ಆ್ಯಪ್ನಗರ

​ಸಾಲಬಾಧೆ: ಗಂಗನರಸಿ ರೈತ ಆತ್ಮಹತ್ಯೆ

ಸಾಲಬಾಧೆಯಿಂದ ಬೇಸತ್ತ ರೈತನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಗಂಗನರಸಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.

ವಿಕ ಸುದ್ದಿಲೋಕ 28 Jun 2017, 9:18 pm
ಹರಿಹರ : ಸಾಲಬಾಧೆಯಿಂದ ಬೇಸತ್ತ ರೈತನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಗಂಗನರಸಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
Vijaya Karnataka Web
​ಸಾಲಬಾಧೆ: ಗಂಗನರಸಿ ರೈತ ಆತ್ಮಹತ್ಯೆ


ಬೇತೂರು ವೀರಭದ್ರಪ್ಪರ ಪುತ್ರ ಬೇತೂರು ನಾಗರಾಜ್‌(40)ಮೃತರು. ಮೂರು ವರ್ಷಗಳಿಂದ 1 ಎಕರೆಯಲ್ಲಿ ಬೆಳೆಯುತ್ತಿದ್ದ ಭತ್ತದ ಬೆಳೆ ಒಣಗಿ ಕೈಗೆ ಬಾರದಂತಾಗಿತ್ತು. ಇದರಿಂದ ಬೇಸತ್ತು ಭತ್ತದ ಬದಲು ಮೆಕ್ಕೆಜೋಳ ಬಿತ್ತನೆ ಮಾಡಿದ್ದರು. ಆ ಬೆಳೆಯೂ ಕೂಡ ನೀರಿನ ಕೊರತೆಯಿಂದ ಕೈಗೆಟುಕಲಿಲ್ಲ.

ತಾಲೂಕಿನ ಸಾರಥಿ ಕಾಪೋರ್‍ರೇಷನ್‌ ಬ್ಯಾಂಕ್‌ ಶಾಖೆಯಲ್ಲಿ 1.28 ಲಕ್ಷ ರೂ. ಸಾಲ ಪಡೆದಿದ್ದರು. ಕೈಗಡ ಸಾಲವೂ ಇತ್ತು. ಇವರ ಪತ್ನಿ ಧರ್ಮಸ್ಥಳ ಸಂಸ್ಥೆಯಲ್ಲಿ ಸಾಲ ಪಡೆದಿದ್ದರು. ಈ ಕುಟುಂಬದ ಮೇಲೆ ಒಟ್ಟು 2.28 ಲಕ್ಷ ರೂ. ಸಾಲದ ಬಾರವಿತ್ತು ಎನ್ನಲಾಗಿದೆ.

ಸಾಲ ಪಾವತಿ ಮಾಡಲು ಸಂಬಂಧಿಕರಲ್ಲಿ ಇತ್ತೀಚಿಗೆ 50 ಸಾವಿರ ರೂ. ಸಾಲ ಕೇಳಿ ನಾಗರಾಜ್‌ ವಿಫಲರಾಗಿದ್ದರು. ಇದರಿಂದ ಬೇಸತ್ತು ರೈತ ಮಧ್ಯಾಹ್ನ ಜಮೀನಿನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರಿಗೆ ಪತ್ನಿ, ಓರ್ವ ಪುತ್ರ ಇದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ