ಆ್ಯಪ್ನಗರ

ಜಾಬ್‌ ಕೊಡಿಸುತ್ತೇವೆ ಎಂದು ಕರೆದೊಯ್ದು ಕಿಡ್ನಿ ಕದ್ದರು

ಕೆಲಸ ಕೊಡಿಸುತ್ತೇನೆಂದು ಕೈರೋಗೆ ಕರೆದುಕೊಂಡ ಹೋದ ಏಜೆನ್ಸಿಗಳು ಅವರ ಒಂದು ಕಿಡ್ನಿ ತೆಗೆದು ಅವರನ್ನು ಮರಳಿ ಕಳುಹಿಸಿದ್ದಾರೆ.

Vijaya Karnataka Web 23 Nov 2017, 2:45 pm
ಚೆನ್ನೈ: ಯಾಸಿರ್‌ ಅಹ್ಮದ್ ಭಾಷಾ(29) ಸಾಲ ತೀರಿಸಲೆಂದು ಕೈರೋಗೆ ಕೆಲಸಕ್ಕೆ ತೆರಳುತ್ತಾರೆ. ಆದರೆ ಕೆಲಸ ಕೊಡಿಸುತ್ತೇನೆಂದು ಅಲ್ಲಿಗೆ ಕರೆದುಕೊಂಡ ಹೋದ ಏಜೆನ್ಸಿಗಳು ಅವರ ಒಂದು ಕಿಡ್ನಿ ತೆಗೆದು ಮರಳಿ ಕಳುಹಿಸಿದ್ದಾರೆ.
Vijaya Karnataka Web tn man flown to cairo for job but returns without kidney
ಜಾಬ್‌ ಕೊಡಿಸುತ್ತೇವೆ ಎಂದು ಕರೆದೊಯ್ದು ಕಿಡ್ನಿ ಕದ್ದರು


ಆಟೋ ಓಡಿಸಿ ಜೀವನ ನಡೆಸುತ್ತಿರುವ ಭಾಷಾಗೆ 6 ವರ್ಷದ ಮಗ 3 ವರ್ಷದ ಮಗಳಿದ್ದಾಳೆ. 2011ರಲ್ಲಿ ಪತ್ನಿಗೆ ಅಪಘಾತವಾಗಿ ಚಿಕಿತ್ಸೆಗಾಗಿ ಸ್ನೇಹಿತರು ಹಾಗೂ ಬಂಧುಗಳ ಹತ್ತಿರ 7 ಲಕ್ಷ ರುಪಾಯಿ ಸಾಲ ಮಾಡಿದ್ದರು. ಆದರೆ ಆಟೋ ಓಡಿಸಿ ಸಾಲ ತೀರಿಸಲು ಸಾಧ್ಯವಿಲ್ಲವೆಂದು ಮುಂಬೈಗೆ ಹೋಗಿ ಕ್ಯಾಬ್‌ ಓಡಿಸುತ್ತಾರೆ. ಅಲ್ಲಿಯೂ ಗಳಿಕೆ ಕಷ್ಟವಾದಾಗ ವೆಬ್‌ನಲ್ಲಿ ಕೆಲಸ ಹುಡುಕುತ್ತಾರೆ. ಆಗ ಅಹಮದಾಬಾದ್‌ನ ಸುರೇಶ್‌ ಪ್ರಜಾಪತಿ ಎಂಬುವರು ನಡೆಸುತ್ತಿರುವ ಶಿಕ್ಷಾ ಕನ್ಸಲ್ಟೆನ್ಸಿ ಕೈರೋದಲ್ಲಿ ಜಾಬ್‌ ಕೊಡಿಸುವುದಾಗಿ ಹೇಳುತ್ತದೆ.

ಅದನ್ನು ನಂಬಿ ಮೊದಲಿಗೆ ಅಹಮದಾಬಾದ್‌ಗೆ ಪ್ರಯಾಣಿಸುತ್ತಾರೆ. ಆಗ ಇವರ ರಕ್ತ ಪರೀಕ್ಷೆ ಮಾಡಬೇಕೆಂದು ಹೇಳುತ್ತಾರೆ. ಭಾಷಾ 'ಏಕೆ ಮಾಡಿಸಬೇಕು?' ಎಂದು ಹೊರದೇಶಕ್ಕೆ ಹೋಗುವಾಗ ದೇಹದ ಆರೋಗ್ಯದ ಸ್ಥಿತಿ ಬಗ್ಗೆ ತಿಳಿಯಲು ಇದು ಅವಶ್ಯಕ ಎಂದು ಹೇಳುತ್ತಾರೆ.

ಕೈರೋಕ್ಕೆ ತಲುಪಿದ ತಕ್ಷಣ ಮಧು ಎಂಬವ ಬಂದು ಸ್ವೀಕರಿಸುತ್ತಾನೆ. ನಂತರ ಒಂದು ಹೋಟೆಲ್‌ನಲ್ಲಿ ತಂಗಲು ವ್ಯವಸ್ಥೆ ಮಾಡುತ್ತಾನೆ. ಇವರ ಜತೆ ಮತ್ತೆ 5 ಜನರು ತಂಗಿದ್ದರು. ಮಾರನೇಯ ದಿನ ಅವರನ್ನೆಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಂತರ ಇವರೆನ್ನೆಲ್ಲಾ ಬೆದರಿಸಿ ಕಿಡ್ನಿ ಪಡೆಯಲಾಯಿತು ಎನ್ನುತ್ತಾರೆ ಭಾಷಾ.

ತನ್ನ ಒಂದು ಕಿಡ್ನಿ ಇಲ್ಲದಿರುವುದು ಪತ್ನಿಗೆ ಗೊತ್ತಾಗಬಾರದೆಂದು ಮಕ್ಕಳು ಮತ್ತು ಪತ್ನಿಯನ್ನು ಊರಿನಲ್ಲಿ ಬಿಟ್ಟು, ಚೆನ್ನೈನಲ್ಲಿ ಆಟೋ ಓಡಿಸುತ್ತಿದ್ದಾರೆ ಭಾಷಾ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ