ಆ್ಯಪ್ನಗರ

ಮೀಟರ್‌ ಬಡ್ಡಿ ದಂಧೆ: ಇಬ್ಬರ ಬಂಧನ

ಟ್ರಾವೆಲ್‌ ಏಜೆನ್ಸಿ ನಡೆಸಲು ಶೇ.20 ರಷ್ಟು ಬಡ್ಡಿಗೆ ಸಾಲ ನೀಡಿದ್ದಲ್ಲದೆ, ಮೀಟರ್‌ ಬಡ್ಡಿ ಹಾಕಿ ಸಾಲ ವಸೂಲಿ ಮಾಡಲು ಕಿರುಕುಳ ನೀಡುತ್ತಿದ್ದ ಆರೋಪದ ಮೇಲೆ ಮಾಗಡಿ ರಸ್ತೆ ಠಾಣೆ ಪೊಲೀಸರು ಅಗ್ರಹಾರ ದಾಸರಹಳ್ಳಿಯ ನಿವಾಸಿಗಳಾದ ಹೇಮಾವತಿ(45), ಮಂಜುನಾಥ್‌(45) ಎಂಬಿಬ್ಬರನ್ನು ಬಂಧಿಸಿದ್ದಾರೆ. ​

Vijaya Karnataka Web 3 Sep 2018, 7:46 am
ಬೆಂಗಳೂರು: ಟ್ರಾವೆಲ್‌ ಏಜೆನ್ಸಿ ನಡೆಸಲು ಶೇ.20 ರಷ್ಟು ಬಡ್ಡಿಗೆ ಸಾಲ ನೀಡಿದ್ದಲ್ಲದೆ, ಮೀಟರ್‌ ಬಡ್ಡಿ ಹಾಕಿ ಸಾಲ ವಸೂಲಿ ಮಾಡಲು ಕಿರುಕುಳ ನೀಡುತ್ತಿದ್ದ ಆರೋಪದ ಮೇಲೆ ಮಾಗಡಿ ರಸ್ತೆ ಠಾಣೆ ಪೊಲೀಸರು ಅಗ್ರಹಾರ ದಾಸರಹಳ್ಳಿಯ ನಿವಾಸಿಗಳಾದ ಹೇಮಾವತಿ(45), ಮಂಜುನಾಥ್‌(45) ಎಂಬಿಬ್ಬರನ್ನು ಬಂಧಿಸಿದ್ದಾರೆ.
Vijaya Karnataka Web arrest


ಯಶೋಧ(47) ಎನ್ನುವವರು ಕೊಟ್ಟ ದೂರಿನ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಲಾಗಿದೆ. ಯಶೋಧ ಅವರು ಟ್ರಾವೆಲ್‌ ಏಜೆನ್ಸಿ ಆರಂಭಿಸಲು ಇಚ್ಚಿಸಿದ್ದರು. ತಮ್ಮ ಇಚ್ಛೆಯನ್ನು ಸ್ನೇಹಿತೆ ಹೇಮಾವತಿ ಅವರ ಬಳಿ ಹೇಳಿಕೊಂಡಿದ್ದಲ್ಲದೆ ಸಾಲ ನೀಡುವಂತೆ ಕೇಳಿದ್ದರು. 2017ರ ಸೆಪ್ಟಂಬರ್‌ನಲ್ಲಿ ಹೇಮಾವತಿ ಶೇ.20 ಬಡ್ಡಿಗೆ 6 ಲಕ್ಷ ರೂ. ಸಾಲ ನೀಡಿದ್ದರು. ಇದರಲ್ಲಿ ಬಡ್ಡಿಯ ರೂಪದಲ್ಲೇ 3 ಲಕ್ಷ ರೂ. ವಾಪಾಸ್‌ ನೀಡಿದ್ದರು. ಮತ್ತು 3 ಲಕ್ಷ ರೂ ಅಸಲನ್ನೂ ವಾಪಾಸ್‌ ಮಾಡಿದ್ದರು. ಇನ್ನೂ 3 ಲಕ್ಷ ರೂ ಬಾಕಿ ಉಳಿದಿತ್ತು. ಇದಕ್ಕೆ ಬಡ್ಡಿ ಕಟ್ಟುವ ಸಲುವಾಗಿ ಮತ್ತೆ 5 ಲಕ್ಷ ರೂ. ಸಾಲವನ್ನು ಮತ್ತೆ ಅವರ ಬಳಿಯೇ ಕೇಳಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಹೊಸದಾಗಿ 5 ಲಕ್ಷ ರೂ ಸಾಲ ನೀಡುವಾಗ, ಅದುವರೆಗೂ ಉಳಿಸಿಕೊಂಡಿದ್ದ ಬಡ್ಡಿ ಮತ್ತು ಕಂತಿನ ಹಣದ ಲೆಕ್ಕದಲ್ಲಿ ಹೇಮಾವತಿ ಅವರು 4.5 ಲಕ್ಷ ರೂ.ಗಳನ್ನು ಕಡಿತಗೊಳಿಸಿ ಉಳಿದ 45 ಸಾವಿರ ರೂ. ಮಾತ್ರ ಯಶೋಧಾ ಅವರಿಗೆ ನೀಡಿದ್ದರು. ಬಡ್ಡಿ ಮೊತ್ತ ಹೆಚ್ಚಾಗಿದ್ದರಿಂದ ಅದನ್ನು ತೀರಿಸಲಾಗಿರಲಿಲ್ಲ. ಈ ಕಾರಣಕ್ಕೆ ಹೇಮಾವತಿಯಿಂದ ಬೆದರಿಕೆ ಶುರುವಾಗಿತ್ತು. ಇತ್ತೀಚಿಗೆ ಯಶೋಧಾ ಅವರ ಮನೆಯ ಬೀರುವಿನಲ್ಲಿದ್ದ ಮನೆಯ ಆಸ್ತಿಪತ್ರವನ್ನೂ ಪಡೆದುಕೊಂಡು ಹೋಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದರು.

40 ಲಕ್ಷ ರೂ ಸಾಲ ಪಡೆದಿರುವುದಾಗಿ ಹೇಮಾವತಿ ದಾಖಲೆ ಸೃಷ್ಟಿಸಿಕೊಂಡಿದ್ದಾರೆ ಎಂದು ಯಶೋಧ ಅವರು ದೂರಿನಲ್ಲಿ ತಿಳಿಸಿದ್ದಾರೆ. ಮೀಟರ್‌ ಬಡ್ಡಿಗೆ ಹಣ ಕೊಟ್ಟಿರುವುದು, ಕಿರುಕುಳ ನೀಡಿರುವುದು ಮೇಲು ನೋಟಕ್ಕೆ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ