ಆ್ಯಪ್ನಗರ

ನಾಯಿಗಳ ದಾಳಿಗೆ ಬಲಿಯಾದ ಕೃಷ್ಣಮೃಗ

ತಾಲೂಕಿನ ಕೊಂಡ್ಲಹಳ್ಳಿಯ ಕೋನಸಾಗರ ರಸ್ತೆಯಲ್ಲಿ ಮಂಗಳವಾರ ಬೆಳಗ್ಗೆ ನಾಯಿಗಳ ದಾಳಿಗೆ ಕೃಷ್ಣಮೃಗವೊಂದು ಬಲಿಯಾಗಿದೆ.

ವಿಕ ಸುದ್ದಿಲೋಕ 28 Jun 2017, 9:10 pm
ಮೊಳಕಾಲ್ಮುರು : ತಾಲೂಕಿನ ಕೊಂಡ್ಲಹಳ್ಳಿಯ ಕೋನಸಾಗರ ರಸ್ತೆಯಲ್ಲಿ ಮಂಗಳವಾರ ಬೆಳಗ್ಗೆ ನಾಯಿಗಳ ದಾಳಿಗೆ ಕೃಷ್ಣಮೃಗವೊಂದು ಬಲಿಯಾಗಿದೆ.
Vijaya Karnataka Web
ನಾಯಿಗಳ ದಾಳಿಗೆ ಬಲಿಯಾದ ಕೃಷ್ಣಮೃಗ


ಈ ಭಾಗದಲ್ಲಿ ಕೃಷ್ಣಮೃಗಗಳ ಹಿಂಡು ರಸ್ತೆ ಬದಿಯಲ್ಲಿ ನೀರು ಕುಡಿಯಲು ಆಗಾಗ ಬರುತ್ತಿರುತ್ತವೆ. ಈ ವೇಳೆ ನಾಯಿಗಳು ಈ ಹಿಂಡನ್ನು ಚದುರಿಸಿ ಒಂದು ಕೃಷ್ಣಮೃಗವಿನ ಮೇಲೆ ದಾಳಿ ಮಾಡಿದ್ದನ್ನು ಕಂಡ ಗ್ರಾಮಸ್ಥರು ನಾಯಿಯಿಂದ ರಕ್ಷಿಸಿದ್ದಾರೆ.

ಕೃಷ್ಣಮೃಗ ತೀವ್ರ ಗಾಯಗೊಂಡಿತ್ತು. ಈ ಮಾಹಿತಿಯನ್ನು ಅರಣ್ಯ ಇಲಾಖೆಗೆ ತಿಳಿಸಿದ್ದರಿಂದ ಸ್ಥಳಕ್ಕೆ ಅಧಿಕಾರಿಗಳು ಆಗಮಿಸಿ ಚಿಕಿತ್ಸೆ ನೀಡಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೃಷ್ಣಮೃಗ ಮೃತಪಟ್ಟಿದೆ.

ಅರಣ್ಯ ಸಿಬ್ಬಂದಿ ಪಟ್ಟಣದ ಮಹಾದೇವ ಸಸ್ಯಕ್ಷೇತ್ರದಲ್ಲಿ ಕೃಷ್ಣಮೃಗದ ಅಂತ್ಯಸಂಸ್ಕಾರ ನೆರವೇರಿಸಿದರು. ಸ್ಥಳದಲ್ಲಿ ಉಪ ವಲಯಾರಣ್ಯಾಧಿಕಾರಿ ಬಾಷಾ, ಸಿಬ್ಬಂದಿ ಸುನಿಲ್‌, ಪ್ರಸನ್ನ, ಪಶುವೈದ್ಯ ಮಾಧವ್‌, ಕೊಂಡ್ಲಹಳ್ಳಿ ಗ್ರಾಮಸ್ಥರಾದ ಎಂ.ಟಿ. ಚಂದ್ರಶೇಖರ್‌, ಕೆ.ಎಂ.ರಾಮಚಂದ್ರ, ಪ್ರಕಾಶ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ