ಆ್ಯಪ್ನಗರ

ಅಕ್ಕನನ್ನೇ ಇರಿದು ಕೊಂದ

ಪತಿಯ ನಿಧನ ಬಳಿಕ ಅಕ್ಕ ಅನೈತಿಕ ಚಟುವಟಿಕೆ ನಡೆಸುತ್ತಿದ್ದಾಳೆ ಎನ್ನುವ ಶಂಕೆಯ ಮೇಲೆ ತಮ್ಮನೇ ಚೂರಿಯಿಂದ ಇರಿದು ಕೊಲೆ ಮಾಡಿರುವ ಘಟನೆ ಹೆಣ್ಣೂರಿನಲ್ಲಿ ನಡೆದಿದೆ.

Vijaya Karnataka 21 Jul 2018, 5:00 am
ಬೆಂಗಳೂರು: ಪತಿಯ ನಿಧನ ಬಳಿಕ ಅಕ್ಕ ಅನೈತಿಕ ಚಟುವಟಿಕೆ ನಡೆಸುತ್ತಿದ್ದಾಳೆ ಎನ್ನುವ ಶಂಕೆಯ ಮೇಲೆ ತಮ್ಮನೇ ಚೂರಿಯಿಂದ ಇರಿದು ಕೊಲೆ ಮಾಡಿರುವ ಘಟನೆ ಹೆಣ್ಣೂರಿನಲ್ಲಿ ನಡೆದಿದೆ.
Vijaya Karnataka Web IMG-20180720-WA0114


ಸುಮಯ್ಯ ಶಾಹಿನ್‌ (32) ಕೊಲೆಯಾದವರು. ಆರೋಪಿ ಅತಾವುಲ್ಲಾ ಪರಾರಿಯಾಗಿದ್ದು, ಆತನ ಬಂಧನಕ್ಕೆ ಬಲೆ ಬೀಸಲಾಗಿದೆ.

ಶುಕ್ರವಾರ ನಸುಕಿನ 3.30 ರಿಂದ 4 ಗಂಟೆ ಅವಧಿಯಲ್ಲಿ ಕೊಲೆ ನಡೆದಿದ್ದು, ಈ ವೇಳೆ ಶಹತಾಬ್‌ ಎಂಬಾತನೂ ಆತನ ಜತೆಗಿದ್ದ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಪತಿಯ ನಿಧನದ ಬಳಿಕ ಸುಮಯ್ಯ ಒಂಟಿಯಾಗಿ ನೆಲೆಸಿದ್ದರು. ಇವರಿಗೆ ಹಲವರ ಜತೆ ಆತ್ಮೀಯತೆ ಇತ್ತು ಎನ್ನಲಾಗಿದೆ. ಹೀಗಾಗಿ ಅವರೆಲ್ಲರ ಸಹವಾಸದಿಂದ ದೂರ ಇರುವಂತೆ ಅತಾವುಲ್ಲಾ ಹೇಳಿದ್ದ. ಶುಕ್ರವಾರ ನಸುಕಿನ 3 ಗಂಟೆ ವೇಳೆಗೆ ಅತಾವುಲ್ಲಾ ತನ್ನ ಸ್ನೇಹಿತ ಶಹತಾಬ್‌ ಜತೆ ಬಂದು ಅದೇ ವಿಚಾರದಲ್ಲಿ ಅಕ್ಕನ ಜತೆ ಜಗಳ ಮಾಡಿದ್ದು, ಬಳಿಕ ಚಾಕುವಿನಿಂದ ಇರಿದು ಪರಾರಿಯಾಗಿದ್ದ.

ಆರೋಪಿಗಳ ಬಗ್ಗೆ ಸುಳಿವು ಸಿಕ್ಕಿದೆ. ಆದಷ್ಟು ಬೇಗ ಅವರನ್ನು ಬಂಧಿಸಲಾಗುವುದು ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ