ಆ್ಯಪ್ನಗರ

ದುಬಾರಿ ಬೈಕ್‌ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳುವ ಸೋಗಿನಲ್ಲಿ ಯುವಕನ ಮೇಲೆ ಹಲ್ಲೆ

ದುಬಾರಿ ಬೈಕ್‌ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳುವ ನೆಪದಲ್ಲಿ ಯುವಕನನ್ನು ತಡೆದು ನಿಲ್ಲಿಸಿದ್ದ ಇಬ್ಬರು ಕಿಡಿಗೇಡಿಗಳು ಬೈಕ್‌ ಕಸಿಯಲು ಯತ್ನಿಸಿ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.

Vijaya Karnataka 26 Apr 2019, 5:00 am
ಬೆಂಗಳೂರು: ದುಬಾರಿ ಬೈಕ್‌ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳುವ ನೆಪದಲ್ಲಿ ಯುವಕನನ್ನು ತಡೆದು ನಿಲ್ಲಿಸಿದ್ದ ಇಬ್ಬರು ಕಿಡಿಗೇಡಿಗಳು ಬೈಕ್‌ ಕಸಿಯಲು ಯತ್ನಿಸಿ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.
Vijaya Karnataka Web youth thrashed by youth
ದುಬಾರಿ ಬೈಕ್‌ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳುವ ಸೋಗಿನಲ್ಲಿ ಯುವಕನ ಮೇಲೆ ಹಲ್ಲೆ


ಹಲ್ಲೆಗೊಳಗಾದ ಜಯನಗರ 9ನೇ ಬ್ಲಾಕ್‌ ನಿವಾಸಿ ಗಣೇಶ್‌ಗೌಡ(24) ಎಂಬುವವರು ಕೋರಮಂಗಲ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಏ.23ರ ರಾತ್ರಿ 11.30ರಲ್ಲಿ ಗಣೇಶ್‌ ತನ್ನ ಸ್ನೇಹಿತರಾದ ವಿನಯ್‌ ರೆಡ್ಡಿ, ಅಕ್ಷಯ್‌ ಮತ್ತು ಆನಂದ್‌ ಜೊತೆ ಕೋರಮಂಗಲ 4ನೇ ಹಂತದಲ್ಲಿರುವ ರೆಸ್ಟೋರೆಂಟ್‌ಗೆ ಹೋಗಿ ತಡರಾತ್ರಿ 1 ಗಂಟೆಗೆ ಸ್ನೇಹಿತ ವಿನಯ್‌ ಜೊತೆ ಮನೆಗೆ ಮರಳುತ್ತಿದ್ದರು. ಕೋರಮಂಗಲದ ಬೆಥನಿ ಶಾಲೆ ಬಳಿ ಸ್ಕೂಟರ್‌ನಲ್ಲಿ ಹಿಂಬಾಲಿಸಿಕೊಂಡ ಬಂದ ಇಬ್ಬರು, ಗಣೇಶ್‌ ಚಲಾಯಿಸುತ್ತಿದ್ದ ಹೋಂಡಾ ಗೋಲ್ಡ್‌ವಿಂಗ್‌ ಬೈಕ್‌ನ್ನು ಅಡ್ಡಗಟ್ಟಿ ನಿಲ್ಲಿಸಿದ್ದರು. ''ಬೈಕ್‌ ಚೆನ್ನಾಗಿದೆ. ಅದರ ಮುಂದೆ ನಿಂತು ಒಂದು ಫೋಟೋ ತೆಗೆದುಕೊಳ್ಳುತ್ತೇವೆ'' ಎಂದು ಹೇಳಿ ಫೋಟೋ ತೆಗೆದುಕೊಂಡರು. ಬಳಿಕ ಒಂದು ರೌಂಡ್‌ ಹೋಗಿ ಬರುತ್ತೇವೆ ಎಂದು ಹೇಳಿ ಕೀ ಕೊಡುವಂತೆ ಕೇಳಿದ್ದಾರೆ. ಆದರೆ, ಗಣೇಶ್‌ ನಿರಾಕರಿಸಿದಾಗ ಬೈಕ್‌ ಕೀ ಕಿತ್ತುಕೊಂಡು ಬೈಕ್‌ ಸಮೇತ ಪರಾರಿಯಾಗಲು ಯತ್ನಿಸಿದ್ದಾರೆ. ಆಗ ಗಣೇಶ್‌ ಮತ್ತು ವಿನಯ್‌ ಪ್ರತಿರೋಧ ತೋರಿದಾಗ ಹಲ್ಲೆ ಮಾಡಿದ್ದಾರೆ. ಕೊನೆಗೆ ಬೈಕ್‌ನ ಕೀ ಬಿಸಾಡಿದ ದುಷ್ಕರ್ಮಿಗಳು ತಮ್ಮ ಸ್ಕೂಟರ್‌ನಲ್ಲಿ ಪರಾರಿಯಾಗಿದ್ದಾರೆ.

ಗಾಯಗೊಂಡಿದ್ದ ಗಣೇಶ್‌ ಹಾಗೂ ವಿನಯ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಹಲ್ಲೆಕೋರರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ