ಆ್ಯಪ್ನಗರ

ಗಾಂಜಾ ಬೀಜ ಮಾರುತ್ತಿದ್ದ ಸುಡಾನ್‌ ಪ್ರಜೆ ಬಂಧನ

ಗಾಂಜಾ ಬೀಜ ಮಾರುತ್ತಿದ್ದ ಸುಡಾನ್‌ ಪ್ರಜೆಯನ್ನು ಬಂಧಿಸಿರುವ ಸೋಲದೇವನಹಳ್ಳಿ ಪೊಲೀಸರು, 480 ಗ್ರಾಂ ಗಾಂಜಾ ಬೀಜ ಜಪ್ತಿ ಮಾಡಿದ್ದಾರೆ.

Vijaya Karnataka Web 23 Jan 2019, 5:00 am
ಬೆಂಗಳೂರು: ಗಾಂಜಾ ಬೀಜ ಮಾರುತ್ತಿದ್ದ ಸುಡಾನ್‌ ಪ್ರಜೆಯನ್ನು ಬಂಧಿಸಿರುವ ಸೋಲದೇವನಹಳ್ಳಿ ಪೊಲೀಸರು, 480 ಗ್ರಾಂ ಗಾಂಜಾ ಬೀಜ ಜಪ್ತಿ ಮಾಡಿದ್ದಾರೆ.
Vijaya Karnataka Web ganja leaf


ಸಿಡೇದಹಳ್ಳಿಯಲ್ಲಿ ವಾಸವಿದ್ದ ಮಹಮ್ಮದ್‌ ಮೂಸ (26) ಬಂಧಿತ ಆರೋಪಿ. ವ್ಯಾಸಂಗದ ವೀಸಾ ಪಡೆದು 2011ರಲ್ಲಿ ಭಾರತಕ್ಕೆ ಬಂದಿದ್ದ ಮಹಮ್ಮದ್‌, ಖಾಸಗಿ ಕಾಲೇಜಿನಲ್ಲಿ 2 ವರ್ಷ ಎಂಜಿನಿಯರಿಂಗ್‌ ಓದಿ ಅರ್ಧಕ್ಕೆ ನಿಲ್ಲಿಸಿದ ಬಳಿಕ ಅಕ್ರಮವಾಗಿ ಭಾರತದಲ್ಲೇ ನೆಲೆಸಿದ್ದ. ಈತನ ವಿರುದ್ಧ ತಮ್ಮದೇ ದೇಶದ ಪ್ರಜೆಗಳ ಮೇಲೆ ಹಲ್ಲೆ ಮಾಡಿದ ಆರೋಪದಲ್ಲಿ 3 ಕೇಸ್‌ಗಳು ದಾಖಲಾಗಿವೆ. ಈ ಹಿನ್ನೆಲೆಯಲ್ಲಿ ದೇಶ ಬಿಟ್ಟು ಹೋಗದಂತೆ ನ್ಯಾಯಾಲಯ ಸೂಚನೆ ನೀಡಿತ್ತು. ಆದರೂ ಭಾರತದಲ್ಲೇ ನೆಲೆಸಿದ್ದ ಆರೋಪಿ, ಗಾಂಜಾ ಮಾರಾಟ ದಂಧೆಯಲ್ಲಿ ತೊಡಗಿದ್ದ ಎಂದು ಪೊಲೀಸರು ತಿಳಿಸಿದರು.

ಇತ್ತೀಚೆಗೆ ಆಚಾರ್ಯ ಕಾಲೇಜು ರಸ್ತೆಯಲ್ಲಿ ಗಾಂಜಾ ಬೀಜವನ್ನು ಮಾರುತ್ತಿರುವ ಕುರಿತು ಮಾಹಿತಿ ಆಧರಿಸಿ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ''ಕಮ್ಮನಹಳ್ಳಿಯಲ್ಲಿ ಯಾರೋ ತನಗೆ ಕೊಟ್ಟಿದ್ದು ಎಂದು ಹೇಳುತ್ತಿದ್ದಾನೆ. ಈ ಕುರಿತು ವಿಚಾರಣೆ ನಡೆದಿದೆ,'' ಎಂದು ಪೊಲೀಸರು ತಿಳಿಸಿದರು.

10 ಕೆ.ಜಿ ಗಾಂಜಾ ಜಪ್ತಿ: ಮತ್ತೊಂದು ಪ್ರಕರಣದಲ್ಲಿ ಎಫ್‌ಟಿಐ ವೃತ್ತದ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ತಮಿಳುನಾಡು ಮೂಲದ ಕೆ.ದಿವಾಕರ್‌(21) ಮತ್ತು ಎಂ.ಶ್ರೀರಾಮ್‌(19) ಎಂಬುವರನ್ನು ಬಂಧಿಸಿರುವ ನಂದಿನಿ ಲೇಔಟ್‌ ಪೊಲೀಸರು, 10 ಕೆ.ಜಿ ಗಾಂಜಾ ಜಪ್ತಿ ಮಾಡಿದ್ದಾರೆ.

ತಮಿಳುನಾಡಿನಲ್ಲಿ ಬಿಎಸ್ಸಿ ಓದುತ್ತಿರುವ ಆರೋಪಿಗಳು, ಐಷಾರಾಮಿ ಜೀವನಕ್ಕೆ ಹಣ ಗಳಿಸಲು ಗಾಂಜಾ ಮಾರಾಟ ಮತ್ತು ಸಾಗಣೆಯಲ್ಲಿ ತೊಡಗಿದ್ದರು. ತಮಿಳುನಾಡಿನಿಂದ ನಗರಕ್ಕೆ ಗಾಂಜಾ ತಂದು ಚಿಲ್ಲರೆಯಾಗಿ ಮಾರಾಟ ಮಾಡುವ ವ್ಯಕ್ತಿಗಳಿಗೆ ಮಾರಾಟ ಮಾಡುತ್ತಿದ್ದರು. ಥೇನಿ ಜಿಲ್ಲೆಯ ಅಜಿತ್‌ ಎಂಬಾತ ನಗರದಲ್ಲಿ ಗಾಂಜಾ ಮಾರಲು ತಮ್ಮನ್ನು ಕರೆದುಕೊಂಡು ಬಂದಿದ್ದ ಎಂದು ವಿಚಾರಣೆ ವೇಳೆ ಆರೋಪಿಗಳು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ