ಆ್ಯಪ್ನಗರ

ಬೆಂಗಳೂರು: ಸುರಕ್ಷಿತ ಲೈಂಗಿಕತೆಗೆ ಒತ್ತಾಯಿಸಿದ್ದಕ್ಕೆ ಒಂಟಿ ಮಹಿಳೆಯ ಹತ್ಯೆ, ಆರೋಪಿ ಬಂಧನ

ಸುರಕ್ಷಿತ ಲೈಂಗಿಕತೆಗೆ ಒತ್ತಾಯಿಸಿದ್ದಕ್ಕೇ ಕುಪಿತಗೊಂಡ ವ್ಯಕ್ತಿಯೊಬ್ಬ, ಮಹಿಳೆಯ ಕುತ್ತಿಗೆ ಸೀಳಿ ಕೊಲೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಆರೋಪಿ ಮತ್ತು ಕೊಲೆಯಾದ ಮಹಿಳೆ ಮೆಜೆಸ್ಟಿಕ್‌ ನಲ್ಲಿ ಪರಸ್ಪರ ಭೇಟಿಯಾಗಿದ್ದರು.

Vijaya Karnataka Web 24 Jan 2020, 9:54 am
ಬೆಂಗಳೂರು: ಸುರಕ್ಷಿತ ಲೈಂಗಿಕತೆಗೆ ಒತ್ತಾಯಿಸಿದ್ದಕ್ಕೇ ಕುಪಿತಗೊಂಡ ವ್ಯಕ್ತಿಯೊಬ್ಬ, ಮಹಿಳೆಯ ಕುತ್ತಿಗೆ ಸೀಳಿ ಕೊಲೆ ಮಾಡಿ ಈಗ ಪೊಲೀಸರ ಬಂಧನಕ್ಕೆ ಒಳಪಟ್ಟಿದ್ದಾನೆ.
Vijaya Karnataka Web bengaluru


ಕೆ.ಆರ್‌.ಪೇಟೆ ಮೂಲದ ಮುಕುಂದ ಎಚ್‌.ಎಚ್‌ (48) ಬಂಧಿತ ಆರೋಪಿ. ಜ.11 ರಂದು ಈತ ಮಂಜುಳಾ (42) ಹೆಸರಿನ ಒಂಟಿ ಮಹಿಳೆಯನ್ನು ಕೊಲೆ ಮಾಡಿ ಪರಾರಿಯಾಗಿದ್ದ. ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಮಂಜುಳಾ ಅವರ ಮನೆ ರಸ್ತೆಯಲ್ಲಿದ್ದ ಸಿಸಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೊಲೆ ಹೇಗೆ?
ಎಲೆಕ್ಟ್ರಾನಿಕ್‌ ಸಿಟಿಯ ಖಾಸಗಿ ಸಂಸ್ಥೆಯಲ್ಲಿ ಸೆಕ್ಯುರಿಟಿ ಗಾರ್ಡ್‌ ಆಗಿ ಕೆಲಸ ಮಾಡಿಕೊಂಡಿರುವ ಮುಕುಂದ, ಜ.11 ರಂದು ಕೆ.ಆರ್‌.ಪೇಟೆಗೆ ಹೊರಟಿದ್ದ. ಬಸ್‌ ಹತ್ತಲು ಮೆಜೆಸ್ಟಿಕ್‌ ತಲುಪಿದಾಗ ಅಲ್ಲಿ ಮಂಜುಳಾ ಅವರ ಪರಿಚಯ ಆಗಿದೆ. ಇಬ್ಬರೂ ಲೈಂಗಿಕ ಕ್ರಿಯೆ ನಡೆಸಲು ಪರಸ್ಪರ ಒಪ್ಪಿಕೊಂಡಿದ್ದರು. ಲೈಂಗಿಕ ಸೇವೆಗೆ ಪ್ರತಿಯಾಗಿ 1500 ರೂ. ನೀಡಲು ಮುಕುಂದ ಒಪ್ಪಿಕೊಂಡಿದ್ದ. ಬಳಿಕ ಮಂಜುಳಾ ಆವರು ಆತನನ್ನು ಮನೆಗೆ ಕರೆದುಕೊಂಡು ಬಂದಿದ್ದರು. ಆದರೆ, ಸುರಕ್ಷಿತ ಲೈಂಗಿಕ ಕ್ರಿಯೆಯಲ್ಲಿ ತೊಡಗಲು ಆರೋಪಿ ನಿರಾಕರಿಸಿದ್ದ. ಇದಕ್ಕೆ ತಕರಾರು ವ್ಯಕ್ತಪಡಿಸಿದ ಮಂಜುಳಾ, ಆರೋಪಿಗೆ ಮನೆಯಿಂದ ತೆರಳುವಂತೆ ಸೂಚಿಸಿದರೂ ಆತ ಒಪ್ಪಲಿಲ್ಲ. ಈ ವೇಳೆ ಜೋರಾಗಿ ಕಿರುಚಿಕೊಂಡು ಅಕ್ಕ ಪಕ್ಕದವರನ್ನು ಕರೆಯುವ ಪ್ರಯತ್ನ ಮಾಡಿದ್ದರು. ಇದರಿಂದ ಕುಪಿತಗೊಂಡ ಆರೋಪಿ, ಆಕೆಯ ಕುತ್ತಿಗೆ ಕತ್ತರಿಸಿ ಕೊಲೆ ಮಾಡಿ ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಏಡ್ಸ್ ಬಗ್ಗೆ ನಿಮಗೆ ಗೊತ್ತಿರದ ಭಯಾನಕ ಸಂಗತಿಗಳು

ಕೊಲೆ ಪ್ರಕರಣ ದಾಖಲಿಸಿಕೊಂಡ ಸುಬ್ರಮಣ್ಯ ನಗರ ಠಾಣೆ ಪೊಲೀಸರು, ಆರೋಪಿಯ ಪತ್ತೆಗೆ ಮುಂದಾದಾಗ ಅವರ ನೆರವಿಗೆ ಬಂದಿದ್ದು ಸಿಸಿ ಕ್ಯಾಮೆರಾಗಳು. ಮಂಜುಳಾ ಅವರ ಮನೆ ಸಮೀಪದಲ್ಲೇ ಇದ್ದ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಕೊಲೆ ನಡೆದ ರಾತ್ರಿ ಆಟೋದಲ್ಲಿಇಬ್ಬರೂ ಬಂದಿಳಿದಿರುವುದು, ಬಳಿಕ ಆತ ಒಬ್ಬನೇ ಮನೆಯಿಂದ ತೆರಳಿರುವುದು ಗೊತ್ತಾಗಿದೆ. ಆ ನಂತರ ಮಂಜುಳಾ ಅವರ ಮೊಬೈಲ್‌ ಪರಿಶೀಲಿಸಿದಾಗ ಅದರಲ್ಲಿ ಮುಕುಂದನ ಮೊಬೈಲ್‌ ನಂಬರ್‌ ಕೂಡ ಸಿಕ್ಕಿತ್ತು. ಈ ಆಧಾರದ ಮೇಲೆ ಆರೋಪಿಯ ಜಾಡು ಹಿಡಿದ ಪೊಲೀಸರು, ಆತನನ್ನು ಬಂಧಿಸಿ ವಿಚಾರಣೆ ಬಳಿಕ ಕಾನೂನು ಕ್ರಮಕ್ಕೆ ಒಪ್ಪಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ