ಆ್ಯಪ್ನಗರ

4ನೇ ಮಹಡಿಯಿಂದ ಬಿದ್ದು ಯುವಕ ಸಾವು

ಅಮೃತಹಳ್ಳಿ 8ನೇ ಕ್ರಾಸ್‌ನಲ್ಲಿನ ನಿರ್ಮಾಣ ಹಂತದ ಕಟ್ಟಡವೊಂದರ 4ನೇ ಮಹಡಿಯಿಂದ ಬಿದ್ದು ವೆಂಕಟೇಶ್‌ (24) ಎಂಬುವವರು ಮೃತಪಟ್ಟಿದ್ದಾರೆ.

Vijaya Karnataka 12 Jun 2019, 5:00 am
ಬೆಂಗಳೂರು : ಅಮೃತಹಳ್ಳಿ 8ನೇ ಕ್ರಾಸ್‌ನಲ್ಲಿನ ನಿರ್ಮಾಣ ಹಂತದ ಕಟ್ಟಡವೊಂದರ 4ನೇ ಮಹಡಿಯಿಂದ ಬಿದ್ದು ವೆಂಕಟೇಶ್‌ (24) ಎಂಬುವವರು ಮೃತಪಟ್ಟಿದ್ದಾರೆ.
Vijaya Karnataka Web youth fell from 4th flooe and dead
4ನೇ ಮಹಡಿಯಿಂದ ಬಿದ್ದು ಯುವಕ ಸಾವು


ಘಟನೆ ನಡೆದಿರುವ ಕಟ್ಟಡದಲ್ಲೇ ಎಲೆಕ್ಟ್ರಿಕಲ್‌ ಕೆಲಸ ಮಾಡುತ್ತಿದ್ದ ವೆಂಕಟೇಶ್‌, ಅದೇ ಕಟ್ಟಡದ ನೆಲ ಮಹಡಿಯಲ್ಲಿ ಇತರ ಕಾರ್ಮಿಕರ ಜೊತೆ ವಾಸವಿದ್ದರು.

ಸೋಮವಾರ ರಾತ್ರಿ 9.30ರ ಸುಮಾರಿಗೆ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದ ವೆಂಕಟೇಶ್‌, ನಾಲ್ಕನೇ ಮಹಡಿಗೆ ಹೋಗಿದ್ದರು. ಬಹಳ ಹೊತ್ತಿನವರೆಗೆ ಮಾತನಾಡುತ್ತಾ ನಿಂತಿದ್ದ ವೇಳೆ ಮೇಲಿಂದ ಬಿದ್ದು ಮೃತಪಟ್ಟಿದ್ದಾರೆ. ಮಂಗಳವಾರ ಬೆಳಗ್ಗೆ ನೆರೆಹೊರೆಯವರು ಮೃತದೇಹವನ್ನು ಗಮನಿಸಿ ಅಮೃತಹಳ್ಳಿ ಪೊಲೀಸಗೆ ಮಾಹಿತಿ ನೀಡಿದ್ದಾರೆ.

ಆತ ಫೋನ್‌ನಲ್ಲಿ ಯುವತಿಯ ಜೊತೆ ಮಾತನಾಡುತ್ತಿದ್ದ ಎಂದು ಜೊತೆಗಿದ್ದವರು ಹೇಳಿದ್ದಾರೆ. ಯಾರೊಂದಿಗೆ ಮಾತನಾಡುತ್ತಿದ್ದ ಎಂದು ಗೊತ್ತಾಗಿಲ್ಲ. ಕೊಠಡಿಯಲ್ಲಿ ಮದ್ಯದ ಬಾಟಲಿ ಪತ್ತೆಯಾಗಿದ್ದು, ಕುಡಿದ ಅಮಲಿನಲ್ಲಿ ಬಿದ್ದಿರಬಹುದು. ಜೊತೆಗಿದ್ದವರು ನಿದ್ರೆಗೆ ಜಾರಿದ್ದ ಕಾರಣ ವೆಂಕಟೇಶ್‌ ಕೆಳಗೆ ಬಿದ್ದಿರುವುದು ಗೊತ್ತಾಗಿರಲಿಲ್ಲ. ಈ ಸಂಬಂಧ ಅಮೃತಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ