ವಿಕ ಸುದ್ದಿಲೋಕ ಬೆಂಗಳೂರು
ದೇಶ-ವಿದೇಶಗಳಲ್ಲಿಹಲವರನ್ನು ಬಲಿ ಪಡೆಯುತ್ತಿರುವ ವಿಡಿಯೋ ಜಾಲತಾಣ ಆ್ಯಪ್ ಟಿಕ್ಟಾಕ್ಗೆ ಬೆಂಗಳೂರಿನಲ್ಲಿಇಬ್ಬರು ಸ್ನೇಹಿತರು ಬಲಿಯಾಗಿದ್ದು, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ.
ಜಕ್ಕೂರು ಮುಖ್ಯರಸ್ತೆ ಶಿವರಾಮಕಾರಂತ ಬಡಾವಣೆಯ 2ನೇ ಹಂತದ ಶ್ರೀರಾಮಪುರ ರೈಲ್ವೆ ಗೇಟ್ ಬಳಿ ರೈಲ್ವೆ ಹಳಿ ಮೇಲೆ ಟಿಕ್ ಟಾಕ್ ವಿಡಿಯೋ ಸಾಹಸ ಮಾಡುವಾಗ ರೈಲು ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ.
ಫುಡ್ ಡೆಲಿವರಿ ಕೊಡುವ ಕೆಲಸ ಮಾಡುತ್ತಿದ್ದ ಹೆಗಡೆ ನಗರ ನಿವಾಸಿ ಅಫ್ತಾಬ್ ಶರೀಫ್ (19) ಮತ್ತು ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ಮೊಹಮ್ಮದ್ ಮತೀನ್ (23) ಮೃತರು. ಜಬೀವುಲ್ಲಾ(21) ಎಂಬಾತನಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶುಕ್ರವಾರ ಸಂಜೆ 5.30ರಿಂದ 6 ಗಂಟೆ ನಡುವೆ ಈ ಮೂವರು ಟಿಕ್ಟಾಕ್ ವಿಡಿಯೋ ಮಾಡಲು ರೈಲ್ವೆ ಹಳಿ ಮೇಲೆ ಹೋಗಿದ್ದರು. ಹಳಿ ಮೇಲೆ ನಿಂತು, ರೈಲು ಬರುವ ಸಂದರ್ಭದಲ್ಲಿಹೊರಗೆ ಜಿಗಿಯಬೇಕು ಎಂಬ ಪ್ಲಾನ್ ಮಾಡಿದ್ದರು.
ಕೋಲಾರ-ಬೆಂಗಳೂರು ಪ್ಯಾಸೆಂಜರ್ ರೈಲು ಯಲಹಂಕ ನಿಲ್ದಾಣದಿಂದ ನಗರದ ಕಡೆ ಬರುತ್ತಿತ್ತು. ಯುವಕರು ಹೊರಗೆ ಜಂಪ್ ಹೊಡೆಯುವಷ್ಟರಲ್ಲಿರೈಲು ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಹಳಿಯಿಂದ ಸಾಕಷ್ಟು ದೂರಕ್ಕೆ ಎಗರಿ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಒಬ್ಬನಿಗೆ ಗಂಭೀರ ಗಾಯಗಳಾಗಿವೆ.
ಯುವಕರ ಕಣ್ಣೆದುರೇ ನಡೆದ ಘಟನೆ
ಮೂವರು ಟಿಕ್ಟಾಕ್ ವಿಡಿಯೋ ಮಾಡುತ್ತಿದ್ದ ವೇಳೆ ಇನ್ನೂ ಕೆಲ ಯುವಕರು ಅಲ್ಲೇ ನಿಂತು ನೋಡುತ್ತಿದ್ದರು. ತಮ್ಮ ಕಣ್ಣೆದುರೇ ಯುವಕರು ಸಾವನ್ನಪ್ಪಿದ್ದನ್ನು ಕಂಡು ತೀವ್ರ ಆಘಾತಗೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಬೈಯ್ಯಪ್ಪನಹಳ್ಳಿ ಸಂಚಾರ ಠಾಣೆ ಪೊಲೀಸರು ತಿಳಿಸಿದ್ದಾರೆ.
ದೇಶ-ವಿದೇಶಗಳಲ್ಲಿಹಲವರನ್ನು ಬಲಿ ಪಡೆಯುತ್ತಿರುವ ವಿಡಿಯೋ ಜಾಲತಾಣ ಆ್ಯಪ್ ಟಿಕ್ಟಾಕ್ಗೆ ಬೆಂಗಳೂರಿನಲ್ಲಿಇಬ್ಬರು ಸ್ನೇಹಿತರು ಬಲಿಯಾಗಿದ್ದು, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ.
ಜಕ್ಕೂರು ಮುಖ್ಯರಸ್ತೆ ಶಿವರಾಮಕಾರಂತ ಬಡಾವಣೆಯ 2ನೇ ಹಂತದ ಶ್ರೀರಾಮಪುರ ರೈಲ್ವೆ ಗೇಟ್ ಬಳಿ ರೈಲ್ವೆ ಹಳಿ ಮೇಲೆ ಟಿಕ್ ಟಾಕ್ ವಿಡಿಯೋ ಸಾಹಸ ಮಾಡುವಾಗ ರೈಲು ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ.
ಫುಡ್ ಡೆಲಿವರಿ ಕೊಡುವ ಕೆಲಸ ಮಾಡುತ್ತಿದ್ದ ಹೆಗಡೆ ನಗರ ನಿವಾಸಿ ಅಫ್ತಾಬ್ ಶರೀಫ್ (19) ಮತ್ತು ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ಮೊಹಮ್ಮದ್ ಮತೀನ್ (23) ಮೃತರು. ಜಬೀವುಲ್ಲಾ(21) ಎಂಬಾತನಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶುಕ್ರವಾರ ಸಂಜೆ 5.30ರಿಂದ 6 ಗಂಟೆ ನಡುವೆ ಈ ಮೂವರು ಟಿಕ್ಟಾಕ್ ವಿಡಿಯೋ ಮಾಡಲು ರೈಲ್ವೆ ಹಳಿ ಮೇಲೆ ಹೋಗಿದ್ದರು. ಹಳಿ ಮೇಲೆ ನಿಂತು, ರೈಲು ಬರುವ ಸಂದರ್ಭದಲ್ಲಿಹೊರಗೆ ಜಿಗಿಯಬೇಕು ಎಂಬ ಪ್ಲಾನ್ ಮಾಡಿದ್ದರು.
ಕೋಲಾರ-ಬೆಂಗಳೂರು ಪ್ಯಾಸೆಂಜರ್ ರೈಲು ಯಲಹಂಕ ನಿಲ್ದಾಣದಿಂದ ನಗರದ ಕಡೆ ಬರುತ್ತಿತ್ತು. ಯುವಕರು ಹೊರಗೆ ಜಂಪ್ ಹೊಡೆಯುವಷ್ಟರಲ್ಲಿರೈಲು ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಹಳಿಯಿಂದ ಸಾಕಷ್ಟು ದೂರಕ್ಕೆ ಎಗರಿ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಒಬ್ಬನಿಗೆ ಗಂಭೀರ ಗಾಯಗಳಾಗಿವೆ.
ಯುವಕರ ಕಣ್ಣೆದುರೇ ನಡೆದ ಘಟನೆ
ಮೂವರು ಟಿಕ್ಟಾಕ್ ವಿಡಿಯೋ ಮಾಡುತ್ತಿದ್ದ ವೇಳೆ ಇನ್ನೂ ಕೆಲ ಯುವಕರು ಅಲ್ಲೇ ನಿಂತು ನೋಡುತ್ತಿದ್ದರು. ತಮ್ಮ ಕಣ್ಣೆದುರೇ ಯುವಕರು ಸಾವನ್ನಪ್ಪಿದ್ದನ್ನು ಕಂಡು ತೀವ್ರ ಆಘಾತಗೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಬೈಯ್ಯಪ್ಪನಹಳ್ಳಿ ಸಂಚಾರ ಠಾಣೆ ಪೊಲೀಸರು ತಿಳಿಸಿದ್ದಾರೆ.