ಆ್ಯಪ್ನಗರ

ಮಕ್ಕಳ ಸರ್ವಾಂಗೀಣ ಪ್ರಗತಿಗೆ ಸಂಸ್ಥೆ ಆದ್ಯತೆ

ಶಿಕ್ಷ ಣ ಕ್ಷೇತ್ರದಲ್ಲಿ ವಿಶಿಷ್ಟ ಛಾಪು ಮೂಡಿಸಿದ ಪಟ್ಟಣದ ಭಾರತೀಯ ವಿದ್ಯಾ ಸಂಸ್ಥೆಯು ಮೂರು ದಶಕದಿಂದ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಡಾ.ಎಚ್‌.ಪಿ. ರಾಜ್‌ಕುಮಾರ್‌ ಹೇಳಿದ

ವಿಕ ಸುದ್ದಿಲೋಕ 19 Nov 2016, 2:13 pm
ಹೊನ್ನಾಳಿ: ಶಿಕ್ಷ ಣ ಕ್ಷೇತ್ರದಲ್ಲಿ ವಿಶಿಷ್ಟ ಛಾಪು ಮೂಡಿಸಿದ ಪಟ್ಟಣದ ಭಾರತೀಯ ವಿದ್ಯಾ ಸಂಸ್ಥೆಯು ಮೂರು ದಶಕದಿಂದ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಡಾ.ಎಚ್‌.ಪಿ. ರಾಜ್‌ಕುಮಾರ್‌ ಹೇಳಿದರು.
Vijaya Karnataka Web
ಮಕ್ಕಳ ಸರ್ವಾಂಗೀಣ ಪ್ರಗತಿಗೆ ಸಂಸ್ಥೆ ಆದ್ಯತೆ


ಪಟ್ಟಣದ ಭಾರತೀಯ ವಿದ್ಯಾ ಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸ್ಥೆಯ ಬೆಳ್ಳಿ ಹಬ್ಬಕ್ಕೆ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ನೀಡಿದ 1 ಲಕ್ಷ ರೂ. ಚೆಕ್‌ ಸ್ವೀಕರಿಸಿ ಮಾತನಾಡಿದರು.

ಈ ಸಂಸ್ಥೆಯಲ್ಲಿ ಓದಿದವರು ದೇಶ-ವಿದೇಶ ಸೇರಿದಂತೆ ಎಲ್ಲ ರಂಗಗಳಲ್ಲೂ ತಮ್ಮದೇ ಛಾಪು ಮೂಡಿಸಿದ್ದಾರೆ ಎಂದು ತಿಳಿಸಿದರು. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಯೋಜನಾಧಿಕಾರಿ ಎಂ. ಜಯಕರ ಶೆಟ್ಟಿ ಮಾತನಾಡಿ,

ಸರಕಾರಿ ಶಾಲೆಗಳ ಮೂಲ ಸೌಲಭ್ಯಕ್ಕೆ ಸಂಸ್ಥೆಯಿಂದ ಧನ ಸಹಾಯ ನೀಡಲಾಗುತ್ತಿದೆ. ಆದರೆ, ಭಾರತೀಯ ವಿದ್ಯಾ ಸಂಸ್ಥೆಯ ಸಮಾಜಮುಖಿ ನಿಲುವು ಗಮನಿಸಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರು ಸಂಸ್ಥೆಗೆ ಲಕ್ಷ ರೂ. ಧನಸಹಾಯ ನೀಡಿದ್ದಾರೆ ಎಂದರು.

ಭಾರತೀಯ ವಿದ್ಯಾ ಸಂಸ್ಥೆಯ ಅಧ್ಯಕ್ಷ ಎಲ್‌.ಎಸ್‌. ವೈಶ್ಯರ್‌ ಮಾತನಾಡಿದರು. ಭಾರತೀಯ ವಿದ್ಯಾ ಸಂಸ್ಥೆಯ ಸಹ ಕಾರ್ಯದರ್ಶಿ ಎಚ್‌. ಲಿಂಗಯ್ಯ, ಖಜಾಂಚಿ ಎಚ್‌.ಎನ್‌. ಬಸವರಾಜಪ್ಪ, ನಿರ್ದೇಶಕ ಡಾ. ಶಕುಂತಲಾ ರಾಜ್‌ಕುಮಾರ್‌, ಎಚ್‌.ಎಂ. ಅರುಣ್‌ಕುಮಾರ್‌, ಕೋರಿ ಯೋಗೀಶ್‌ ಕುಳಗಟ್ಟೆ, ಜಯಪ್ಪ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಹೊನ್ನಾಳಿ ವಲಯದ ಮೇಲ್ವಿಚಾರಕ ದಯಾನಂದ್‌, ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷ ಹೊಸಕೇರಿ ಸುರೇಶ್‌, ಬಿವಿಎಸ್‌ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷ ಕ ತಿಮ್ಮೇಶ್‌, ಪ್ರೌಢಶಾಲಾ ಮುಖ್ಯ ಶಿಕ್ಷ ಕಿ ದೇವೀರಮ್ಮ, ಶಿಕ್ಷ ಕ ಗಿರೀಶ್‌ ನಾಡಿಗ್‌, ಸತೀಶ್‌ ಬಂಗೇರ್‌ ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ