ಆ್ಯಪ್ನಗರ

ರೈತರ ಮನೆ ಬಾಗಿಲಿಗೆ ಕೃಷಿ ಮಾಹಿತಿ

ಕೃಷಿ ಇಲಾಖೆ ಅಧಿಕಾರಿಗಳು ಸರಕಾರದ ನಾನಾ ಯೋಜನೆಗಳ ಮಾಹಿತಿ ರೈತರ ಮನೆ ಬಾಗಿಲಿಗೆ ಮುಟ್ಟಿಸುವ ಕೆಲಸ ಅರ್ಥ ಪೂರ್ಣ ಎಂದು ಸಾಸ್ವೆಹಳ್ಳಿ ತಾ.ಪಂ. ಸದಸ್ಯ ಅಬೀದ್‌ ಆಲಿ ಖಾನ್‌ ಹೇಳಿದರು.

ವಿಕ ಸುದ್ದಿಲೋಕ 3 Jun 2017, 10:12 pm
ಹುಣಸಘಟ್ಟ : ಕೃಷಿ ಇಲಾಖೆ ಅಧಿಕಾರಿಗಳು ಸರಕಾರದ ನಾನಾ ಯೋಜನೆಗಳ ಮಾಹಿತಿ ರೈತರ ಮನೆ ಬಾಗಿಲಿಗೆ ಮುಟ್ಟಿಸುವ ಕೆಲಸ ಅರ್ಥ ಪೂರ್ಣ ಎಂದು ಸಾಸ್ವೆಹಳ್ಳಿ ತಾ.ಪಂ. ಸದಸ್ಯ ಅಬೀದ್‌ ಆಲಿ ಖಾನ್‌ ಹೇಳಿದರು.
Vijaya Karnataka Web
ರೈತರ ಮನೆ ಬಾಗಿಲಿಗೆ ಕೃಷಿ ಮಾಹಿತಿ


ರಾಂಪುರ ಗ್ರಾಮದ ಶ್ರೀ ದುರ್ಗಾಂಬಿಕ ದೇವಸ್ಥಾನದ ಆವರಣದಲ್ಲಿ ಶುಕ್ರವಾರ ಕೃಷಿ ಇಲಾಖೆಯಿಂದ ಆಯೋಜಿಸಿದ್ದ ಹೋಬಳಿ ಮಟ್ಟದ ರೈತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ

ಕೃಷಿ ಹೊಂಡ ನಿರ್ಮಿಸಿಕೊಂಡ ರೈತರಿಗೆ ಚೆಕ್‌ ಹಾಗೂ ಮಣ್ಣು ಪರೀಕ್ಷೆ ಗುರುತಿನ ಪತ್ರ ವಿತರಿಸಿ ಮಾತನಾಡಿದರು. ರೈತರು ಸತರ ಬರದಿಂದ ತತ್ತರಿಸಿ ಹೋಗಿದ್ದು ಕೃಷಿ ಇಲಾಖೆ ಬಿತ್ತನೆ ಬೀಜ, ಮಣ್ಣಿನ ಸತ್ವ ಹೆಚ್ಚಿಸುವಿಕೆ, ಮಣ್ಣಿನ ಗುಣಮಟ್ಟ ಪರೀಕ್ಷೆ, ಕೃಷಿ ಯಂತ್ರೋಪಕರಣ ವಿತರಣೆ ಮುಂತಾದ ಸೌಲಭ್ಯಗಳನ್ನು ಅರ್ಹ ಪಲಾನುಭವಿಗಳಿಗೆ ನೀಡಬೇಕೆಂದರು.

ತಾಲೂಕು ಆರ್ಥಿಕ ಸಾಕ್ಷ ರರ ಕೇಂದ್ರದ ತೇಜಶ್ವರ್‌ ಮಾತನಾಡಿ, ಪ್ರಧಾನ ಮಂತ್ರಿ ದೇಶಾದ್ಯಂತ ನೀರು ಉಳಿಸಿ, ನೀರು ಮಿತವಾಗಿ ಬಳಸಿ ಎಂದು ಉಪದೇಶಿಸುತ್ತಾರೆ. ಹಳ್ಳಿಗಳ ನಲ್ಲಿಗಳಲ್ಲಿ ನೀರು ನಿರಂತರ ಚರಂಡಿಗಳಿಗೆ ಹರಿಯುತ್ತಿದ್ದರೂ, ಯಾರೂ ನಲ್ಲಿಯ ನೀರನ್ನು ನಿಲ್ಲಿಸುವುದಿಲ್ಲ. ಅಂತರ್ಜಲ ಕುಸಿದು ಕೊಳವೆ ಬಾವಿಗಳು ಬತ್ತುತ್ತಿದ್ದು, ಗ್ರಾಮಗಳ ನಲ್ಲಿಗಳ ಮುಂದೆ ನಿಂತು ದಿನವಿಡೀ ಕಾದರೂ ಹನಿ ನೀರು ಸಿಗುತ್ತಿಲ್ಲ. ನೀರನ್ನು ಹಾಳು ಮಾಡದೇ ಮಿತವಾಗಿ ಬಳಸಿ ಎಂದರು.

ತಾಲೂಕು ಕೃಷಿ ಸಹಾಯಕ ನಿರ್ದೇಶಕ ರೇವಣ ಸಿದ್ದನಗೌಡ ಮಾತನಾಡಿ, ರೈತರು ಮುಂಗಾರು ಹಂಗಾಮಿಗೆ ಭೂಮಿ ಸಿದ್ಧತೆ, ಉಪಕರಣ ಬಿತ್ತನೆ, ಕೂರಿಗೆ, ಭತ್ತದ ನಾಟಿ ಯಂತ್ರ ಸೇರಿದಂತೆ ಬಾಡಿಗೆ ರೂಪದಲ್ಲಿ ಕೃಷಿ ಪರಿಕರ ಲಭ್ಯವಿದ್ದು ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ರೈತ ಸಂವಾದ ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆಯ ಉಪತಹಸೀಲ್ದಾರ್‌ ಪರಮೇಶ್ವರ್‌ ನಾಯ್ಕ, ಆರೋಗ್ಯ ಇಲಾಖೆಯ ನಾಗರಾಜಪ್ಪ, ಜಗದೀಶ್‌ ಕೋಡಿಹಳ್ಳಿ, ಪಶುಸಂಗೋಪನೆ ಇಲಾಖೆಯ ಹನುಮಂತಪ್ಪ, ತೋಟಗಾರಿಕೆ ಇಲಾಖೆ ಹನುಮಂತಪ್ಪ, ಇಲಾಖೆಗಳ ಸೌಲಭ್ಯಗಳ ಬಗ್ಗೆ ರೈತರಿಗೆ ಮಾಹಿತಿ ನೀಡಿದರು. ಗ್ರಾಪಂ ಅಧ್ಯಕ್ಷ ಮಲ್ಲೇಶಪ್ಪ, ಪಿಡಿಒ ಉಮಾಶಂಕರ್‌, ಕಾರ್ಯದರ್ಶಿ ಬಸವರಾಜ್‌, ಕೃಷಿ ಇಲಾಖೆಯ ಕಿರಣ್‌, ತಿಪ್ಪೇಶಪ್ಪ ಗ್ರಾಪಂ ಉಪಾಧ್ಯಕ್ಷೆ, ಸದಸ್ಯರು, ಸಾಸ್ವೆಹಳ್ಳಿ ಹೋಬಳಿ 9 ಗ್ರಾಪಂ ವ್ಯಾಪ್ತಿಯ ಪ್ರಗತಿಪರ ರೈತರು, ಮಹಿಳೆಯರು ಸಂವಾದದಲ್ಲಿ ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ