ಆ್ಯಪ್ನಗರ

ಬೆಂಗಳೂರು: ಶಾಲೆಗೆ ಪೋಷಕರನ್ನ ಕರೆದುಕೊಂಡು ಬಾ ಎಂದಿದ್ದಕ್ಕೆ ವಿದ್ಯಾರ್ಥಿ ಆತ್ಮಹತ್ಯೆ, ಆಟೋ ಡ್ರೈವರ್ ಹತ್ಯೆ

ನಗರದಲ್ಲಿ ನಡೆದ ಎರಡು ಪ್ರತ್ಯೇಕ ಘಟನೆಯಲ್ಲಿ ಎರಡು ಜೀವಗಳು ಬಲಿಯಾಗಿವೆ. ವಿದ್ಯಾರ್ಥಿಯೊಬ್ಬ ಕ್ಷುಲ್ಲಕ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದರೆ, ಆಟೋ ಡ್ರೈವರ್ ಒಬ್ಬನಿಗೆ ಚಾಕು ಇರಿದು ಕೊಲೆ ಮಾಡಲಾಗಿದೆ.

Vijaya Karnataka Web 12 Dec 2019, 2:35 pm
ಬೆಂಗಳೂರು: ನಗರದಲ್ಲಿ ನಡೆದ ಎರಡು ಪ್ರತ್ಯೇಕ ಘಟನೆಯಲ್ಲಿ ಎರಡು ಜೀವಗಳು ಬಲಿಯಾಗಿವೆ. ಒಂದು ಪ್ರಕರಣ ದೊಮ್ಮಲೂರು ಲೇಔಟ್ ನಲ್ಲಿ ನಡೆದಿದ್ದರೆ ಮತ್ತೊಂದು ರಾಜೀವ್ ಗಾಂಧಿ ಲೇಔಟ್ ನಲ್ಲಿ ನಡೆದಿದೆ.
Vijaya Karnataka Web bengaluru


ದೊಮ್ಮಲೂರು ಲೇಔಟ್ ನಲ್ಲಿ ಶಾಲೆಗೆ ಆಗಾಗ ತಪ್ಪಿಸಿಕೊಳ್ತಾ ಇದ್ದ ವೇಣುಗೋಪಾಲ್ ಗೆ ಶಾಲಾ ಶಿಕ್ಷಕರು ಪೋಷಕರನ್ನು ಕರೆತರುವಂತೆ ಹೇಳಿದ್ದಾರೆ. ಹೀಗಾಗಿ ಭಯ ಬಿದ್ದ ವಿದ್ಯಾರ್ಥಿ ವೇಣುಗೋಪಾಲ್( 12 ) ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಹಿನ್ನೆಲೆಯಲ್ಲಿ ಮೃತ ವಿದ್ಯಾರ್ಥಿಯ ಪೋಷಕರು ಶಾಲೆ ಬಳಿ ತೆರಳಿ ಗಲಾಟೆ ಮಾಡುತ್ತಿದ್ದು, ಹಲಸೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಚಾಕುವಿನಿಂದ ಇರಿದು ಆಟೋ ಡ್ರೈವರ್ ನ ಹತ್ಯೆ:
ಚಾಕುವಿನಿಂದ ಇರಿದು ಆಟೋ ಡ್ರೈವರ್ ಒಬ್ಬರನ್ನು ಹತ್ಯೆ ಮಾಡಿರುವ ಘಟನೆ ಬುಧವಾರ ರಾತ್ರಿ ರಾಜೀವ್ ಗಾಂಧಿ ಲೇಔಟ್ ನಲ್ಲಿ ನಡೆದಿದೆ. ಕೊಲೆಯಾದ ಆಟೋ ಡ್ರೈವರ್ ಅನ್ನು ರಘು( 28) ಎಂದು ಗುರುತಿಸಲಾಗಿದ್ದು ಈತ ಲಗೇಜ್ ಆಟೋ ಚಾಲಕನಾಗಿದ್ದ. ನಂದಿನಿಲೇಔಟ್ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆ. ಘಟನೆಗೆ ಕಾರಣ ತಿಳಿದುಬಂದಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ