ಆ್ಯಪ್ನಗರ

ವ್ಯಾಸಂಗಕ್ಕೆ ಬಂದಿದ್ದ ಸುಡಾನ್‌ ಪ್ರಜೆಯ ಕೊಲೆ

ಕೆ.ಜಿ. ಹಳ್ಳಿಯ ಶಾಂಪುರ ರೈಲ್ವೆ ಗೇಟ್‌ ಬಳಿ ಸೆ.27ರಂದು ತಡರಾತ್ರಿ 1 ಗಂಟೆ ಸುಮಾರಿಗೆ ರಕ್ತದ ಮಡುವಿನಲ್ಲಿಬಿದ್ದಿದ್ದ ಕ್ರಿಸ್‌ನನ್ನು ಆತನ ಸ್ನೇಹಿತರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಫಲಿಸದೆ ಶನಿವಾರ ಬೆಳಗ್ಗೆ ಆತ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Vijaya Karnataka 29 Sep 2019, 5:00 am
ವಿಕ ಸುದ್ದಿಲೋಕ ಬೆಂಗಳೂರು
Vijaya Karnataka Web sudan citizen murder
ವ್ಯಾಸಂಗಕ್ಕೆ ಬಂದಿದ್ದ ಸುಡಾನ್‌ ಪ್ರಜೆಯ ಕೊಲೆ


ನಗರದಲ್ಲಿವ್ಯಾಸಂಗ ಮಾಡಲು ಬಂದಿದ್ದ ಸುಡಾನ್‌ ಪ್ರಜೆಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ.

ಮೊನ್ಯಾಟೊಕ್‌ ಅಲಿಯಾಸ್‌ ಕ್ರಿಸ್‌ (28) ಕೊಲೆಯಾದವರು.

ಕೆ.ಜಿ. ಹಳ್ಳಿಯ ಶಾಂಪುರ ರೈಲ್ವೆ ಗೇಟ್‌ ಬಳಿ ಸೆ.27ರಂದು ತಡರಾತ್ರಿ 1 ಗಂಟೆ ಸುಮಾರಿಗೆ ರಕ್ತದ ಮಡುವಿನಲ್ಲಿಬಿದ್ದಿದ್ದ ಕ್ರಿಸ್‌ನನ್ನು ಆತನ ಸ್ನೇಹಿತರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಫಲಿಸದೆ ಶನಿವಾರ ಬೆಳಗ್ಗೆ ಆತ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಖಾಸಗಿ ಕಾಲೇಜಿನಲ್ಲಿಫಾರ್ಮಸಿ ಓದುತ್ತಿದ್ದ ಕ್ರಿಸ್‌, ಹೆಗಡೆನಗರದಲ್ಲಿಸ್ನೇಹಿತರ ಜತೆ ವಾಸವಿದ್ದ. ಗುರುವಾರ ರಾತ್ರಿ ಹೊರಗಡೆ ಹೋಗುವುದಾಗಿ ಸ್ನೇಹಿತರಿಗೆ ತಿಳಿಸಿ ಹೋಗಿದ್ದ. ಮನೆಗೆ ಮರಳುವಾಗ ರೈಲ್ವೆ ಗೇಟ್‌ ಬಳಿ ದುಷ್ಕರ್ಮಿಗಳ ಜತೆ ಜಗಳವಾಗಿದೆ. ಆಗ ಆತನಿಗೆ ಚಾಕುವಿನಿಂದ ಇರಿದ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

ಕೊಲೆಯ ಹಿಂದೆ ಸ್ಥಳೀಯರ ಕೈವಾಡ ಇರುವ ಶಂಕೆ ಇದೆ. ಕೆ.ಜಿ.ಹಳ್ಳಿ ಠಾಣೆಯಲ್ಲಿಪ್ರಕರಣ ದಾಖಲಿಸಿಕೊಂಡು ಹಂತಕರ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ