ಆ್ಯಪ್ನಗರ

ಭಯೋತ್ಪಾದನೆ ಚಟುವಟಿಕೆಗೆ ಯುವಜನ :ವಿಷಾದ

ಮಹಾತ್ಮರು ಜನಿಸಿರುವ ಪುಣ್ಯಭೂಮಿ ಭಾರತ . ಇಂಥ ದೇಶದಲ್ಲಿ ಜನಿಸಿರುವ ಬಹಳಷ್ಟು ಯುವಜನರು ಭಯೋತ್ಪಾದಕ ಚಟುವಟಿಕೆಯಲ್ಲಿ ತೊಡಗಿಕೊಳ್ಳುತ್ತಿರುವುದು ದುರದೃಷ್ಟಕರ ಎಂದು ಕಾಲೇಜಿನ ಸ್ಥಳೀಯ ಸಲಹಾ ಸಮಿತಿ ಅಧ್ಯಕ್ಷ ಎಚ್‌.ಉಜ್ಜಿನಪ್ಪ ಹೇಳಿದರು.

ವಿಕ ಸುದ್ದಿಲೋಕ 13 Aug 2016, 3:00 pm
ಬಸವಾಪಟ್ಟಣ: ಮಹಾತ್ಮರು ಜನಿಸಿರುವ ಪುಣ್ಯಭೂಮಿ ಭಾರತ . ಇಂಥ ದೇಶದಲ್ಲಿ ಜನಿಸಿರುವ ಬಹಳಷ್ಟು ಯುವಜನರು ಭಯೋತ್ಪಾದಕ ಚಟುವಟಿಕೆಯಲ್ಲಿ ತೊಡಗಿಕೊಳ್ಳುತ್ತಿರುವುದು ದುರದೃಷ್ಟಕರ ಎಂದು ಕಾಲೇಜಿನ ಸ್ಥಳೀಯ ಸಲಹಾ ಸಮಿತಿ ಅಧ್ಯಕ್ಷ ಎಚ್‌.ಉಜ್ಜಿನಪ್ಪ ಹೇಳಿದರು.
Vijaya Karnataka Web
ಭಯೋತ್ಪಾದನೆ ಚಟುವಟಿಕೆಗೆ ಯುವಜನ :ವಿಷಾದ


ಸ್ಥಳೀಯ ಎಲ್‌.ಸಿದ್ದಪ್ಪ ಪದವಿ ಪೂರ್ವ ಕಾಲೇಜು ಮತ್ತು ಬಾಪೂಜಿ ಶಾಲೆಯಲ್ಲಿ ಗುರುವಾರ ನಡೆದ ಪಠ್ಯ ಪೂರಕ ಚಟುವಟಿಕೆ ಕಾರ್ಯಕ್ರಮ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದ ಅಧ್ಯಕ್ಷ ತೆ ವಹಿಸಿ ಮಾತನಾಡಿದರು.

ವಿದ್ಯಾರ್ಥಿ ಜೀವನ ಸುವರ್ಣಮಯ. ವಿದ್ಯಾರ್ಥಿಗಳು ಧ್ಯೇಯ ಹಾಗೂ ಉತ್ತಮ ಸಂಸ್ಕಾರ ಬೆಳೆಸಿಕೊಳ್ಳುವ ಮೂಲಕ ತಂದೆ,ತಾಯಿ,ಗುರುವಿನ ಕೀರ್ತಿ ತರಬೇಕು ಎಂದು ಸಲಹೆ ನೀಡಿದರು.

ಜೆ ಶಶಿಧರ್‌ ಮಾತನಾಡಿ,ವಿದ್ಯಾರ್ಥಿಗಳಲ್ಲಿ ಶಿಸ್ತು ಮುಖ್ಯ. ಶಿಸ್ತು ಜೀವನದಿಂದ ಗುರಿ ಸಾಧನೆ ಸಾಧ್ಯವಿದೆ. ಪ್ರಸ್ತುತ ಬೇಡಿಕೆಯಿರುವ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಂಡು,ಆಧ್ಯಯನ ಮಾಡಿದಲ್ಲಿ ಉದ್ಯೋಗ ಸುಲಭ ಪಡೆಯಬಹುದು ಎಂದು ತಿಳಿಸಿದರು.

ಪ್ರಾಚಾರ್ಯ ರೇವಣನಾಯ್ಕ , ಬಾಪೂಜಿ ಹಿರಿಯ ಪ್ರಾಥಮಿಕ ಶಾಲೆಯ ಸ್ಥಳೀಯ ಸಲಹಾ ಸಮಿತಿ ಅಧ್ಯಕ್ಷ ಡಾ. ಬಿ.ಎನ್‌ ರಂಗಪ್ಪ ಮಾತನಾಡಿದರು. ಉಪನ್ಯಾಸಕ ಕೆ.ವಿ ಚಿದಾನಂದ್‌ ಬರೆದ ಸಮಾಜ ಶಾಸ್ತ್ರದ ಪ್ರಶ್ನೋತ್ತರ ಮಾಲಿಕೆ ಪುಸ್ತಕ ಬಿಡುಗಡೆ ಮಾಡಲಾಯಿತು.

ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಸ್ಥಳೀಯ ಸಲಹಾ ಸಮಿತಿ ಸದಸ್ಯರಾದ,ಎಂ.ಪ್ರಕಾಶ್‌,ಬಿ.ಜಿ.ರುದ್ರೇಶ್‌, ಎಲ್‌.ಜಿ.ಹಾಲೇಶಪ್ಪ, ಕೆ.ಜಿ.ಮಂಜುನಾಥಸ್ವಾಮಿ, ಬಿ.ಜಿ.ನಾಗರಾಜ್‌, ಎನ್‌.ವಿ.ರಮೇಶ್‌, ಎಂ.ಬಿ.ರಾಜಪ್ಪ, ಡಿ.ಆರ್‌.ರಂಗಸ್ವಾಮಿ,ಮುಖ್ಯ ಶಿಕ್ಷ ಕ ಶ್ರೀಧರ್‌, ಶಿಕ್ಷ ಕ ಎಲ್‌.ಜಿ ಮಧುಕುಮಾರ್‌ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ