ಆ್ಯಪ್ನಗರ

ತಮಿಳು ಚಿತ್ರ ಪ್ರದರ್ಶನ ನಿಲ್ಲಿಸಿದ ಕರವೇ

ಕಾವೇರಿ ತೀರ್ಪು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಕಾರ್ಯಕರ್ತರು ಸೋಮವಾರ ನಗರದ ಶಿವಾಲಿ ಚಿತ್ರಮಂದಿರದಲ್ಲಿದ್ದ ತಮಿಳಿನ 'ಇಂಕೊಕ್ಕಡು' ಚಿತ್ರ ಪ್ರದರ್ಶನ ಸ್ಥಗಿತಗೊಳಿಸಿದರು.

ವಿಕ ಸುದ್ದಿಲೋಕ 13 Sep 2016, 3:00 pm
ದಾವಣಗೆರೆ: ಕಾವೇರಿ ತೀರ್ಪು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಕಾರ್ಯಕರ್ತರು ಸೋಮವಾರ ನಗರದ ಶಿವಾಲಿ ಚಿತ್ರಮಂದಿರದಲ್ಲಿದ್ದ ತಮಿಳಿನ 'ಇಂಕೊಕ್ಕಡು' ಚಿತ್ರ ಪ್ರದರ್ಶನ ಸ್ಥಗಿತಗೊಳಿಸಿದರು.
Vijaya Karnataka Web
ತಮಿಳು ಚಿತ್ರ ಪ್ರದರ್ಶನ ನಿಲ್ಲಿಸಿದ ಕರವೇ


ಕೆಆರ್‌ಎಸ್‌ನಿಂದ ತಮಿಳುನಾಡಿಗೆ 12ಸಾವಿರ ಕ್ಯೂಸೆಕ್‌ ನೀರು ಸೆ.20ರವರೆಗೆ ಬಿಡುವಂತೆ ಸುಪ್ರೀಂಕೋರ್ಟ್‌ ಮರು ತೀರ್ಪು ನೀಡಿದ್ದರಿಂದ ಜಯದೇವ ಸರ್ಕಲ್‌ ಬಳಿ ಜಮಾಯಿಸಿದ ಕಾರ್ಯಕರ್ತರು ಶಿವಾಲಿ ಚಿತ್ರಮಂದಿರಕ್ಕೆ ತೆರಳಿ ಮುತ್ತಿಗೆ ಹಾಕಿ, ಚಿತದ್ರ ಪೋಸ್ಟರ್‌ ಹರಿದು ಹಾಕಿದರು.

ಚಿತ್ರ ನಿಲ್ಲಿಸುವಂತೆ ಮಾಲೀಕರ ಜತೆ ವಾಗ್ವಾದ ನಡೆಸಿದರು. ಎಲ್ಲ ಚಿತ್ರಮಂದಿರಗಳಲ್ಲಿ ತಮಿಳು ಪ್ರದರ್ಶನ ನಿಲ್ಲಿಸಿದರೆ, ನಾವು ನಿಲ್ಲಿಸುತ್ತೇವೆ. ಇಲ್ಲದಿದ್ದರೆ ನಾಳೆಯಿಂದ ಪ್ರದರ್ಶಿಸುತ್ತೇವೆæ ಎಂದು ಮಾಲೀಕರು ತಿಳಿಸಿದರು.

ವೇದಿಕೆ ಜಿಲ್ಲಾಧ್ಯಕ್ಷ ರಾಮೇಗೌಡ ಇತರೆ ಕಾರ್ಯಕರ್ತರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ