ಆ್ಯಪ್ನಗರ

ಸಿಡಿಲಿಗೆ ಮಹಿಳೆ ಬಲಿ

ಚಿಕ್ಕಹೊಸಹಳ್ಳಿಯ ಗೌರಮ್ಮ (70) ಮೃತರು. ವಿಧವೆಯಾಗಿದ್ದ ಇವರು ಕರಕಲಘಟ್ಟ ಜನತಾ ಕಾಲೊನಿಯಲ್ಲಿರುವ ಕೈವಾರ ನಾರಾಯಣ ತಾತಯ್ಯನವರ ಆಶ್ರಮದಲ್ಲಿ ಸೇವೆ ಮಾಡುತ್ತಿದ್ದರು. ಶನಿವಾರ ಸಂಜೆ ಎಂದಿನಂತೆ ಪೂಜೆ ಮುಗಿಸಿ ಆಶ್ರಮದಲ್ಲೇ ಮಲಗಿದ್ದಾರೆ. ಆ ವೇಳೆ ಸಿಡಿಲು ಬಡಿದು ಗೌರಮ್ಮ ಸುಟ್ಟು ಕರಕಲಾಗಿದ್ದಾರೆ.

Vijaya Karnataka 28 May 2019, 5:00 am
ಆನೇಕಲ್‌: ಸಿಡಿಲು ಬಡಿದು ಮಹಿಳೆಯೊಬ್ಬರು ಮೃತಪಟ್ಟಿರುವುದು ತಡವಾಗಿ ಬೆಳಕಿಗೆ ಬಂದಿದೆ.
Vijaya Karnataka Web women killed by thunderbolt
ಸಿಡಿಲಿಗೆ ಮಹಿಳೆ ಬಲಿ


ಚಿಕ್ಕಹೊಸಹಳ್ಳಿಯ ಗೌರಮ್ಮ (70) ಮೃತರು. ವಿಧವೆಯಾಗಿದ್ದ ಇವರು ಕರಕಲಘಟ್ಟ ಜನತಾ ಕಾಲೊನಿಯಲ್ಲಿರುವ ಕೈವಾರ ನಾರಾಯಣ ತಾತಯ್ಯನವರ ಆಶ್ರಮದಲ್ಲಿ ಸೇವೆ ಮಾಡುತ್ತಿದ್ದರು. ಶನಿವಾರ ಸಂಜೆ ಎಂದಿನಂತೆ ಪೂಜೆ ಮುಗಿಸಿ ಆಶ್ರಮದಲ್ಲೇ ಮಲಗಿದ್ದಾರೆ. ಆ ವೇಳೆ ಸಿಡಿಲು ಬಡಿದು ಗೌರಮ್ಮ ಸುಟ್ಟು ಕರಕಲಾಗಿದ್ದಾರೆ.

ಇವರಿಗೆ ಕರಕಲಘಟ್ಟದ ವ್ಯಕ್ತಿಯೊಬ್ಬರು ಹಣ ನೀಡಬೇಕಿತ್ತು. ಇದಕ್ಕಾಗಿ ಅವರು ಆಶ್ರಮಕ್ಕೆ ಭಾನುವಾರ ಭೇಟಿ ನೀಡಿದ್ದರು. ಬಾಗಿಲು ಮುಚ್ಚಿದ್ದರಿಂದ ವಾಪಸು ಹೋಗಿದ್ದರು. ಸೋಮವಾರ ಮರಳಿ ಹಣ ನೀಡಲು ಹೋದಾಗಲೂ ಬಾಗಿಲು ಮುಚ್ಚಿತ್ತು. ದುರ್ವಾಸನೆ ಗಮನಿಸಿ ಮೃತರ ಸಂಬಂಧಿಕರಿಗೆ ವಿಷಯ ತಿಳಿಸಿದ್ದಾರೆ. ಸಂಬಂಧಿಕರು ಸ್ಥಳಕ್ಕೆ ಬಂದು ಬಾಗಿಲು ಒಡೆದು ನೋಡಿದಾಗ ಮಹಿಳೆ ಸುಟ್ಟು ಕರಕಲಾಗಿರುವುದು ಕಂಡು ಬಂದಿದೆ.

ಕಿವಿಗೆ ಹಾನಿ:


ಭಾನುವಾರ ರಾತ್ರಿ ತೆಲಗರಹಳ್ಳಿ ಗೇಟ್‌ ಸಮೀಪದ ಗೊಲ್ಲರ ಗೋಪಾಲಪ್ಪ ಎಂಬುವವರ ಮನೆ ಬಳಿ ಸಿಡಿಲು ಬಡಿದಿದ್ದು, ಮನೆಯಲ್ಲಿದ್ದ ಟಿವಿ ಛಿದ್ರಗೊಂಡಿದೆ. ಸಿಡಿಲಿನ ಶಬ್ದಕ್ಕೆ 14 ವರ್ಷದ ರಘು ಎಂಬಾತನ ಕಿವಿಯಲ್ಲಿ ರಕ್ತ ಬಂದಿದ್ದು, ಉಳಿದ ಮೂವರ ಕಿವಿಗಳು ಹಾನಿಗೊಂಡಿವೆ. ಅಲ್ಲದೇ ಮಳೆ ಗಾಳಿಗೆ ವಿದ್ಯುತ್‌ ಕಂಬಗಳು ಹಾಗೂ ಮರಗಳು ನೆಲಕ್ಕುರುಳಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ