ಆ್ಯಪ್ನಗರ

ಮಾದಿಗ ಸಮಾಜದಲ್ಲಿ ಸಂಘಟನೆ ಕೊರತೆ

ತಾಲೂಕಿನ ಹುಲಿಕಟ್ಟಿ ಗ್ರಾಮದ ಗುಳೇದ ಲಕ್ಕಮ್ಮದೇವಿ ದೇವಸ್ಥಾನದ ಸಮುದಾಯ ಭವನದಲ್ಲಿ ಭಾನುವಾರ ನಡೆದ ತಾಲೂಕು ಮಾದಿಗ ಸಮಾಜದ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ತಾಲೂಕು ಮಾದಿಗರ ಮಹಾಸಭಾ ತರಲು ನಿರ್ಣಯಿಸಲಾಯಿತು.

ವಿಕ ಸುದ್ದಿಲೋಕ 16 Aug 2016, 2:00 pm
ಹರಪನಹಳ್ಳಿ: ತಾಲೂಕಿನ ಹುಲಿಕಟ್ಟಿ ಗ್ರಾಮದ ಗುಳೇದ ಲಕ್ಕಮ್ಮದೇವಿ ದೇವಸ್ಥಾನದ ಸಮುದಾಯ ಭವನದಲ್ಲಿ ಭಾನುವಾರ ನಡೆದ ತಾಲೂಕು ಮಾದಿಗ ಸಮಾಜದ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ತಾಲೂಕು ಮಾದಿಗರ ಮಹಾಸಭಾ ತರಲು ನಿರ್ಣಯಿಸಲಾಯಿತು.
Vijaya Karnataka Web
ಮಾದಿಗ ಸಮಾಜದಲ್ಲಿ ಸಂಘಟನೆ ಕೊರತೆ


ತಾಪಂ ಸದಸ್ಯ ಹುಲಿಕಟ್ಟಿ ಚಂದ್ರಪ್ಪ ಮಾತನಾಡಿ, ತಾಲೂಕಿನಲ್ಲಿ ಬಹುಸಂಖ್ಯಾತರಾಗಿರುವ ಮಾದಿಗ ಸಮಾಜಕ್ಕೆ ಸಂಘಟನೆ ಕೊರತೆಯಿದ್ದು, ಶೈಕ್ಷ ಣಿಕ, ರಾಜಕೀಯವಾಗಿ ಕಡೆಗಣಿಸಲಾಗಿದೆ. ಮಕ್ಕಳನ್ನು ಶೈಕ್ಷ ಣಿವಂತರನ್ನಾಗಿ ಮಾಡುವ ಅಗತ್ಯವಿದೆ. ಮಹಾಸಭಾದ ಅಧ್ಯಕ್ಷ ರನ್ನು ಆಯ್ಕೆ ಮಾಡುವ ಮೂಲಕ ಶಕ್ತಿ ಪ್ರದರ್ಶನ ಮಾಡಬೇಕಿದೆ ಎಂದು ತಿಳಿಸಿದರು.

ವಕೀಲ ಹಲಗೇರಿ ಮಂಜಪ್ಪ ಮಾತನಾಡಿ, ಚದುರಿ ಹೋದ ಸಮಾಜವನ್ನು ಮೇಲ್ವರ್ಗದ ಸಮಾಜದವರು ಬಳಸಿಕೊಳ್ಳುತ್ತಿದ್ದಾರೆ. ಸಮಾಜಕ್ಕೆ ಅನ್ಯಾಯವಾದರೂ ಯಾರು ಧ್ವನಿ ಎತ್ತುತ್ತಿಲ್ಲ. ತಾಲೂಕಿನಲ್ಲಿ 40 ಸಾವಿರ ಮತದಾರರಿದ್ದರೂ ರಾಜಕೀಯದಲ್ಲಿ ಬೆರಳೆಣಿಕಯಷ್ಟು ಸ್ಥಾನವೂ ಸಿಕ್ಕಿಲ್ಲ ಎಂದು ಹೇಳಿದರು.

ವಕೀಲ ಪುಣಬಗಟ್ಟಿ ಎಸ್‌.ನಿಂಗಪ್ಪ ಮಾತನಾಡಿ, ಎಲ್ಲೆಂದರಲ್ಲಿ ಮಾದಿಗರ ಮೇಲೆ ಹಲ್ಲೆ, ದೌರ್ಜನ್ಯ ನಡೆಯುತ್ತಿವೆ. ಮಾದಿಗರು ತಲೆಮಾರುಗಳಿಂದ ಉಳುಮೆ ಮಾಡಿಕೊಂಡು ಬಂದಿರುವ ಬಗರ್‌ ಹುಕುಂ ಸಾಗುವಳಿದಾರರಿಗೆ ಪಟ್ಟಾ ನೀಡುತ್ತಿಲ್ಲ. ಶಾಶ್ವತವಾದ ಹಕ್ಕುಗಳಿಗಾಗಿ ಹೋರಾಟ ನಡೆಯಬೇಕಿದೆ ಎಂದು ತಿಳಿಸಿದರು.

ನೂತನ ಅಧ್ಯಕ್ಷ ಯರಬಾಳ ಆರ್‌.ಹನುಮಂತಪ್ಪ ಮಾತನಾಡಿ, ಮಾದಿಗ ಜನಾಂಗದ ಏಳ್ಗೆಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಎಂದರು. ತಾ.ಪಂ.ಸದಸ್ಯ ಒ.ರಾಮಪ್ಪ ಮಾತನಾಡಿ, ನಮ್ಮಲ್ಲಿರುವ ದ್ವೇಷ, ಅಸೂಯೆ ತೊರೆದು ಅನ್ಯ ಜಾತಿಯ ಬಂಧುಗಳೊಂದಿಗೆ ಹೊಂದಾಣಿಕೆಯಿಂದ ಬದುಕಬೇಕು. ಮಾದಿಗರ ಏಳ್ಗೆ, ನೆಮ್ಮದಿಗಾಗಿ ಸಂಘಟನೆ ಅನಿವಾರ‍್ಯ ಎಂದರು.

ತಾ.ಪಂ ಮಾಜಿ ಉಪಾಧ್ಯಕ್ಷ ಎ.ಕೆ.ಜಯ್ಯಪ್ಪ, ಡಿಎಸ್‌ಎಸ್‌ ಸಂಚಾಲಕ ಕಬ್ಬಳ್ಳಿ ಮೈಲಪ್ಪ ಮುಖಂಡ ನಾಗೇಂದ್ರಪ್ಪ, ಅಂಬೇಡ್ಕರ್‌ ಸಂಘದ ಅಧ್ಯಕ್ಷ ನಿಚ್ಚವ್ವನಹಳ್ಳಿ ಭೀಮಪ್ಪ, ಕಂಚಿಕೇರಿ ಚಂದ್ರಪ್ಪ, ಅರಸೀಕೆರೆ ಮರಿಯಪ್ಪ, ಚಂದ್ರಪ್ಪ ಮಾತನಾಡಿದರು.

ಡಿ.ರಾಜಕುಮಾರ್‌, ಕೊಟ್ರೇಶಪ್ಪ, ಕಲ್ಲಹಳ್ಳಿ ಹನುಮಂತಪ್ಪ, ಚಂದ್ರಪ್ಪ, ಹುಚ್ಚಪ್ಪ, ಬಸಪ್ಪ, ಶಾಸಪ್ಪ, ಕೆ.ಡಿ.ಅಂಜಿನಪ್ಪ, ಎ.ನಾಗೇಂದ್ರಪ್ಪ, ಉಚ್ಚೆಂಗೆಪ್ಪ ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ