ಆ್ಯಪ್ನಗರ

ಟ್ರ್ಯಾಕ್ಟರ್‌ ಡಿಕ್ಕಿ ; ಮಗು ಸಾವು

ದ್ವಿಚಕ್ರ ವಾಹನಕ್ಕೆ ಟ್ರ್ಯಾಕ್ಟರ್‌ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನದಲ್ಲಿದ್ದ ನಾಲ್ಕು ವರ್ಷದ ಮಗು ಮೃತಪಟ್ಟಿರುವ ಘಟನೆ ಬಿಟಿಎಂ ಲೇಔಟ್‌ನ 2ನೇ ಹಂತದಲ್ಲಿ ನಡೆದಿದೆ.

Vijaya Karnataka 12 Mar 2019, 5:00 am
ಬೆಂಗಳೂರು: ದ್ವಿಚಕ್ರ ವಾಹನಕ್ಕೆ ಟ್ರ್ಯಾಕ್ಟರ್‌ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನದಲ್ಲಿದ್ದ ನಾಲ್ಕು ವರ್ಷದ ಮಗು ಮೃತಪಟ್ಟಿರುವ ಘಟನೆ ಬಿಟಿಎಂ ಲೇಔಟ್‌ನ 2ನೇ ಹಂತದಲ್ಲಿ ನಡೆದಿದೆ.
Vijaya Karnataka Web tractor thrash baby dead
ಟ್ರ್ಯಾಕ್ಟರ್‌ ಡಿಕ್ಕಿ ; ಮಗು ಸಾವು


ಬಿಳೇಕಹಳ್ಳಿ ನಿವಾಸಿ ಸಚಿನ್‌ ಮಾಂಡ್ರೆ ದಂಪತಿ ಪುತ್ರಿ ಸಾರಾ(4) ಮೃತ ಮಗು. ಡಿಕ್ಕಿಯ ರಭಸಕ್ಕೆ ದ್ವಿಚಕ್ರ ವಾಹನದಲ್ಲಿದ್ದ ತಂದೆ -ತಾಯಿ ಒಂದು ದಿಕ್ಕಿಗೆ ಬಿದ್ದರೆ ಮಗು ಮತ್ತೊಂದು ದಿಕ್ಕಿಗೆ ಬಿದ್ದು ತಲೆ ನೆಲಕ್ಕೆ ಅಪ್ಪಳಿಸಿತ್ತು. ಪರಿಣಾಮ ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ಘಟನೆ ಸಂಬಂಧ ಟ್ರ್ಯಾಕ್ಟರ್‌ ಚಾಲಕ ಇಂದ್ರೇಶ್‌ (45) ನನ್ನು ಬಂಧಿಸಲಾಗಿದೆ. ಮಹಾರಾಷ್ಟ್ರ ಮೂಲದ ಸಚಿನ್‌ ಮಾಂಡ್ರೆ ಕುಟುಂಬ ಬಿಳೇಕಹಳ್ಳಿಯಲ್ಲಿ ವಾಸವಿದೆ. ಸಚಿನ್‌ ಬಿಟಿಎಂ ಲೇಔಟ್‌ನಲ್ಲೇ ಹೋಟೆಲ್‌ ಒಂದರ ಮೇಲ್ವಿಚಾರಕರಾಗಿದ್ದಾರೆ. ಭಾನುವಾರ ಸಂಜೆ ಕುಟುಂಬ ಸಮೇತರಾಗಿ ಹೋಗುತ್ತಿದ್ದಾಗ ಬಿಟಿಎಂ ಲೇಔಟ್‌ನ 2ನೇ ಹಂತದ 20ನೇ ಮುಖ್ಯರಸ್ತೆಯಲ್ಲಿ ಟ್ರ್ಯಾಕ್ಟರ್‌ ಬಂದು ಡಿಕ್ಕಿ ಹೊಡೆದಿತ್ತು. ಆರೋಪಿ ಚಾಲಕನಿಗೆ ಚಾಲನಾ ಪರವಾನಗಿಯೇ ಇರಲಿಲ್ಲ ಎನ್ನುವುದು ವಿಚಾರಣೆ ವೇಳೆ ಗೊತ್ತಾಗಿದೆ. ಪ್ರಕರಣ ದಾಖಲಿಸಿಕೊಂಡು ಟ್ರ್ಯಾಕ್ಟರ್‌ ಮಾಲೀಕನನ್ನೂ ಪ್ರಕರಣದಲ್ಲಿ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿರುವ ಸಂಚಾರ ಠಾಣೆ ಪೊಲೀಸರು ಚಾಲಕನನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ