ಆ್ಯಪ್ನಗರ

ಪತಿಯ ಕೊಲೆಗೆ ಪ್ರತೀಕಾರ: ಕೈದಿಗಳಿಗೆ ಸುಪಾರಿ ಕೊಟ್ಟ ಪತ್ನಿ, ಜೈಲಿನಿಂದ ಪ್ಲಾನ್‌ ರೂಪಿಸಿದವರಿಗೆ ಏನಾಯ್ತು?

ಪತಿಯ ಕೊಲೆಗೆ ಪ್ರತೀಕಾರವಾಗಿ ಜೈಲಿನಲ್ಲಿರುವ ಕೈದಿಗಳಿಗೆ ಪತ್ನಿಯೊಬ್ಬರು ಸುಪಾರಿ ಕೊಟ್ಟಿರುವ ಘಟನೆ ನಡೆದಿದೆ. ಜೈಲಿನಲ್ಲಿರುವ ಕೈದಿಗಳಿಬ್ಬರು ಪ್ಲಾನ್‌ ರೂಪಿಸಿ ತಂಡವೊಂದನ್ನ ಕೊಲೆ ನಡೆಸಲು ಕಳುಹಿಸಿತ್ತು. ಆದರೆ ಪೊಲೀಸರ ಬಲೆಗೆ ಈ ಗ್ಯಾಂಗ್‌ ಬಿದ್ದಿದೆ. ಈ ಮೂಲಕ ಸತ್ಯಾಂಶ ಹೊರಬಂದಿದೆ.

Vijaya Karnataka Web 29 Jul 2020, 3:24 pm
ಬೆಂಗಳೂರು: ಪೊಲೀಸರಿಂದ ಗುಂಡೇಟು ತಿಂದು ಜೈಲು ಸೇರಿದ್ದ ಇಬ್ಬರು ಸುಪಾರಿ ಕಿಲ್ಲರ್‌ಗಳು ಜೈಲಿನೊಳಗೇ ಕುಳಿತು ಇಬ್ಬರ ಕೊಲೆಗೆ ಒಂದು ಕೋಟಿ ರೂಪಾಯಿ ಸುಪಾರಿ ಪಡೆದಿದ್ದ ಆಘಾತಕಾರಿ ಸಂಗತಿಯನ್ನು ಪಶ್ಚಿಮ ಮತ್ತು ಉತ್ತರ ಡಿಸಿಪಿ ವಿಭಾಗದ ಪೊಲೀಸರು ಬಯಲಿಗೆಳೆದಿದ್ದಾರೆ. ಮಹಾಲಕ್ಷ್ಮಿ ಲೇಔಟ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ರೌಡಿ ಲಕ್ಷ್ಮಣನ ಕೊಲೆ ಪ್ರಕರಣದಲ್ಲಿ ಗುಂಡೇಟು ತಿಂದು ಜೈಲು ಸೇರಿದ್ದ ಕ್ಯಾಟ್‌ ರಾಜ ಮತ್ತು ಹೇಮಂತ್‌ ಅಲಿಯಾಸ್‌ ಹೇಮಿ ಸುಪಾರಿ ಪಡೆದವರು.
Vijaya Karnataka Web jpg - 2020-07-29T140327.932


2018ರಲ್ಲಿ ನಡೆದಿದ್ದ ಮಾಜಿ ಕಾರ್ಪೊರೇಟರ್‌ ಗೋವಿಂದೇಗೌಡರ ಕೊಲೆಗೆ ಪ್ರತೀಕಾರವಾಗಿ ಅವರ ಪತ್ನಿ ವರಲಕ್ಷ್ಮಿ ಸುಪಾರಿ ನೀಡಿದ್ದರು. ಪತಿಯ ಕೊಲೆ ಆರೋಪಿಗಳಾದ ವಕೀಲ ಹೇಮಂತ್‌ಕುಮಾರ್‌ ಮತ್ತು ಅವರ ಸಹೋದರ ನಟರಾಜ್‌ ಕೊಲೆಗೆ ಸುಪಾರಿ ನೀಡುವ ಕುರಿತು ಮಾತುಕತೆ ನಡೆದು 25 ಲಕ್ಷ ರೂ ಸಂದಾಯವೂ ಆಗಿತ್ತು.

ಪ್ರತೀಕಾರದ ಸರಣಿ!
ಕಾಮಾಕ್ಷಿಪಾಳ್ಯ ಮತ್ತು ರಾಜಗೋಪಾಲನಗರದಲ್ಲಿ ರಾಜಕೀಯ ಪ್ರಭಾವ ಹೊಂದಿದ್ದ ಗೋವಿಂದೇಗೌಡರ ಹಾದಿಗೆ ಅಡ್ಡ ಬಂದರು ಎನ್ನುವ ಕಾರಣಕ್ಕೇ 2016ರಲ್ಲಿಇದೇ ಏರಿಯಾದ ಚಿಕ್ಕತಿಮ್ಮೇಗೌಡ ಅವರ ಕೊಲೆ ನಡೆದಿತ್ತು. ಈ ಕೊಲೆ ಮಾಡಿಸಿದ್ದೇ ಗೋವಿಂದೇಗೌಡ ಮತ್ತು ಪತ್ನಿ ವರಲಕ್ಷ್ಮಿ ಎನ್ನುವ ಸಿಟ್ಟು ಚಿಕ್ಕತಿಮ್ಮೇಗೌಡರ ಸಹೋದರರಾದ ಹೇಮಂತ್‌ ಕುಮಾರ್‌ ಮತ್ತು ನಟರಾಜ್‌ ಅವರಿಗೆ ಇತ್ತು.

ಕೋವಿಡ್‌ ಆತಂಕದ ನಡುವೆಯೂ ಸಿಇಟಿ ಪರೀಕ್ಷೆ; ಪರೀಕ್ಷಾ ಕೇಂದ್ರ ಪರಿಶೀಲಿಸಿದ ಸಿ.ಎನ್. ಅಶ್ವತ್ಥನಾರಾಯಣ

ಇದೇ ದ್ವೇಷದಿಂದಲೇ ಅಣ್ಣ ಕೊಲೆಯಾದ ಎರಡು ವರ್ಷಕ್ಕೆ ಸರಿಯಾಗಿ ಗೋವಿಂದೇಗೌಡರ ಹತ್ಯೆಗೂ ಸಹೋದರರು ಕಾರಣರಾಗಿದ್ದರು. ಗೋವಿಂದೇಗೌಡರ ಕೊಲೆ ಪ್ರಕರಣದಲ್ಲಿ ನಾಲ್ಕೇ ತಿಂಗಳಿಗೆ ಜಾಮೀನು ಪಡೆದು ಜೈಲಿನಿಂದ ಹೊರಗೆ ಬಂದಿದ್ದ ಹೇಮಂತ್‌ ಮತ್ತು ನಟರಾಜ್‌ ಅವರ ಕೊಲೆಗೆ ಸ್ಕೆಚ್‌ ರೂಪಿಸಲಾಗಿತ್ತು.

ಗ್ಯಾಂಗ್‌ ಬಂಧನ!
ಸುಪಾರಿ ಪಡೆದಿದ್ದ ಕ್ಯಾಟ್‌ ರಾಜ ಮತ್ತು ಹೇಮಿ ಸಹೋದರರಿಬ್ಬರ ಕೊಲೆಗೆ ತಂಡವನ್ನು ಕಟ್ಟಿ ಫೀಲ್ಡಿಗೆ ಇಳಿಸಿದ್ದರು. ರಾಜಗೋಪಾಲನಗರ ಠಾಣೆ ಪೊಲೀಸರು ಜು.27 ರ ರಾತ್ರಿ ಗಸ್ತಿನಲ್ಲಿದ್ದಾಗ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಗ್ಯಾಂಗ್‌ ಸಿಕ್ಕಿ ಬಿದ್ದಿತ್ತು.

ಮಾರಕಾಸ್ತ್ರಗಳ ಸಮೇತ ಸಜ್ಜಾಗಿದ್ದ ಈ ತಂಡವನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ತಾವು ಸುಪಾರಿ ಕಿಲ್ಲರ್‌ಗಳು ಎನ್ನುವುದನ್ನು ಒಪ್ಪಿಕೊಂಡಿರುವ ಗ್ಯಾಂಗ್‌, ಎಲ್ಲಾ ಸಂಗತಿಯನ್ನೂ ಪೊಲೀಸರ ಎದುರು ಬಾಯ್ಬಿಟ್ಟಿದೆ. ಇನ್ನು ಸುಪಾರಿ ಗ್ಯಾಂಗ್‌ ಸಿಕ್ಕಿ ಬಿದ್ದ ಕೂಡಲೇ ವರಲಕ್ಷ್ಮಿಯ ಫೋನ್‌ 'ವ್ಯಾಪ್ತಿ ಪ್ರದೇಶದಿಂದ ಹೊರಗಿದೆ' ಎಂಬ ಸಂದೇಶ ರವಾನಿಸುತ್ತಿದೆ. ಕಾಮಾಕ್ಷಿಪಾಳ್ಯ ಮತ್ತು ರಾಜಗೋಪಾಲನಗರ ಠಾಣೆ ಪೊಲೀಸರು ಈಕೆಗಾಗಿ ಹುಡುಕಾಟ ನಡೆಸುತ್ತಿದ್ದು, ಇದುವರೆಗೂ ಪತ್ತೆಯಾಗಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ