ಆ್ಯಪ್ನಗರ

​ ​ ವಿಷ ಸೇವಿಸಿ ರೈತ ಆತ್ಮಹತ್ಯೆ

ಸಾಲಬಾಧೆಯಿಂದ ರೈತನೊಬ್ಬ ಅಡಕೆ ತೋಟದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಸಾಸ್ವೇಹಳ್ಳಿ ಸಮೀಪದ ತ್ಯಾಗದಕಟ್ಟೆಯಲ್ಲಿ ಶುಕ್ರವಾರ ನಡೆದಿದೆ.

ವಿಕ ಸುದ್ದಿಲೋಕ 29 May 2017, 9:40 pm
ಹೊನ್ನಾಳಿ : ಸಾಲಬಾಧೆಯಿಂದ ರೈತನೊಬ್ಬ ಅಡಕೆ ತೋಟದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಸಾಸ್ವೇಹಳ್ಳಿ ಸಮೀಪದ ತ್ಯಾಗದಕಟ್ಟೆಯಲ್ಲಿ ಶುಕ್ರವಾರ ನಡೆದಿದೆ.
Vijaya Karnataka Web
​ ​ ವಿಷ ಸೇವಿಸಿ ರೈತ ಆತ್ಮಹತ್ಯೆ


ಭದ್ರಾವತಿ ತಾಲೂಕಿನ ಸೈದರಕಲ್ಲಹಳ್ಳಿ ಗ್ರಾಮದ ರಮೇಶ್‌(31)ಮೃತರು. ರೈತ ಹೊನ್ನಾಳಿ ತಾಲೂಕಿನ ತ್ಯಾಗದಕಟ್ಟೆಯಲ್ಲಿ ಮೂರು ಎಕರೆ ಜಮೀನು ಹೊಂದಿದ್ದರು. ಎರಡು ಎಕರೆಯಲ್ಲಿ ಅಡಕೆ ಬೆಳೆದಿದ್ದರು. ಇದನ್ನು ಉಳಿಸಿಕೊಳ್ಳಲು ಮೂರು ಕೊಳವೆ ಬಾವಿ ಕೊರೆಸಿದ್ದರೂ, ವಿಫಲವಾಗಿದ್ದವು. ಇನ್ನೊಂದು ಎಕರೆಯಲ್ಲಿನ ಖುಷ್ಕಿ ಬೆಳೆ ಕೂಡ ಹಾನಿ ಆಗಿತ್ತು. ಇದಕ್ಕಾಗಿ ಭದ್ರಾವತಿ ಆಕ್ಸಿಸ್‌ ಬ್ಯಾಂಕ್‌ನಲ್ಲಿ 6.50 ಲಕ್ಷ ರೂ., ವಿಎಸ್‌ಎಸ್‌ಎನ್‌ನಲ್ಲಿ 25 ಸಾವಿರ ರೂ. ಮತ್ತು ಖಾಸಗಿಯಾಗಿ 25 ಸಾವಿರ ರೂ. ಸಾಲ ಮಾಡಿದ್ದರು. ಇದನ್ನು ತೀರಿಸುವ ಚಿಂತೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಹೊನ್ನಾಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ