ಆ್ಯಪ್ನಗರ

ಪತ್ನಿಯ ಕೊಂದೆನೆಂದು ಪತಿ ಶರಣು: ಬದುಕಿದ್ದ ಪತ್ನಿ

ಪತ್ನಿಯನ್ನು ತಾನು ಕತ್ತು ಹಿಚುಕಿ ಸಾಯಿಸಿದ್ದು, ಅರೆಸ್ಟ್‌ ಮಾಡಿ ಎಂದು ಯುವಕನೊಬ್ಬ ಪೀಣ್ಯ ಪೊಲೀಸ್‌ ಠಾಣೆಗೆ ಬಂದು ನಿಂತಿದ್ದ.

TNN 31 Oct 2017, 11:55 am
ಬೆಂಗಳೂರು: ಪತ್ನಿಯನ್ನು ತಾನು ಕತ್ತು ಹಿಚುಕಿ ಸಾಯಿಸಿದ್ದು, ಅರೆಸ್ಟ್‌ ಮಾಡಿ ಎಂದು ಯುವಕನೊಬ್ಬ ಪೀಣ್ಯ ಪೊಲೀಸ್‌ ಠಾಣೆಗೆ ಬಂದು ನಿಂತಿದ್ದ. ಪತ್ನಿಯ ಶವ ತಾನು ನಡೆಸುತ್ತಿರುವ ಕಾಂಡಿಮೆಂಟ್‌ ಸ್ಟೋರ್‌ನಲ್ಲಿದೆ, ಜಾಲಹಳ್ಳಿ ಮತ್ತು ನೆಲಮಂಗಲದಲ್ಲಿರುವ ನನ್ನ ಸಂಬಂಧಿಕರಿಗೆ ವಿಷಯ ತಿಳಿಸಿ. ನನ್ನ ಮೂರು ವರ್ಷದ ಮಗಳಿಗೆ ಅವಳ ಅಮ್ಮನನ್ನು ನಾನು ಕೊಂದಿರುವ ವಿಷಯ ತಿಳಿದಿಲ್ಲ ಎಂದು ಪೊಲೀಸರಿಗೆ ಹೇಳಿದ್ದಾನೆ.
Vijaya Karnataka Web youth surrenders after killing wife police find her alive at their store
ಪತ್ನಿಯ ಕೊಂದೆನೆಂದು ಪತಿ ಶರಣು: ಬದುಕಿದ್ದ ಪತ್ನಿ


ಆರೋಪಿ ಕೆ. ರಘುವಿನ ಹೇಳಿಕೆಯಂತೆ ಸ್ಥಳಕ್ಕೆ ಹೋದಾಗ ರಘು ಅವರ ಪತ್ನಿ ಪುಷ್ಪಾವತಿ ಕಾಂಡಿಮೆಂಟ್‌ ಸ್ಟೋರ್‌ನಲ್ಲಿ ಕುಸಿದು ಬಿದ್ದಿರುವುದು ಕಂಡು ಬಂದಿದೆ. ಉಸಿರಾಡುತ್ತಿದ್ದ ಮಹಿಳೆಯನ್ನು ಪೊಲೀಸರು ಕೂಡಲೇ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ತುಮಕೂರು ರಸ್ತೆಯ ಚಿಕ್ಕನಾಯಕನಪಾಳ್ಯದಲ್ಲಿ ರಘು ಅವರ ಕಾಂಡಿಮೆಂಟ್‌ ಸ್ಟೋರ್‌ ಇದೆ. ವ್ಯಾಪಾರದ ವಿಚಾರಕ್ಕೆ ಸಂಬಂಧಿಸಿದ ಇಬ್ಬರೂ ಜಗಳವಾಡಿದ್ದು, ಪತ್ನಿಗೆ ಹೊಡೆದು ಕುತ್ತಿಗೆ ಹಿಚುಕಿದ್ದೆ, ಆಕೆ ಕುಸಿದಾಗ ಮೃತಪಟ್ಟಳೆಂದು ಭಾವಿಸಿದೆ ಎಂದು ಆರೋಪಿ ಪೊಲೀಸರಿಗೆ ತಿಳಿಸಿದ್ದಾನೆ. ಪೊಲೀಸರು ರಘು ವಿರುದ್ಧ ಕೊಲೆ ಪ್ರಯತ್ನ ಪ್ರಕರಣ ದಾಖಲಿಸಿಕೊಂಡು ಆತನನ್ನು ಬಂಧಿಸಿದ್ದಾರೆ.


Youth surrenders : A 27-year-old man, who rushed to Peenya police station at 9pm on Sunday and pleaded with folded hands that he be arrested for strangling his wife to death, triggered an hour-long drama.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ