ಆ್ಯಪ್ನಗರ

ಹುಲಿಕಟ್ಟಿಯಲ್ಲಿ ಬಾಲ್ಯ ವಿವಾಹಕ್ಕೆ ಬ್ರೇಕ್‌

ಹುಡುಗಿ ಮನೆಯಲ್ಲಿ ವಿವಾಹ ಪೂರ್ವದ ಎಲ್ಲ ಸಂಪ್ರದಾಯಗಳೂ ನಿರ್ವಿಘ್ನವಾಗಿ ಮುಗಿಸಿದ್ದಾರೆ. ಇನ್ನೇನು ಮರುದಿನ ಅಂದರೆ, ಮೇ 4ಕ್ಕೆ ಮುಹೂರ್ತ ಇತ್ತು. ಅಷ್ಟೊತ್ತಿಗೆ ಇದೊಂದು ಬಾಲ್ಯ ವಿವಾಹ ಎಂಬ ಸುಳಿವು ಸಿಗುತ್ತಿದ್ದಂತೆ ಮದುವೆಗೆ ಬುಧವಾರ ಬ್ರೇಕ್‌ ಬಿದ್ದಿದೆ.

ವಿಕ ಸುದ್ದಿಲೋಕ 4 May 2017, 8:48 am
ಹರಪನಹಳ್ಳಿ : ಹುಡುಗಿ ಮನೆಯಲ್ಲಿ ವಿವಾಹ ಪೂರ್ವದ ಎಲ್ಲ ಸಂಪ್ರದಾಯಗಳೂ ನಿರ್ವಿಘ್ನವಾಗಿ ಮುಗಿಸಿದ್ದಾರೆ. ಇನ್ನೇನು ಮರುದಿನ ಅಂದರೆ, ಮೇ 4ಕ್ಕೆ ಮುಹೂರ್ತ ಇತ್ತು. ಅಷ್ಟೊತ್ತಿಗೆ ಇದೊಂದು ಬಾಲ್ಯ ವಿವಾಹ ಎಂಬ ಸುಳಿವು ಸಿಗುತ್ತಿದ್ದಂತೆ ಮದುವೆಗೆ ಬುಧವಾರ ಬ್ರೇಕ್‌ ಬಿದ್ದಿದೆ.
Vijaya Karnataka Web
ಹುಲಿಕಟ್ಟಿಯಲ್ಲಿ ಬಾಲ್ಯ ವಿವಾಹಕ್ಕೆ ಬ್ರೇಕ್‌


ತಾಲೂಕಿನ ಹುಲ್ಲಿಕಟ್ಟಿ ಗ್ರಾಮದ ಹೌಸಿ ಮೈಲಪ್ಪ ಎಂಬವರ ಪುತ್ರಿ ಹಾಗೂ ದಾವಣಗೆರೆಯ ಪ್ರದೀಪ ಎಂಬ ವರನ ಜತೆ ಮದುವೆ ಫಿಕ್ಸ್‌ ಆಗಿದೆ. ದಾವಣಗೆರೆ ನಗರದ ವರನ ಸ್ವಗೃಹದಲ್ಲಿ ಮೇ 4 ರಂದು ವಿವಾಹ ನಡೆಯಬೇಕಿತ್ತು. ಆದರೆ ಹುಡುಗಿಯ ವಯಸ್ಸು ಕೇವಲ 16 ವರ್ಷ. ಈ ಕುರಿತು ಮಹಿಳಾ ಸಾಂತ್ವನ ಕೇಂದ್ರದ ಮುಖ್ಯಸ್ಥೆ ಲೀಲಾ ಲಿಂಗರಾಜುಗೆ ಮಾಹಿತಿ ಬಂತು. ತಕ್ಷಣ ಅವರು ಪೋಲೀಸರಿಗೆ ಸುದ್ದಿ ನೀಡಿದ್ದಾರೆ. ಪಿಎಸ್‌ಐ ಸತೀಶ ಮಂಗಳವಾರ ರಾತ್ರಿ ಹುಲ್ಲಿಕಟ್ಟಿ ಗ್ರಾಮಕ್ಕೆ ತೆರಳಿ ಪೋಷಕರಿಗೆ ಅರಿವು ಮೂಡಿಸಿ ಹರಪನಹಳ್ಳಿಗೆ ಬರ ಹೇಳಿದ್ದಾರೆ.

ಬುಧವಾರ ಪಟ್ಟಣದ ಠಾಣೆಗೆ ಆಗಮಿಸಿದ ಬಾಲಕಿಯ ಪೋಷಕರಿಗೆ ಹಾಗೂ ಹುಡುಗಿಗೆ ಕೌನ್ಸಿಲಿಂಗ್‌ ನಡೆಸಿ ಬಾಲ್ಯ ವಿವಾಹ ತಪ್ಪು ಎಂದು ಮನವರಿಕೆ ಮಾಡಿದ್ದಾರೆ.

ಮುಚ್ಚಳಿಕೆ ಪತ್ರ: ಬಾಲ್ಯವಿವಾಹವನ್ನು ತಡೆದು, ಮಗಳಿಗೆ 18 ವರ್ಷ ತುಂಬುವವರೆಗೂ ವಿವಾಹ ಮಾಡುವುದಿಲ್ಲ ಎಂದು ಪೋಷಕರಿಂದ ಮುಚ್ಚಳಿಕೆ ಬರೆಸಿಕೊಂಡಿದ್ದಾರೆ.

ಪುರಸಭಾ ಸದಸ್ಯ ಬೂದಿ ನವೀನ, ಲೀಲಾ ಲಿಂಗರಾಜು, ಪಿಎಸ್‌ಐ ಸತೀಶ , ಸಿಡಿಪಿಒ ದಯಾನಂದ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ