲಾಗಿದ್ದು, ಇವರ ಜೊತೆಗಿಗೆ ದರ್ಶನ್‌ ಲಮಾಣಿಯೂ ಇದ್ದರು. ಅವರನ್ನೂ ವಶಕ್ಕೆ ಪಡೆಯಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ