ಆ್ಯಪ್ನಗರ

ಮಂಡ್ಯದಲ್ಲಿ ದೇವಾಲಯದ ಗರ್ಭಗುಡಿಯಲ್ಲೇ ಯುವಕನ ಹತ್ಯೆ

Vijaya Karnataka Web 6 Apr 2019, 10:04 am
ಮಂಡ್ಯ: ನಗರದ ಗುತ್ತಲು ಬಡಾವಣೆ ಮಾರುತಿ ನಗರದ ಶ್ರೀ ಕಾಳಿಕಾಂಬ(ಕಾಳಮ್ಮ) ದೇವಾಲಯದ ಗರ್ಭಗುಡಿಯಲ್ಲೇ ದುಷ್ಕರ್ಮಿಗಳು ವ್ಯಕ್ತಿಯೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೆ ಮಾಡಿದ್ದಾರೆ .
Vijaya Karnataka Web Murder case


ಮಾರುತಿನಗರ (ಗೂಬೆಹಳ್ಳ) ನಿವಾಸಿ ನಂದಾ(24) ಮೃತ ಯುವಕ. ಮಾರುತಿ ನಗರ ನಿವಾಸಿ ಅಜಯ್ , ಬಸವನಗುಡಿ ನಿವಾಸಿ ಚಂದ್ರು ಹಾಗೂ ಇತರರು ಕೊಲೆ ಆರೋಪಿಗಳು.

ಕೊಲೆಗೀಡಾದ ನಂದ ಶುಕ್ರವಾರ ಮಧ್ಯಾಹ್ನ ಚಂದ್ರುವಿನ ಸ್ನೇಹಿತನ ಮೇಲೆ ಕ್ಷುಲ್ಲಕ ಕಾರಣಕ್ಕೆ ಹಲ್ಲೆ ನಡೆಸಿದ್ದನು. ಈ ಕೋಪಕ್ಕೆ ಚಂದ್ರು, ಅಜಯ್ ಹಾಗೂ ಸ್ನೇಹಿತರು ಸೇರಿಕೊಂಡು ಶುಕ್ರವಾರ ರಾತ್ರಿ 8.45 ಸಮಯದಲ್ಲಿ ಕಾಳಿಕಾಂಬ ದೇವಾಲಯಕ್ಕೆ ಹೋಗಿದ್ದ ನಂದ ಅವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ.

ಅಮಾವಾಸ್ಯೆ ಹಿನ್ನೆಲೆಯಲ್ಲಿ ತಡೆ ಹೊಡೆಯುವುದಕ್ಕಾಗಿ ನಂದ ದೇವಾಲಯಕ್ಕೆ ಹೋಗಿದ್ದೇನೆ. ಇದನ್ನೇ ಹೊಂಚು ಹಾಕಿ ಕಾಯುತ್ತಿದ್ದ ಆರೋಪಿಗಳು ಏಕಾಏಕಿ ದೇವಾಲಯಕ್ಕೆ ನುಗ್ಗಿ ನಂದನ ಮೇಲೆ ಹಲ್ಲೆ ನಡೆಸಿದ್ದಾರೆ.‌ ಈ ವೇಳೆ ತಪ್ಪಿಸಿಕೊಳ್ಳುವ ಭರದಲ್ಲಿ ನಂದ ದೇಗುಲದ ಗರ್ಭಗುಡಿಯ ನುಗ್ಗಿದ್ದಾನೆ. ಅಲ್ಲಿಗೂ ಹೋದ ಆರೋಪಿಗಳು ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.

ವಿಷಯ ತಿಳಿದ ಪೊಲೀಸರು ತೀವ್ರ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ನಂದ ಅವರನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ ಆದರೆ ಚಿಕಿತ್ಸೆ ಫಲಿಸದೆ ಗಾಯಾಳು ನಂದಾ ಜಿಲ್ಲಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಮಂಡ್ಯ ಪೂರ್ವ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ