ಆ್ಯಪ್ನಗರ

ಸಮರ್ಪಕ ನೀರು ಪೂರೈಕೆಗೆ ಕಣಿವೆಬಿಳಚಿ ಗ್ರಾಮಸ್ಥರ ಆಗ್ರಹ

ಕುಡಿವ ನೀರು ಅಸಮರ್ಪಕ ಪೂರೈಕೆ ಖಂಡಿಸಿ ಕಣಿವೆಬಿಳಚಿ ಗ್ರಾಮಸ್ಥರು ಗ್ರಾಪಂಗೆ ಬೀಗ ಜಡಿದು,ಖಾಲಿ ಕೊಡ ಪ್ರದರ್ಶಿಸುವದರೊಂದಿಗೆ ಶನಿವಾರ ಪ್ರತಿಭಟಿಸಿದರು.

ವಿಕ ಸುದ್ದಿಲೋಕ 6 Mar 2017, 8:25 am
ಬಸವಾಪಟ್ಟಣ : ಕುಡಿವ ನೀರು ಅಸಮರ್ಪಕ ಪೂರೈಕೆ ಖಂಡಿಸಿ ಕಣಿವೆಬಿಳಚಿ ಗ್ರಾಮಸ್ಥರು ಗ್ರಾಪಂಗೆ ಬೀಗ ಜಡಿದು,ಖಾಲಿ ಕೊಡ ಪ್ರದರ್ಶಿಸುವದರೊಂದಿಗೆ ಶನಿವಾರ ಪ್ರತಿಭಟಿಸಿದರು.
Vijaya Karnataka Web
ಸಮರ್ಪಕ ನೀರು ಪೂರೈಕೆಗೆ ಕಣಿವೆಬಿಳಚಿ ಗ್ರಾಮಸ್ಥರ ಆಗ್ರಹ


ಬಿರುಬೇಸಿಗೆಯಲ್ಲಿ ಗ್ರಾಪಂವು ಹಲವಾರು ದಿನಗಳಿಂದ ಕುಡಿಯುವ ನೀರು ಸಮರ್ಪಕ ಪೂರೈಸುತ್ತಿಲ್ಲ. ಭದ್ರಾ ನಾಲೆಯಲ್ಲೂ ನೀರಿಲ್ಲ. ಗ್ರಾಮದಲ್ಲಿ ಕೆರೆಗಳು ಇಲ್ಲ. ಗ್ರಾಪಂ ಪೂರೈಸುವ ನೀರನ್ನೇ ಜನ ನಂಬಿ ಜೀವನ ಸಾಗಿಸಬೇಕಾಗಿದೆ. ಆದರೆ ನೀರು ಸಾಕಷ್ಟು ಪ್ರಮಾಣದಲ್ಲಿ ನೀರು ದೊರಕುತ್ತಿಲ್ಲ. ಈ ಕುರಿತು ಗ್ರಾಪಂ ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳ ಗಮನಕ್ಕೆ ತಂದರೂ, ಯಾವುದೇ ಪ್ರಯೋಜನ ಆಗಿಲ್ಲ ಎಂದು ಆರೋಪಿಸಿದರು.

ಪ್ರತಿಭಟನೆ ವಿಷಯ ತಿಳಿದ ಗ್ರಾಮ ಪಂಚಾಯಿತಿ ಸದಸ್ಯರು,ಜನರನ್ನು ಸಂತೈಸಿ, ವಾರದೊಳಗೆ ನೀರು ಸಮರ್ಪಕ ಪೂರೈಸಲಾಗುವುದು ಎಂದು ಭರವಸೆ ನೀಡಿದರು.

-----

ವಿದ್ಯುತ್‌ ಅಭಾವದಿಂದ ನೀರು ಸರಬರಾಜು ಪೂರೈಕೆ ಕಡಿಮೆಯಾಗುತ್ತಿದೆ. ನೀರು ಪೂರೈಸುವ ಪೈಪ್‌ನ ನಲ್ಲಿಗಳಿಗೆ ಕೆಲ ಸಾರ್ವಜನಿಕರು ನೇರ ಮೋಟಾರ್‌ ಆಳವಡಿಸಿದ್ದು, ಇದರಿಂದ ಸಮರ್ಪಕ ನೀರು ಸರಬರಾಜು ಆಗುತ್ತಿಲ್ಲ. ತಕ್ಷಣ ವಾರದೊಳಗೆ ನೀರಿನ ಸಮಸ್ಯೆ ಪರಿಹರಿಸಲಾಗುವುದು.

ಗ್ರಾ.ಪಂ.ಪಿಡಿಓ ಎಸ್‌.ಮಂಜುನಾಥ್‌.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ