ಆ್ಯಪ್ನಗರ

ಸಂಗಾಹಳ್ಳಿ ಮನೆಯೊಂದಕ್ಕೆ ಸಿಡಿಲು ಬಡಿದು ಭಸ್ಮ

ಚನ್ನಗಿರಿ ತಾಲೂಕಿನ ಸಂಗಾಹಳ್ಳಿಯಲ್ಲಿ ಗುರುವಾರ ರಾತ್ರಿ ಸುರಿದ ಭಾರಿ ಮಳೆಯ ಮಿಂಚು ಗುಡುಗು ಸಿಡಿಲಿಗೆ ಗ್ರಾಮದ ಕೆ.ಬಿ.ಶಿವಪ್ಪ ಎಂಬವರ ಮನೆ ಸಂಪೂರ್ಣ ಸುಟ್ಟು ಕರಕಲಾಗಿದೆ.

Vijaya Karnataka 26 May 2019, 5:00 am
ಬಸವಾಪಟ್ಟಣ : ಚನ್ನಗಿರಿ ತಾಲೂಕಿನ ಸಂಗಾಹಳ್ಳಿಯಲ್ಲಿ ಗುರುವಾರ ರಾತ್ರಿ ಸುರಿದ ಭಾರಿ ಮಳೆಯ ಮಿಂಚು ಗುಡುಗು ಸಿಡಿಲಿಗೆ ಗ್ರಾಮದ ಕೆ.ಬಿ.ಶಿವಪ್ಪ ಎಂಬವರ ಮನೆ ಸಂಪೂರ್ಣ ಸುಟ್ಟು ಕರಕಲಾಗಿದೆ.
Vijaya Karnataka Web
ಸಂಗಾಹಳ್ಳಿ ಮನೆಯೊಂದಕ್ಕೆ ಸಿಡಿಲು ಬಡಿದು ಭಸ್ಮ


ಸಿಡಿಲಿನಿಂದ ಬೆಂಕಿ ಹೊತ್ತಿದ ಮನೆ ಧಗ ಧಗನೆ ಉರಿಯುತ್ತಿತ್ತು. ಬೆಂಕಿಯ ಮನೆಯಲ್ಲಿದ್ದ, ಕೆ.ಬಿ.ಶಿವಪ್ಪ ಅವರ ಪತ್ನಿ ಕರಿಯಮ್ಮ, ಮಗಳು ದೀಪಾ, ಅಳಿಯ ದೇವೇಂದ್ರಪ್ಪ, ಮೊಮ್ಮಕ್ಕಳಾದ ಚರಣ್‌, ಪ್ರಿಯಾಂಕ ಒಟ್ಟು 5 ಜನರನ್ನು ಗ್ರಾಮಸ್ಥರು ಮನೆಯಿಂದ ಹೊರಗೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ. ನಂತರ ತಕ್ಷ ಣ ಚನ್ನಗಿರಿ ಅಗ್ನಿಶಾಮಕ ದಳಕ್ಕೆ ಪೋನ್‌ ಮಾಡಿ ಕರೆಯಿಸಿ ಬೆಂಕಿ ನಂದಿಸಿದರೂ ಸಂಪೂರ್ಣ ಮನೆ ಸುಟ್ಟು ಕರಕಲಾಯಿತು.

ಅದೃಷ್ಠವಷಾತ್‌ ಮನೆಯಲ್ಲಿದ್ದ ಗ್ಯಾಸ್‌ ಸಿಲಿಂಡರ್‌ನ್ನು ಸಾರ್ವಜನಿಕರು ತಕ್ಷ ಣ ಹೊರತಂದಿಟ್ಟು ಅಕ್ಕಪಕ್ಕದಲ್ಲಿ ಆಗುವ ಬಾರಿ ಅನಾಹುತವನ್ನು ತಪ್ಪಿಸಿದ್ದಾರೆ. ಮನೆಗೆ ಬೆಂಕಿ ಹೊತ್ತಿದ ವಿಚಾರ ಗ್ರಾಮದಲ್ಲಿದ್ದ ಶಿವಪ್ಪ ಕೇಳುತ್ತಲೆ ಧಾವಿಸಿ ಬಂದು ಎಚ್ಚರ ತಪ್ಪಿದ್ದರು. ತಕ್ಷ ಣ ಅವರನ್ನು ದಾವಣಗೆರೆ ಜಿಲ್ಲಾಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಯಿತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಭತ್ತ ಮಾರಿ ಮನೆಯಲ್ಲಿಟ್ಟಿದ್ದ 1.5 ಲಕ್ಷ ನಗದು, ಬಾಣಂತನಕ್ಕೆ ಬಂದ ಮಗಳ ಮಾಂಗಲ್ಯ ಸರ, ಎರಡು ಚಿನ್ನದ ಸರಗಳು, ಮೂರು ಉಂಗುರ ಮತ್ತು ಒಂದು ಜೊತೆ ಕಿವಿ ಓಲೆ ಸೇರಿದಂತೆ ಬಟ್ಟೆ, ಆಹಾರ ಧಾನ್ಯಗಳು, ಟಿವಿ, ಗಾಡ್ರೇಜ್‌ ಇನ್ನು ಮುಂತಾದ ಮನೆ ಪರಿಕರ ವಸ್ತುಗಳು ಸಂಪೂರ್ಣ ಬೆಂಕಿಗೆ ಆಹುತಿಯಾಗಿವೆ.

ಪರಿಹಾರದ ಭರವಸೆ:
ಸ್ಥಳಕ್ಕೆ ಭೇಟಿ ನೀಡಿದ ಜಿಪಂ ಸದಸ್ಯ ತೇಜಸ್ವಿ ಪಟೇಲ್‌ ಮನೆಯ ಜನರನ್ನು ಸಾಂತ್ವನಗೊಳಿಸಿ, ಪ್ರಕೃತಿ ವಿಕೋಪ ನಿಧಿಯಿಂದ ಪರಿಹಾರ ಹಾಗೂ ಜನತಾ ಮನೆಯನ್ನು ಕೊಡಿಸುವುದಾಗಿ ಭರವಸೆ ನೀಡಿದರು. ರಾಜಸ್ವ ನಿರೀಕ್ಷ ಕ ವೇದಮೂರ್ತಿ ನಷ್ಟದ ವಿವರ ಪಡೆದುಕೊಂಡು ಮೇಲಾಧಿಕಾರಿಗಳಿಗೆ ಕಳುಹಿಸಿ ಶೀಘ್ರ ಪರಿಹಾರ ಕೊಡಿಸಲು ಪ್ರಯತ್ನಿಸುವುದಾಗಿ ತಿಳಿಸಿದರು. ಕಂದಾಯ ಇಲಾಖೆ ಅಧಿಕಾರಿ ಸಂತೋಷ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ