ಆ್ಯಪ್ನಗರ

ನಡುರಸ್ತೆಯಲ್ಲಿ ಅಟ್ಟಾಡಿಸಿ ಸ್ನೇಹಿತನನ್ನೇ ಕೊಂದಿದ್ದ ಆರೋಪಿಗಳು 24 ಗಂಟೆಯೊಳಗೆ ಅರೆಸ್ಟ್

ವೈಯಕ್ತಿಕ ಕಾರಣದಿಂದ ನಡುರಸ್ತೆಯಲ್ಲಿ ಅಟ್ಟಾಡಿಸಿ ಸ್ನೇಹಿತನನ್ನೇ ಚಾಕು ಇರಿದು ಕೊಲೆ ಮಾಡಿದ್ದ ಆರೋಪಿಗಳನ್ನು ಘಟನೆ ನಡೆದು 24 ಗಂಟೆಗಳೊಳಗಾಗಿ ಮಡಿವಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ.

Vijaya Karnataka Web 29 Jan 2020, 1:02 pm
ಬೆಂಗಳೂರು: ವೈಯಕ್ತಿಕ ಕಾರಣದಿಂದ ನಡುರಸ್ತೆಯಲ್ಲಿ ಅಟ್ಟಾಡಿಸಿ ಸ್ನೇಹಿತನನ್ನೇ ಕೊಲೆ ಮಾಡಿದ್ದ ಆರೋಪಿಗಳನ್ನು ಘಟನೆ ನಡೆದು 24 ಗಂಟೆಗಳೊಳಗಾಗಿ ಮಡಿವಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ.
Vijaya Karnataka Web bengaluru


ವೆಂಕಟಾಪುರದ ನಿವಾಸಿ ಮುರಳಿ ಮೋಹನ್‌(34), ಕೃಷ್ಣಮೂರ್ತಿ(33) ಹಾಗೂ ಕೋರಮಂಗಲ ನಿವಾಸಿ ಮಂಜುನಾಥ್‌(25) ಬಂಧಿತ ಆರೋಪಿಗಳು. ಇವರು ಈಜಿಪುರ ಸಮೀಪದ ಶ್ರೀನಿವಾಗಿಲು ನಿವಾಸಿ ಆದಿಶೇಷ ಎಂಬಾತನನ್ನು ವೆಂಕಟಾಪುರ ಮುಖ್ಯ ರಸ್ತೆಯಲ್ಲೇ ಅಟ್ಟಾಡಿಸಿ ಎದೆಗೆ ಚಾಕು ಇರಿದು ಕೊಲೆ ಮಾಡಿದ್ದರು.

ನಡೆದದ್ದೇನು?
ಜ.26ರ ರಾತ್ರಿ ಬಂಧಿತ ಮೂವರು ಆರೋಪಿಗಳು ವೆಂಕಟಾಪುರ ಮುಖ್ಯರಸ್ತೆಯಲ್ಲಿರುವ ಮಡಿವಾಳ ಠಾಣಾ ವ್ಯಾಧಿಪ್ತಿಯ ರೇಣುಕಾ ಬಾರ್‌ ಮುಂದೆ ಕುಡಿಯುತ್ತಾ ಕುಳಿತಿದ್ದರು. ಇಲ್ಲಿಗೆ ಇವರ ಸ್ನೇಹಿತ ಆದಿಶೇಷ ಕೂಡ ಬಂದಿದ್ದ. ಈ ವೇಳೆ ಹಳೆ ವಿಚಾರವೊಂದಕ್ಕೆ ಸಂಬಂಧಪಟ್ಟಂತೆ ಪರಸ್ಪರ ಮಾತು ಜಗಳಕ್ಕೆ ತಿರುಗಿದೆ. ಜಗಳ ವಿಕೋಪಕ್ಕೆ ಹೋದಾಗ ಹೊಡೆದಾಟವಾಗಿ, ಆದಿಶೇಷ ಅಲ್ಲಿಂದ ಪರಾರಿಯಾಗಲು ಸ್ಥಳದಿಂದ ಓಡಿದ್ದ. ಆದರೂ ಈತನನ್ನು ಬೆನ್ನತ್ತಿದ ಆರೋಪಿಗಳು, ಬಟನ್‌ ಚಾಕುವಿನಿಂದ ಎದೆಗೆ ಇರಿದಿದ್ದರು. ಇರಿತಕ್ಕೆ ಒಳಗಾಗಿ ತೀವ್ರ ರಕ್ತಸ್ರಾವದಿಂದ ಆತ ಸ್ಥಳದಲ್ಲೇ ಕುಸಿದು ಬಿದ್ದ. ಸ್ಥಳೀಯರ ನೆರವಿನಿಂದ ಈತನನ್ನು ಸೇಂಟ್‌ ಜಾನ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೂ ಚಿಕಿತ್ಸೆ ಫಲಕಾರಿಯಾಗದೆ ಜ.27ರ ಬೆಳಗ್ಗೆ ಮೃತಪಟ್ಟಿದ್ದ.

ಆರೋಪಿಗಳು ಆದಿಶೇಷನನ್ನು ನಡುರಸ್ತೆಯಲ್ಲಿ ಬೆನ್ನತ್ತಿ ಚಾಕು ಇರಿದ ದೃಶ್ಯ ಸಿಸಿ ಕ್ಯಾಮೆರಾವೊಂದರಲ್ಲಿ ದಾಖಲಾಗಿತ್ತು. ಇದರಲ್ಲಿ ಆರೋಪಿಗಳ ಚಹರೆಯೂ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಇದರ ಆಧಾರದಲ್ಲಿಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ