ಆ್ಯಪ್ನಗರ

ಮಹಿಳೆಯ ಕತ್ತು ಸೀಳಿ ಕೊಲೆ: ಜೀವಾವಧಿ ಶಿಕ್ಷೆ

ತಮಿಳುನಾಡು ಮೂಲದ ವಿವಾಹಿತ ಮಹಿಳೆಯನ್ನು ಬೆಂಗಳೂರಿಗೆ ಕರೆಸಿಕೊಂಡು ಕತ್ತು ಸೀಳಿ ಕೊಲೆ ಮಾಡಿ ಆಭರಣ ದೋಚಿದ್ದ ಶಿವಲಿಂಗೇಗೌಡ ಎಂಬಾತನಿಗೆ ಜೀವಾವಧಿ ಶಿಕ್ಷೆ ಮತ್ತು 25 ಸಾವಿರ ರೂ. ದಂಡ ವಿಧಿಸಿ ಸೆಷನ್ಸ್‌ ನ್ಯಾಯಾಲಯ ತೀರ್ಪು ನೀಡಿದೆ.

Vijaya Karnataka 27 Apr 2019, 5:00 am
ಬೆಂಗಳೂರು: ತಮಿಳುನಾಡು ಮೂಲದ ವಿವಾಹಿತ ಮಹಿಳೆಯನ್ನು ಬೆಂಗಳೂರಿಗೆ ಕರೆಸಿಕೊಂಡು ಕತ್ತು ಸೀಳಿ ಕೊಲೆ ಮಾಡಿ ಆಭರಣ ದೋಚಿದ್ದ ಶಿವಲಿಂಗೇಗೌಡ ಎಂಬಾತನಿಗೆ ಜೀವಾವಧಿ ಶಿಕ್ಷೆ ಮತ್ತು 25 ಸಾವಿರ ರೂ. ದಂಡ ವಿಧಿಸಿ ಸೆಷನ್ಸ್‌ ನ್ಯಾಯಾಲಯ ತೀರ್ಪು ನೀಡಿದೆ.
Vijaya Karnataka Web woman murder life imprisonment
ಮಹಿಳೆಯ ಕತ್ತು ಸೀಳಿ ಕೊಲೆ: ಜೀವಾವಧಿ ಶಿಕ್ಷೆ


ಕನ್ಯಾಕುಮಾರಿ ಜಿಲ್ಲೆಯ ಪಯನಮ್‌ ಗ್ರಾಮದ ಸುಕನ್ಯಾ ಎಂಬುವವರ ಹತ್ಯೆ ಪ್ರಕರಣದಲ್ಲಿ ಈ ಶಿಕ್ಷೆಯಾಗಿದೆ.

ತನ್ನ ಪತಿ ಸ್ಟಾಲಿನ್‌ ಹಾಗೂ ಇಬ್ಬರು ಮಕ್ಕಳ ಜೊತೆ ತನ್ನ ಗ್ರಾಮದಲ್ಲಿ ವಾಸವಿದ್ದ ಸುಕನ್ಯಾ, ಉಪಜೀವನಕ್ಕಾಗಿ ಟೀ ಅಂಗಡಿ ಇಟ್ಟುಕೊಂಡಿದ್ದರು. ಈಕೆಗೆ ಫೋನ್‌ನಲ್ಲಿ ಆಕಸ್ಮಿಕವಾಗಿ ಶಿವಲಿಂಗೇಗೌಡನ ಪರಿಚಯವಾಗಿತ್ತು. ಬೆಂಗಳೂರಿನಲ್ಲಿ ಒಟ್ಟಿಗೆ ಜೀವನ ನಡೆಸೋಣ, ಇಲ್ಲಿಗೆ ಬರುವಂತೆ ಆತ ಹೇಳಿದ್ದ.

2011ರ ಜ.28ರಂದು ಸಹೋದರನ ಮನೆಗೆ ಹೋಗಿ ಬರುತ್ತೇನೆ ಎಂದು ಮನೆ ತೊರೆದಿದ್ದ ಸುಕನ್ಯಾ, ಜ್ಞಾನಭಾರತಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ವಾಸವಿದ್ದ ಶಿವಲಿಂಗೇಗೌಡನ ಬಳಿ ಬಂದಿದ್ದಳು. ವಠಾರವೊಂದರಲ್ಲಿ ಮನೆ ಮಾಡಿಕೊಂಡು ಇಬ್ಬರು ಒಂದೆರಡು ದಿನ ವಾಸವಿದ್ದರು. ಆದರೆ, ಆಕೆಯ ಮೈ ಮೇಲೆ ಇದ್ದ ಆಭರಣಗಳ ಮೇಲೆ ಕಣ್ಣು ಹಾಕಿದ್ದ ಶಿವಲಿಂಗೇಗೌಡ, ಅವುಗಳನ್ನು ಕೊಡುವಂತೆ ಒತ್ತಾಯಿಸಿದ್ದ. ಆದರೆ, ಅದಕ್ಕೆ ಆಕೆ ನಿರಾಕರಿಸಿದ್ದಳು. ಹೇಗಾದರೂ ಮಾಡಿ ಒಡವೆ ದೋಚಬೇಕು ಎಂದು ಸಂಚು ರೂಪಿಸಿ ಹಾರ್ಡ್‌ವೇರ್‌ ಮಳಿಗೆಯಲ್ಲಿ ಚಾಕುವೊಂದನ್ನು ಖರೀದಿಸಿದ್ದ. 2011ರ ಫೆ.1ರಂದು ಸಂಜೆ 7 ಗಂಟೆಗೆ ವಾಯುವಿಹಾರಕ್ಕೆ ಕರೆದೊಯ್ಯುವ ನೆಪದಲ್ಲಿ ರೈಲ್ವೆ ಬಡಾವಣೆ ಭವಾನಿ ನಗರದ ರಸ್ತೆ ಬದಿಗೆ ಸುಕನ್ಯಾಳನ್ನು ಕರೆದೊಯ್ದು ಕತ್ತು ಸೀಳಿ ಕೊಲೆ ಮಾಡಿ ಆಭರಣವನ್ನು ದೋಚಿ ಪರಾರಿಯಾಗಿದ್ದ.

ಅಪರಿಚಿತ ಮಹಿಳೆಯ ಕೊಲೆ ಕೇಸ್‌ ದಾಖಲಿಸಿಕೊಂಡ ಜ್ಞಾನಭಾರತಿ ಠಾಣೆ ಪೊಲೀಸರು, ತನಿಖೆ ನಡೆಸಿದಾಗ ಆಕೆಯ ಬಳಿ ಲಭ್ಯವಾದ ಫೋನ್‌ ನಂಬರ್‌ನಿಂದ ಸಂಬಂಧಿಕರ ಗುರುತು ಪತ್ತೆಯಾಗಿತ್ತು. ನಂತರ ತನಿಖೆ ನಡೆಸಿ ಹಂತಕನನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ಪೂರ್ಣಗೊಂಡು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಜೀವಾವಧಿ ಶಿಕ್ಷೆ ಮತ್ತು 25 ಸಾವಿರ ರೂ. ದಂಡ ವಿಧಿಸಿ ನ್ಯಾಯಾಧೀಶರಾದ ಶಿವಶಂಕರ್‌ ಬಿ.ಅಮರಣ್ಣವರ್‌ ತೀರ್ಪು ನೀಡಿದ್ದಾರೆ.

ಪ್ರಕರಣದಲ್ಲಿ ಸರಕಾರಿ ಅಭಿಯೋಜಕರಾಗಿ ಚನ್ನಪ್ಪ ಜಿ.ಹರಸೂರ ವಾದ ಮಂಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ