ಆ್ಯಪ್ನಗರ

ಬೈಕ್‌ನಲ್ಲಿ ಬಂದ ನಾಲ್ವರಿಂದ ಮೂವರು ಮಹಿಳೆಯರ ದರೋಡೆ

ಬೈಕ್‌ನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಮೂವರು ಮಹಿಳೆಯರನ್ನು ಸುತ್ತುವರಿದು ದರೋಡೆ ನಡೆಸಿರುವ ಬಗ್ಗೆ ಕೊಡಿಗೇಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Vijaya Karnataka 24 Jan 2019, 5:00 am
ಬೆಂಗಳೂರು : ಬೈಕ್‌ನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಮೂವರು ಮಹಿಳೆಯರನ್ನು ಸುತ್ತುವರಿದು ದರೋಡೆ ನಡೆಸಿರುವ ಬಗ್ಗೆ ಕೊಡಿಗೇಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Vijaya Karnataka Web thiefs snatched chain
ಬೈಕ್‌ನಲ್ಲಿ ಬಂದ ನಾಲ್ವರಿಂದ ಮೂವರು ಮಹಿಳೆಯರ ದರೋಡೆ


ರೈಲು ನಿಲ್ದಾಣಕ್ಕೆ ಹೋಗಲು ಆಟೊಗಾಗಿ ಕಾಯುತ್ತಿದ್ದಾಗ ವಿಳಾಸ ಕೇಳುವ ನೆಪದಲ್ಲಿ ಬಂದ ದುಷ್ಕರ್ಮಿಗಳು ಕೃತ್ಯವೆಸಗಿ ಪರಾರಿಯಾಗಿದ್ದಾರೆ. ಮಂಗಳವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ಬ್ಯಾಂಕ್‌ ಉದ್ಯೋಗಿ ಶಂಕರಮ್ಮ ಎನ್ನುವವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆಗೆ ತಂಡ ರಚಿಸಿದ್ದಾರೆ.

ನಡೆದದ್ದೇನು?


ಆರ್‌.ಟಿ.ನಗರದ ಸಮೀಪ ಇರುವ ಮನೋರಾಯನಪಾಳ್ಯದ ನಿವಾಸಿ ಶಂಕರಮ್ಮ ಅವರ ಹತ್ತಿರದ ಸಂಬಂಧಿಯೊಬ್ಬರು ವೆಲ್ಲೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಇವರನ್ನು ನೋಡಿಕೊಂಡು ಬರುವ ಸಲುವಾಗಿ ತಮ್ಮ ಇಬ್ಬರು ಸಂಬಂಧಿ ಜತೆಗೆ ವೆಲ್ಲೂರಿಗೆ ಹೊರಟಿದ್ದ ಶಂಕರಮ್ಮ ರೈಲು ನಿಲ್ದಾಣಕ್ಕೆ ಹೋಗಲು ಸುಲ್ತಾನ್‌ಪಾಳ್ಯ ಮುಖ್ಯರಸ್ತೆಯ ಟಿಂಬರ್‌ ಯಾರ್ಡ್‌ ಬಳಿ ಆಟೊಗಾಗಿ ಕಾಯುತ್ತಿದ್ದರು. ಈ ವೇಳೆ ಎರಡು ಬೈಕ್‌ಗಳಲ್ಲಿ ನಾಲ್ವರು ದುಷ್ಕರ್ಮಿಗಳು, ಇವರ ಸಮೀಪ ಬಂದಿದ್ದರು. ಮೊದಲಿಗೆ ಇಬ್ಬರು ಬಂದು ವಿಳಾಸ ಕೇಳುವವರಂತೆ ಚೀಟಿಯನ್ನು ಶಂಕರಮ್ಮ ಅವರ ಕೈಗೆ ಕೊಟ್ಟಿದ್ದರು. ಇವರು ವಿಳಾಸ ನೋಡುತ್ತಿದ್ದ ಹೊತ್ತಲ್ಲೇ ಉಳಿದಿಬ್ಬರೂ ಬೈಕ್‌ನಿಂದ ಇಳಿದು ಬಂದು ಮೂವರೂ ಮಹಿಳೆಯರನ್ನು ಸುತ್ತುವರಿದು ಚಾಕು ತೋರಿಸಿ ಕಿರುಚಿಕೊಳ್ಳದಂತೆ ಹೆದರಿಸಿದ್ದಾಗಿ ದೂರು ದಾಖಲಾಗಿದೆ.

ಮೂವರು ಮಹಿಳೆಯರಲ್ಲಿ ಶಂಕರಮ್ಮ ಅವರ ಕುತ್ತಿಗೆಯಲ್ಲಿ ಮಾತ್ರ ಚಿನ್ನದ ಸರವಿತ್ತು. ಅದನ್ನೇ ಕಿತ್ತುಕೊಂಡು ಉಳಿದಿಬ್ಬರು ಮಹಿಳೆಯರ ಬಳಿ ಹಣ ಕಿತ್ತುಕೊಂಡು ಆರೋಪಿಗಳು ಪರಾರಿಯಾಗಿದ್ದಾರೆ. ಪೊಲೀಸರು ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ