ಆ್ಯಪ್ನಗರ

ಉಂಡ ಮನೆಗೆ ಕನ್ನ ಹಾಕಿದವನ ಬಂಧನ; ₹1 ಕೋಟಿ ಮೌಲ್ಯದ ಚಿನ್ನಾಭರಣ ವಶ..!

ಎ.ಜಿ ರಸ್ತೆಯಲ್ಲಿರುವ ನವರತನ್‌ ಜುವೆಲ್ಲರಿಯಲ್ಲಿ ಸುಮಾರು 6 ವರ್ಷಗಳಿಂದ ಲಂಬೋಧರ ಕೆಲಸ ಮಾಡಿಕೊಂಡಿದ್ದ. ಮಳಿಗೆಯ ಎಲ್ಲ ವಹಿವಾಟುಗಳನ್ನು ಕಂಪ್ಯೂಟರೀಕರಣ ಮಾಡಲಾಗಿದ್ದು, ಅದನ್ನು ಲಂಬೋಧರ ನಿರ್ವಹಿಸುತ್ತಿದ್ದ. ಕಂಪ್ಯೂಟರ್‌ನಲ್ಲಿಅಪ್‌ಲೋಡ್‌ ಮಾಡುವ ವೇಳೆ ತಿದ್ದುಪಡಿ ಮಾಡಿ ಮಾಲೀಕರಿಗೆ ಗೊತ್ತಾಗದಂತೆ ದ್ರೋಹ ಎಸಗಿ ಕೆ.ಜಿ ಗಟ್ಟಲೆ ಚಿನ್ನಾಭರಣ ಸಂಗ್ರಹಿಸಿ ಒಡಿಶಾಗೆ ಪರಾರಿಯಾಗಿದ್ದ.

Vijaya Karnataka Web 6 Nov 2020, 9:26 am
ಬೆಂಗಳೂರು: ಕೆಲಸ ಮಾಡುತ್ತಿದ್ದ ಆಭರಣ ಮಳಿಗೆ ಮಾಲೀಕರಿಗೆ ಗೊತ್ತಾಗದಂತೆ ಕೋಟ್ಯಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಕಬ್ಬನ್‌ ಪಾರ್ಕ್ ಪೊಲೀಸರು ಬಂಧಿಸಿದ್ದಾರೆ.
Vijaya Karnataka Web police sketch


ಬಂಧಿತ ಆರೋಪಿಯಿಂದ 1 ಕೋಟಿ ರೂ. ಮೌಲ್ಯದ 1.5 ಕೆ.ಜಿ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಒಡಿಶಾ ಮೂಲದ ಲಂಬೋಧರ ಬಿಸ್ವಾಲ್‌ (22) ಬಂಧಿತ ಆರೋಪಿಯಾಗಿದ್ದು, ಈತ ಎ.ಜಿ ರಸ್ತೆಯಲ್ಲಿರುವ ನವರತನ್‌ ಜುವೆಲ್ಲರಿಯಲ್ಲಿ ಸುಮಾರು 6 ವರ್ಷಗಳಿಂದ ಲಂಬೋಧರ ಕೆಲಸ ಮಾಡಿಕೊಂಡಿದ್ದ. ಆರಂಭದಲ್ಲಿ ಹೆಲ್ಪರ್‌ ಆಗಿ ಸೇರಿದ್ದ ಆರೋಪಿ ನಂತರ ಕೆಲಸ ಕಲಿತು ಕಂಪ್ಯೂಟರ್‌ ಆಪರೇಟರ್‌ ಹಾಗೂ ಸೇಲ್ಸ್‌ ಮ್ಯಾನೇಜರ್‌ ಆಗಿದ್ದು, ಅಕ್ಕಸಾಲಿಗರಿಂದ ಆಭರಣಗಳನ್ನು ಮಾಡಿಸಿಕೊಂಡು ಮಾಡುತ್ತಿದ್ದ.

ಮುಂಬೈ ಮೂಲದ ಯುವತಿಗೆ ಬೆಂಗಳೂರಿನಲ್ಲಿ ಮಾಡೆಲಿಂಗ್‌ ಕೆಲಸ ಕೊಡಿಸುವುದಾಗಿ ವಂಚನೆ..!

ಮಳಿಗೆಯ ಎಲ್ಲ ವಹಿವಾಟುಗಳನ್ನು ಕಂಪ್ಯೂಟರೀಕರಣ ಮಾಡಲಾಗಿದ್ದು, ಅದನ್ನು ಲಂಬೋಧರ ನಿರ್ವಹಿಸುತ್ತಿದ್ದ. ಆಭರಣಗಳನ್ನು ಮಾಡಿಸಿಕೊಂಡು ಬರುವುದು, ಮಾರಾಟ ಸೇರಿದಂತೆ ಎಲ್ಲ ಮಾಹಿತಿಯನ್ನು ಕಂಪ್ಯೂಟರ್‌ನಲ್ಲಿಅಪ್‌ಲೋಡ್‌ ಮಾಡುವ ವೇಳೆ ತಿದ್ದುಪಡಿ ಮಾಡಿ ಮಾಲೀಕರಿಗೆ ಗೊತ್ತಾಗದಂತೆ ದ್ರೋಹ ಎಸಗಿ ಕೆ.ಜಿ ಗಟ್ಟಲೆ ಚಿನ್ನಾಭರಣ ಸಂಗ್ರಹಿಸಿ ಒಡಿಶಾಗೆ ಪರಾರಿಯಾಗಿದ್ದ.

ಮಹಿಳೆಯರಿಗೆ ಪ್ರಜ್ಞೆ ತಪ್ಪಿಸಿ ಲೈಂಗಿಕ ಕಿರುಕುಳ, ವಿಡಿಯೋ ಮಾಡಿ ಬ್ಲಾಕ್‌ ಮೇಲ್: ಆರೋಪಿ

ಈ ಸಂಬಂಧ ಜುವೆಲ್ಲರಿ ಉದ್ಯೋಗಿ ಲಕ್ಷ್ಮೀನಾರಾಯಣ ಕಬ್ಬನ್‌ ಪಾರ್ಕ್ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಒಡಿಶಾದ ಭುವನೇಶ್ವರಕ್ಕೆ ತೆರಳಿ ಆರೋಪಿಯನ್ನು ಕರೆ ತಂದಿದ್ದಾರೆ. ಮೋಜು ಮತ್ತು ದುಶ್ಚಟಗಳಿಗಾಗಿ ಆರೋಪಿಯು ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಮಳಿಗೆಗೆ ದ್ರೋಹ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ