ಆ್ಯಪ್ನಗರ

ರೌಡಿ ಸುಹೇಲ್ ಹತ್ಯೆ :ಆರೋಪಿಗಳ ಬಂಧನ

ರೌಡಿ ಸುಹೇಲ್ ಕೊಲೆ ಪ್ರಕರಣ ಸಂಬಂಧ 8 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ವಿಕ ಸುದ್ದಿಲೋಕ 27 Feb 2016, 4:23 am
ಬೆಂಗಳೂರು: ರೌಡಿ ಸುಹೇಲ್ ಕೊಲೆ ಪ್ರಕರಣ ಸಂಬಂಧ 8 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
Vijaya Karnataka Web suhel rowdy murder arrested
ರೌಡಿ ಸುಹೇಲ್ ಹತ್ಯೆ :ಆರೋಪಿಗಳ ಬಂಧನ


ಮಹೇಶ, ಸುನಿಲ್, ಸರವಣ, ಮುರುಗ, ಸಂತೋಷ್,ಶಂಕರ, ಪ್ರದೀಪ ಹಾಗೂ ಅರವಿಂದ ಬಂಧಿತರು. ಹತ್ಯೆಯಾದ ಸುಹೇಲ್‌ನ ಸ್ನೇಹಿತನ ಸಹೋದರಿ ಜತೆ ಈಜಿಪುರದ ಪ್ರವೀಣ್ ಅಸಭ್ಯವಾಗಿ ವರ್ತಿಸಿದ್ದ. ಅದನ್ನು ತಿಳಿದ ಸುಹೇಲ್ ಕೋಪಗೊಂಡು ಪ್ರವೀಣ್‌ನನ್ನು ಕರೆಸಿ ಈಜಿಪುರದ ಮೈದಾನದಲ್ಲಿ ಅರೆನಗ್ನವಾಗಿ ಕಟ್ಟಿಹಾಕಿ ಅವಮಾನ ಮಾಡಿದ್ದ. ಅಲ್ಲದೆ, ಅದನ್ನು ಚಿತ್ರೀಕರಿಸಿ ವಾಟ್ಸ್ ಆ್ಯಪ್‌ನಲ್ಲಿ ಇತರರಿಗೆ ಕಳುಹಿಸಿದ್ದ.

ಈ ನಡುವೆ ತಿಲಕನಗರದ ರೌಡಿ ಮಾರ್ಟಿನ್ ಕಚೇರಿಗೆ ನುಗ್ಗಿ ಹಫ್ತಾ ಕೊಡುವಂತೆ ಬೆದರಿಕೆ ಹಾಕಿದ್ದ. ಈತನ ಉಪಟಳದಿಂದ ಬೇಸತ್ತ ಪ್ರವೀಣ್ ತನ್ನ ಸಹಚರರ ಜತೆ ಸೇರಿ ಸುಹೇಲ್‌ನನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ. ಅದೇ ರೀತಿ ಫೆ. 21ರ ರಾತ್ರಿ ಸುಹೇಲ್ ಕಾರಿನಲ್ಲಿ ಮನೆಗೆ ಹೋಗುತ್ತಿದ್ದಾಗ ಅಡ್ಡಗಟ್ಟಿ ಹತ್ಯೆ ಮಾಡಿ ಪರಾರಿಯಾಗಿದ್ದರು. ಪ್ರಕರಣ ಸಂಬಂಧ ಕಾರ್ಯಾಚರಣೆ ನಡೆಸಿದ ವೈಟ್‌ಫೀಲ್ಡ್ ಠಾಣೆ ಪೊಲೀಸರು ಒಟ್ಟು 14 ಮಂದಿಯನ್ನು ಬಂಧಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ