ಆ್ಯಪ್ನಗರ

ಪ್ರಿಯಕರನ ಜತೆ ಸೇರಿ ಪತಿ ಕೊಂದ ಪತ್ನಿ

ಪ್ರಿಯಕರನ ಜತೆ ಸೇರಿ ಪತ್ನಿಯೇ ಪತಿಯನ್ನು ಕತ್ತು ಬಿಗಿದು ಕೊಲೆ ಮಾಡಿರುವ ಘಟನೆ ಯಲಹಂಕ ಉಪನಗರ ಪೊಲೀಸ್ ಠಾಣಾ ಸರಹದ್ದಿನ ರಾಮಗೊಂಡನಹಳ್ಳಿ ಬಳಿ ನಡೆದಿದೆ.

Vijaya Karnataka Web 22 Sep 2018, 12:50 pm
ಬೆಂಗಳೂರು: ಪ್ರಿಯಕರನ ಜತೆ ಸೇರಿ ಪತ್ನಿಯೇ ಪತಿಯನ್ನು ಕತ್ತು ಬಿಗಿದು ಕೊಲೆ ಮಾಡಿರುವ ಘಟನೆ ಯಲಹಂಕ ಉಪನಗರ ಪೊಲೀಸ್ ಠಾಣಾ ಸರಹದ್ದಿನ ರಾಮಗೊಂಡನಹಳ್ಳಿ ಬಳಿ ನಡೆದಿದೆ.
Vijaya Karnataka Web murder


ವೀರಸಾಗರ ಗ್ರಾಮದ ನಿವಾಸಿ ಸಗಾಯ್ ರಾಜ್ (30) ಕೊಲೆಯಾದ ದುರ್ದೈವಿ. ಪತ್ನಿ ಮಮತಾ (23) ಹಾಗೂ ಪ್ರಿಯಕರ ಅಪ್ಪು ಬಿನ್ ಸುಬ್ರಮಣಿ (24) ಬಂಧಿತರು.

ಕಳೆದ 5 ವರ್ಷದ ಹಿಂದೆ ಸಗಾಯ್ ರಾಜ್ ಎಂಬಾತನಿಗೆ ಯಶವಂತಪುರ ನಿವಾಸಿ ಮಮತಾ ಜತೆ ವಿವಾಹವಾಗಿದ್ದು, ಈ ದಂಪತಿಗೆ ಮಕ್ಕಳಾಗಿರಲಿಲ್ಲ. ಮದುವೆಗೂ ಮುನ್ನವೇ ಮಮತಾ ವಿವಾಹಿತ ಅಪ್ಪು ಎಂಬಾತನನ್ನು ಪ್ರೀತಿಸುತ್ತಿದ್ದಳು. ಈ ವಿಚಾರ ತಿಳಿದ ಮಮತಾ ಮನೆಯವರು ಸಗಾಯ್ ರಾಜ್ ಎಂಬಾತನಿಗೆ ಮದುವೆ ಮಾಡಿಕೊಟ್ಟಿದ್ದರು ಎಂದು ತಿಳಿದು ಬಂದಿದೆ.

ಮದುವೆ ನಂತರವೂ ಮಮತಾ ಹಾಗೂ ಅಪ್ಪು ಅಕ್ರಮ ಸಂಬಂಧ ಮುಂದುವರೆಸಿದ್ದು, ಒಳ ಸಂಚು ರೂಪಿಸಿ ಸಗಾಯ್ ರಾಜ್‌ನನ್ನು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

'ಮಂಗಳವಾರ (18-9-2018) ಮಧ್ಯರಾತ್ರಿ ಸಗಾಯ್ ರಾಜ್‌ನಿಗೆ ಕಂಟಪೂರ್ತಿ ಕುಡಿಸಿ, ಕಾರಿನಲ್ಲಿ ಸುತ್ತಾಡಿಸಿದ್ದೆವು. ಬಳಿಕ ಸಂಬ್ರಮ್ ಕಾಲೇಜ್ ಬಳಿಯ ಅಂಭಾಭವಾನಿ ದೇವಸ್ಥಾನ ಸಮೀಪದ ನಿರ್ಮಾಣ ಹಂತದ ಕಟ್ಟಡ ಬಳಿ ವೇಲ್‌ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದು, ಮೃತದೇಹವನ್ನು ಆತನ ಮನೆ ಸಮೀಪದ ರಸ್ತೆ ಪಕ್ಕ ಬಿಸಾಡಿರುವುದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ.

ಘಟನೆ ಸಂಬಂಧ ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ