ಆ್ಯಪ್ನಗರ

ತ್ರಿವಳಿ ಹತ್ಯೆ: ಆರೋಪಿಗಳಿಗೆ ಜೀವಾವಧಿ ಶಿಕ್ಷೆ

​ 2009 ರಲ್ಲಿ ಬೆಂಗಳೂರನ್ನು ಬೆಚ್ಚಿ ಬೀಳಿಸಿದ್ದ ತ್ರಿವಳಿ ಕೊಲೆ ಪ್ರಕರಣದ ಹಂತಕರಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

Vijaya Karnataka 12 Mar 2019, 5:00 am
ಬೆಂಗಳೂರು: 2009 ರಲ್ಲಿ ಬೆಂಗಳೂರನ್ನು ಬೆಚ್ಚಿ ಬೀಳಿಸಿದ್ದ ತ್ರಿವಳಿ ಕೊಲೆ ಪ್ರಕರಣದ ಹಂತಕರಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
Vijaya Karnataka Web triple murder jail
ತ್ರಿವಳಿ ಹತ್ಯೆ: ಆರೋಪಿಗಳಿಗೆ ಜೀವಾವಧಿ ಶಿಕ್ಷೆ


ರಿಯಲ್‌ ಎಸ್ಟೇಟ್‌ ಉದ್ಯಮಿ ರಾಮಮೂರ್ತಿ ನಗರದ ಬಜಾರ್‌ಲೇನ್‌ ನಿವಾಸಿ ರಮೇಶ, ಸುಪಾರಿ ಕಿಲ್ಲರ್‌ಗಳಾದ ಲೋಕೇಶ, ರಾಜು, ಮುರುಳಿ ಶಿಕ್ಷೆಗೆ ಗುರಿ ಆದವರು. 66ನೇ ಸೆಷನ್ಸ್‌ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದ್ದು ಪ್ರಕರಣದಲ್ಲಿ ವಿಶೇಷ ಅಭಿಯೋಜಕರಾಗಿ ಸಿ.ಎಂ.ಬೆಳಲದವರ ವಾದ ಮಂಡಿಸಿದ್ದರು.

2009ರ ಅಕ್ಟೋಬರ್‌ 24 ರಂದು ರಾಮಮೂರ್ತಿನಗರದ ಜಯಂತಿ ನಗರದ ಮನೆಯಲ್ಲಿ ಒಳಾಂಗಣ ವಿನ್ಯಾಸಕಾರ ರಾಹುಲ್‌ ದಾಸ್‌, ಇವರ ಪತ್ನಿ ಪುಷ್ಪಲತಾ ಹಾಗೂ ಮಗಳು ಆಗ್ನೇಶಾ ಅವರನ್ನು ಉಸಿರುಗಟ್ಟಿಸಿ ಕೊಲೆ ಮಾಡಲಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲಿಸರು ಕಿಂಗ್‌ಪಿನ್‌ ರಮೇಶ್‌ ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದರು.

ಮನೆ ಮಾಲೀಕರಾಗಿದ್ದ ರಮೇಶ್‌ ಹಾಗೂ ಪುಷ್ಪಲತಾ ಜೊತೆ ಸಂಪರ್ಕವಿತ್ತು. ಆದರೆ ಮನೆ ಖಾಲಿ ಮಾಡಿಕೊಂಡು ಬೇರೆ ಮನೆಗೆ ಹೋದ ಬಳಿಕ ಪುಷ್ಪಲತಾ ರಮೇಶ್‌ ಮೇಲಿನ ಆಸಕ್ತಿ ಕಳೆದುಕೊಂಡಿದ್ದರು. ಇದೇ ಕಾರಣಕ್ಕೆ ಮನೆಯಲ್ಲಿ ಒಬ್ಬರೇ ಇದ್ದ ಸಮಯ ನೋಡಿಕೊಂಡು ನಾಲ್ವರು ಹಂತಕರು ರಾಹುಲ್‌ ದಾಸ್‌ ಅವರನ್ನು ಕೊಲೆ ಮಾಡಿ ಪರಾರಿ ಆಗುವ ವೇಳೆಯಲ್ಲಿ ಮಗಳನ್ನು ಶಾಲೆಯಿಂದ ಕರೆದುಕೊಂಡು ಪುಷ್ಪಲತಾ ಕೂಡ ಮನೆಯೊಳಗೆ ಪ್ರವೇಶ ಪಡೆದರು. ಈ ವೇಳೆ ಸಾಕ್ಷ್ಯ ಇಲ್ಲದಂತೆ ಮಾಡಲು ಹಂತಕರು ತಾಯಿ ಮಗಳನ್ನೂ ಕೊಲೆ ಮಾಡಿದ್ದರು. ಕೊಲೆಗೆ ಪ್ರತ್ಯಕ್ಷ ಸಾಕ್ಷಿಗಳು ಇರಲಿಲ್ಲ. ಆದರೆ ಸ್ಥಳದಲ್ಲಿ ಸಿಕ್ಕ ಕೂದಲು ಇನ್ನಿತರೆ ಸಾಕ್ಷ್ಯಗಳ ಆಧಾರದ ಮೇಲೆಯೇ ಆರೋಪಿಗಳಿಗೆ ಶಿಕ್ಷೆ ಕೊಡಿಸುವವಲ್ಲಿ ಸರಕಾರಿ ಅಭಿಯೋಜಕರು ಯಶಸ್ವಿ ಆಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ