ಆ್ಯಪ್ನಗರ

ಗೋಡೆ ಕುಸಿದು ಮಹಿಳೆ ಸಾವು

ಜೋಪಡಿ ಮೇಲೆ ಗೋಡೆ ಕುಸಿದು ಬಿದ್ದ ಪರಿಣಾಮ ವೃದ್ಧೆಯೊಬ್ಬರು ಸಾವಿಗೀಡಾಗಿ ಮೂರು ಜನ ಗಾಯಗೊಂಡಿರುವ ಘಟನೆ ಕೆಆರ್‌ಪುರ ಪೊಲೀಸ್‌ ಠಾಣೆ ವ್ಯಾಪ್ತಿಯ ಬೃಂದಾವನ ಬಡಾವಣೆಯಲ್ಲಿ ಜರುಗಿದೆ.

Vijaya Karnataka 19 Jan 2019, 5:00 am
ಕೃಷ್ಣರಾಜಪುರ: ಜೋಪಡಿ ಮೇಲೆ ಗೋಡೆ ಕುಸಿದು ಬಿದ್ದ ಪರಿಣಾಮ ವೃದ್ಧೆಯೊಬ್ಬರು ಸಾವಿಗೀಡಾಗಿ ಮೂರು ಜನ ಗಾಯಗೊಂಡಿರುವ ಘಟನೆ ಕೆಆರ್‌ಪುರ ಪೊಲೀಸ್‌ ಠಾಣೆ ವ್ಯಾಪ್ತಿಯ ಬೃಂದಾವನ ಬಡಾವಣೆಯಲ್ಲಿ ಜರುಗಿದೆ.
Vijaya Karnataka Web wall collapsed woman died
ಗೋಡೆ ಕುಸಿದು ಮಹಿಳೆ ಸಾವು


ಮೂಲತಃ ಕೋಲಾರ ಜಿಲ್ಲೆಯ ತಾತನಹಳ್ಳಿಯ ಮಾರಿಯಮ್ಮ(62)ಮೃತರು. 20 ವರ್ಷಗಳಿಂದ ಆನಂದಪುರ ಸಮೀಪ ಜೋಪಡಿಯೊಂದರಲ್ಲಿ ಮಗಳ ಜತೆಯಲ್ಲಿ ನೆಲಸಿದ್ದರು.

ಹೂವಿನ ವ್ಯಾಪಾರ ಮಾಡುತ್ತಿದ್ದ ಲಕ್ಷ್ಮೀ ತಾಯಿ ಮಾರಿಯಮ್ಮ, ಅತ್ತೆ ಶಾಂತಮ್ಮ ಮತ್ತು ಪತಿ ಸುರೇಶ್‌ ಒಟ್ಟಿಗೆ ಊಟ ಮಾಡಿ ಮಲಗಿದ್ದಾರೆ.

ಗುರುವಾರ ರಾತ್ರಿ 11.50 ರ ಸುಮಾರಿನಲ್ಲಿ ವೆಂಗಯ್ಯಕೆರೆಗೆ ಸಂಪರ್ಕಿಸುವ ರಾಜಕಾಲುವೆಗೆ ನಿರ್ಮಿಸಿದ್ದ ತಡಗೋಡೆ ಇದ್ದಕ್ಕಿದ್ದಂತೆ ಶೆಡ್‌ ಮೇಲೆ ಕುಸಿದಿದೆ.

ಈ ಅವಘಡದಲ್ಲಿ ಲಕ್ಷ್ಮೀ, ಶಾಂತಮ್ಮ ಮತ್ತು ಸುರೇಶ್‌ಗೆ ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಾಣಪಾಯದಿಂದ ಪಾರಾಗಿದ್ದಾರೆ,

ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲಿಸಿ ಕೆಆರ್‌ಪುರ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ