ಆ್ಯಪ್ನಗರ

ಮೂತ್ರ ವಿಸರ್ಜಿಸುವಾಗ ತೊಡೆಗೆ ಚಾಕು ಇರಿದು ಮೊಬೈಲ್‌ ದರೋಡೆ

ಖಾಸಗಿ ಕಂಪನಿ ಉದ್ಯೋಗಿಯೊಬ್ಬರು ಖಾಲಿ ನಿವೇಶನದಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದಾಗ ಪಕ್ಕಕ್ಕೆ ಬಂದು ನಿಂತ ದುಷ್ಕರ್ಮಿಯೊಬ್ಬ ಅವರ ತೊಡೆಗೆ ಚಾಕುವಿನಿಂದ ಇರಿದು ಮೊಬೈಲ್‌ ಕಿತ್ತುಕೊಂಡು ಹೋಗಿರುವ ಘಟನೆ ಚಂದ್ರಾಲೇಔಟ್‌ ಸಮೀಪ ನಡೆದಿದೆ.

Vijaya Karnataka 31 Jan 2019, 5:00 am
ಬೆಂಗಳೂರು: ಖಾಸಗಿ ಕಂಪನಿ ಉದ್ಯೋಗಿಯೊಬ್ಬರು ಖಾಲಿ ನಿವೇಶನದಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದಾಗ ಪಕ್ಕಕ್ಕೆ ಬಂದು ನಿಂತ ದುಷ್ಕರ್ಮಿಯೊಬ್ಬ ಅವರ ತೊಡೆಗೆ ಚಾಕುವಿನಿಂದ ಇರಿದು ಮೊಬೈಲ್‌ ಕಿತ್ತುಕೊಂಡು ಹೋಗಿರುವ ಘಟನೆ ಚಂದ್ರಾಲೇಔಟ್‌ ಸಮೀಪ ನಡೆದಿದೆ.
Vijaya Karnataka Web MURDER1


ನಾಗವಾರದ ವೈಯಾಲಿಕಾವಲ್‌ ಲೇಔಟ್‌ನ ಪ್ಲಾಟಿನಂ ಪಿಲಾಸಾ ಸಮೀಪದ ಪಿಜಿಯೊಂದರಲ್ಲಿ ನೆಲೆಸಿರುವ ರತೀಶ್‌ ರಾಜೇಶ್‌ ಬಾಬು (26) ಹಲ್ಲೆಗೊಳಗಾದವರು. ಗಂಭೀರ ಗಾಯಗೊಂಡ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈಗಲ್‌ ಐಡ್ಸ್‌ ಪ್ರೈ ಲಿಮಿಟೆಡ್‌ ಕಂಪನಿ ಉದ್ಯೋಗಿ ಆಗಿರುವ ರಾಜೇಶ್‌ ಬಾಬು ಅವರು ಜ.28ರ ರಾತ್ರಿ 8 ಗಂಟೆ ಸುಮಾರಿಗೆ ಚಂದ್ರಾಲೇಔಟ್‌ನ ಬಿಡಿಎ ಪಕ್ಕದಲ್ಲಿರುವ ಖಾಲಿ ಜಾಗದಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದು. ಈ ವೇಳೆ ಇವರ ಪಕ್ಕಕ್ಕೇ ಬಂದು ನಿಂತ ದುಷ್ಕರ್ಮಿ, ಚಾಕು ತೋರಿಸಿ ಮೊಬೈಲ್‌ ಮತ್ತು ಪರ್ಸ್‌ ಕೊಡು ಎಂದು ಕೇಳಿದ್ದ. ರಾಜೇಶ್‌ ಮೊಬೈಲ್‌ ಕೊಡದೆ ಪ್ರತಿರೋಧ ವ್ಯಕ್ತಪಡಿಸಿದಾಗ ಏಕಾ ಏಕಿ ಚಾಕುವಿನಿಂದ ತೊಡೆಗೆ ಇರಿದಿದ್ದ. ದುಷ್ಕರ್ಮಿ ಜತೆ ಸೆಣಸಿ ಮೊಬೈಲ್‌ ಉಳಿಸಲು ಯತ್ನಿಸಿದರೂ ಮತ್ತೊಮ್ಮೆ ಇರಿದ ಆರೋಪಿ, ಮೊಬೈಲ್‌ ಕಿತ್ತು ಪರಾರಿಯಾಗಿದ್ದಾನೆ

ಬಳಿಕ ಸ್ವಲ್ಪ ದೂರದ ತನಕ ಬಂದ ಅವರು ಸ್ಥಳೀಯರ ನೆರವು ಪಡೆದು ಸಮೀಪದ ಫೋರ್ಟಿಸ್‌ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಚಂದ್ರಾಲೇಔಟ್‌ ಠಾಣೆ ಪೊಲೀಸರು ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡು ದರೋಡೆಕೋರನ ಬಂಧನಕ್ಕೆ ಮುಂದಾಗಿದ್ದಾರೆ. ಘಟನೆ ನಡೆದ ಸ್ಥಳವನ್ನು ಗಾಂಜಾ ವ್ಯಸನಿಗಳು ಮತ್ತು ಪುಡಿರೌಡಿಗಳು ಅಡ್ಡ ಮಾಡಿಕೊಂಡಿದ್ದಾರೆ ಎನ್ನುವ ಮಾಹಿತಿ ಪೊಲೀಸರಿಗೆ ಸಿಕ್ಕಿದ್ದು, ಅದರ ಅನ್ವಯ ತನಿಖೆ ಮುಂದುವರಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ