ಆ್ಯಪ್ನಗರ

ಒಣಗಿದ ಬೆಳೆ: ಗ್ರಾಪಂ ಸದಸ್ಯ ಆತ್ಮಹತ್ಯೆ

ಬೆಳೆ ಮಳೆ ಬಾರದೆ ಒಣಗುತ್ತಿದ್ದರಿಂದ ಮನನೊಂದು ರೈತ ಹಾಗೂ ಗ್ರಾಪಂ ಸದಸ್ಯ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಉಚ್ಚಂಗಿದುರ್ಗದಲ್ಲಿ ಶುಕ್ರವಾರ ನಡೆದಿದೆ.

ವಿಕ ಸುದ್ದಿಲೋಕ 5 Aug 2017, 7:48 am
ಹರಪನಹಳ್ಳಿ : ಬೆಳೆ ಮಳೆ ಬಾರದೆ ಒಣಗುತ್ತಿದ್ದರಿಂದ ಮನನೊಂದು ರೈತ ಹಾಗೂ ಗ್ರಾಪಂ ಸದಸ್ಯ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಉಚ್ಚಂಗಿದುರ್ಗದಲ್ಲಿ ಶುಕ್ರವಾರ ನಡೆದಿದೆ.
Vijaya Karnataka Web
ಒಣಗಿದ ಬೆಳೆ: ಗ್ರಾಪಂ ಸದಸ್ಯ ಆತ್ಮಹತ್ಯೆ

ಗ್ರಾಮದ ಸಿದ್ದಪ್ಪ(35)ಮೃತರು. ರೈತ ಜೂನ್‌ ಮೊದಲ ವಾರ ಸ್ವಲ್ಪ ಮಳೆ ಆದ ಕಾರಣ ತಮ್ಮ ಎಂಟು ಎಕರೆ ಜಮೀನಿನಲ್ಲಿ ಮೆಕ್ಕೆಜೋಳ ಬಿತ್ತಿದ್ದರು. ನಂತರ ಮಳೆ ಬಾರದ್ದಕ್ಕೆ ಮೆಕ್ಕೆಜೋಳ ನಾಶ ಮಾಡಿದ್ದರು.
ಕಳೆದ 15 ದಿನಗಳ ಕೆಳಗೆ ಮೂರು ದಿನ ಸತತ ಅಲ್ಪ ಮಳೆ ಬಂದ ಹಿನ್ನಲೆಯಲ್ಲಿ ಪುನಃ ಮೆಕ್ಕೆಜೋಳ ಅದೇ ಎಂಟು ಎಕರೆಯಲ್ಲಿ ಬಿತ್ತಿದ್ದರು. ಮತ್ತೆ ಮಳೆ ಕೈ ಕೊಟ್ಟಿತು. ಹೀಗೆ ಮಳೆರಾಯನ ಕಣ್ಣಾಮುಚ್ಚಾಲೆಯಿಂದ ಎರಡನೇ ಬಾರಿ ಬಿತ್ತಿದ ಮಳೆ ಸಹ ಒಣಗಿ ಹೋಗುತ್ತಿದ್ದನ್ನು ನೋಡಿ ಮನನೊಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಕುಟುಂಬದವರು ತಿಳಿಸಿದ್ದಾರೆ. ಮೃತರಿಗೆ ಪತ್ನಿ, ಒಬ್ಬ ಪುತ್ರ, ಪುತ್ರಿ ಇದ್ದಾರೆ. ಉಚ್ಚಂಗಿದುರ್ಗದಲ್ಲಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ