ಆ್ಯಪ್ನಗರ

ಚಿಕ್ಕಬೆನ್ನೂರು ಕೆರೆ ಕಾಮಗಾರಿ ಶಾಸಕ ವೀಕ್ಷಣೆ

ಶ್ರೀ ಧರ್ಮಸ್ಥಳ ಸಂಸ್ಥೆ ಕೆರೆ ಹೂಳು ತೆಗೆಯುವ ಯೋಜನೆ ಪಾರದರ್ಶಕದಿಂದ ನಿರ್ವಹಿಸಿರುವ ರೀತಿ ಸರಕಾರವು ಯೋಜನೆಯಲ್ಲಿ ಅನುಷ್ಠಾನ ತರಲು ಯತ್ನಿಸುತ್ತಿದೆ ಎಂದು ಶಾಸಕ ವಡ್ನಾಳ್‌ ರಾಜಣ್ಣ ಹೇಳಿದರು.

ವಿಕ ಸುದ್ದಿಲೋಕ 27 Mar 2017, 9:24 am
ಸಂತೆಬೆನ್ನೂರು: ಶ್ರೀ ಧರ್ಮಸ್ಥಳ ಸಂಸ್ಥೆ ಕೆರೆ ಹೂಳು ತೆಗೆಯುವ ಯೋಜನೆ ಪಾರದರ್ಶಕದಿಂದ ನಿರ್ವಹಿಸಿರುವ ರೀತಿ ಸರಕಾರವು ಯೋಜನೆಯಲ್ಲಿ ಅನುಷ್ಠಾನ ತರಲು ಯತ್ನಿಸುತ್ತಿದೆ ಎಂದು ಶಾಸಕ ವಡ್ನಾಳ್‌ ರಾಜಣ್ಣ ಹೇಳಿದರು.
Vijaya Karnataka Web
ಚಿಕ್ಕಬೆನ್ನೂರು ಕೆರೆ ಕಾಮಗಾರಿ ಶಾಸಕ ವೀಕ್ಷಣೆ


ಸಮೀಪದ ಚಿಕ್ಕಬೆನ್ನೂರಿನ ಕೆರೆ ಹೂಳು ತೆಗೆಯುವ ಸ್ಥಳ ಭಾನುವಾರ ವೀಕ್ಷಣೆ ಮಾಡಿ,ಮಾತನಾಡಿದರು.

ಸರಕಾರವು ಜಿಲ್ಲೆಯಲ್ಲಿ ಒಂದು ಕೆರೆಯನ್ನು 'ನಮ್ಮ ಊರು, ನಮ್ಮ ಕೆರೆ' ಯೋಜನೆಯಡಿ ಆಯ್ಕೆ ಮಾಡಿ ಹೂಳು ತೆಗೆಯುತ್ತಿದೆ. ಚಿಕ್ಕಬೆನ್ನೂರಿನ ಕೆರೆ ಹೂಳು ತೆಗೆಯುವದರಿಂದ ರೈತರಿಗೆ ಅನುಕೂಲವಾಗಿದ್ದು ಮತ್ತು ದನ-ಕರು, ಪಕ್ಷಿಗಳಿಗೆ ಉಪಯುಕ್ತವಾಗಿ, ಅಂತರ್ಜಲ ಹೆಚ್ಚಲು ಸಾಧ್ಯವಾಗಿದೆ ಎಂದು ಹೇಳಿದರು.

ಸಂಸ್ಥೆಯ ಯೋಜನಾಧಿಕಾರಿ ಮಾತಾನಾಡಿ, 16 ದಿನಗಳಲ್ಲಿ 11.700 ಲೋಡ್‌ ಹೂಳು ತೆಗೆದಿದ್ದು ಸುಮಾರು 7.26.000 ಹಣ ಖರ್ಚಾಗಿದೆ. ಸುಮಾರು 10 ಎಕರೆ ವಿಸ್ತಿರ್ಣದಷ್ಟು ಹೂಳು ತೆಗೆದು ತಿಂಗಳ 31ನೇ ತಾರೀಖಿಗೆ ಪೂರ್ಣಗೊಳಿಸುತ್ತೇವೆ ಎಂದು ಮಾಹಿತಿ ನೀಡಿದರು.

ಸಂಸ್ಥೆಯ ಮೇಲ್ವಿ ಚಾರಕ ನಾಗೇಶ್‌, ಮಹಾಬಲೇಶ್‌, ವರ್ತಕ ಸಿರಾಜ್‌ ಅಹಮದ್‌, ಶಿಕ್ಷ ಕ ಎಂ.ಬಿ.ನಾಗರಾಜ್‌ ಕಾಕನೂರು, ಎಂ.ಸಿದ್ದಪ್ಪ, ಗೌಡ್ರು ಪ್ರಸನ್ನ ಕೆರೆ ಏರಿ ಸಮಿತಿ ಅಧ್ಯಕ್ಷ ಚಂದ್ರುಗೌಡ, ಕಾಂತೇಶ್‌, ನಿರಂಜನ್‌, ರಮತ್‌ವುಲ್ಲ ಇತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ