ವಿದ್ಯಾ ಎನ್.ಆರ್. ದಾವಣಗೆರೆ
'ಹೆಣ್ಣು' ಯಾರಿಗೂ ಹೊರೆಯಲ್ಲ, ಜೀವಗಳ ಪೊರೆಯಬಲ್ಲಳು, ತಾನೂ ಜೀವಿಸಬಲ್ಲಳು. ಓದು, ಮದುವೆ, ಕುಟುಂಬ ಹೀಗೆ ಎಲ್ಲೂ ಆಕೆ ಅವಲಂಬಿ ಆಗದೆ ಸ್ವಾವಲಂಬಿ ಆಗಬೇಕು..
ಇಂಥಾದ್ದೊಂದು ಮಹತ್ವದ ಉದ್ದೇಶ ಹೊತ್ತು ಮಾಜಿ ಸಿಎಂ ಯಡಿಯೂರಪ್ಪ ಸರಕಾರ ಜಾರಿಗೆ ತಂದ 'ಭಾಗ್ಯಲಕ್ಷ್ಮಿ ಬಾಂಡ್' ಯೋಜನೆ ಹೆಣ್ಣು ಹೆತ್ತವರ ಪಾಲಿಗೆ ಅಕ್ಷರಶಃ ಲಕ್ಷ್ಮಿಯೇ ಹೌದು..! ಆದರೆ ಸಾವಿರಾರು ಮಕ್ಕಳಿಗೆ ಇನ್ನೂ ಬಾಂಡ್ ಕೈಸೇರಿಲ್ಲ. ಸರಿ ಸುಮಾರು 45, 323 ಅರ್ಜಿಗಳು ಕಡತದಲ್ಲಿ ಕೊಳೆಯುತ್ತಿವೆ.
ಇದಕ್ಕೆ ಮುಖ್ಯ ಕಾರಣ, ಅಧಿಕಾರಿಗಳ ನಿರ್ಲಕ್ಷ್ಯ ಎನ್ನುತ್ತಾರೆ ಪೋಷಕರು. ಹಂಗೇನಿಲ್ಲ ಅವಧಿ ಮೀರಿ ಸಲ್ಲಿಸಿದ್ದರಿಂದ ಇಷ್ಟು ಅರ್ಜಿಗಳು ಬಾಕಿಯಿವೆ ಎಂಬುದು ಅಧಿಕಾರಿಗಳ ಸಮಜಾಯಿಷಿ. ಅದೇನೇ ಇರಲಿ, ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆಗೆ ಪೇರೆಂಟ್ಸ್ ಅಲೆಯುತ್ತಿರುವುದಂತೂ ಸ್ಪಷ್ಟ.
ತಾಂತ್ರಿಕ ಸಮಸ್ಯೆ:
2006ರಿಂದ 2010ರವರೆಗೆ ಅರ್ಜಿ ಸಲ್ಲಿಕೆಗೆ ಆನ್ಲೈನ್ ವ್ಯವಸ್ಥೆ ಇರಲಿಲ್ಲ. ಹಾಗಾಗಿ ಇಷ್ಟು ಅರ್ಜಿ ಪೆಂಡಿಂಗ್ ಇವೆ ಎನ್ನುತ್ತದೆ ಇಲಾಖೆ. ಆದರೆ 2010ರ ನಂತರ ಆನ್ಲೈನ್ಗೆ ಅಪ್ಡೇಟ್ ಆಯಿತು. ಆಮೇಲೂ ದಾವಣಗೆರೆ ಜಿಲ್ಲೆ ಒಂದರಲ್ಲೇ 3682 ಅರ್ಜಿಗಳಿವೆ. ಇದಕ್ಕೂ ಪೂರ್ವ 1838 ಅರ್ಜಿಗಳಿದ್ದವು. ಇದಕ್ಕೆ ಇಲಾಖೆ ನೀಡುವ ಕಾರಣ 'ಕಂಪ್ಯೂಟರ್ನಲ್ಲಿ ಕಾಪಿ ಪೇಸ್ಟ್ ವೇಳೆ ಮಾಹಿತಿ ಬಿಟ್ಟುಹೋಗಿದೆ' ಎಂಬುದು. ಹಾಗಾದರೆ ಸಮಸ್ಯೆ ಇದೆ. ಅದು ರೂಪಾಂತರಗೊಂಡಿದೆ.
2ನೇ ಮಗುವಿಗೆ ಬಂತು:
ದಾವಣಗೆರೆಯ ಎಸ್ಪಿಎಸ್ ನಗರದ ದರ್ಜಿ ವಸಂತ್ಕುಮಾರ್ರ ಎರಡನೇ ಮಗಳಿಗೆ ಭಾಗ್ಯಲಕ್ಷ್ಮಿ ಬಾಂಡ್ ಸಿಕ್ಕಿದೆ. ಆದರೆ 2010ರಲ್ಲಿ ಮೊದಲ ಮಗಳ ಹೆಸರಿನಲ್ಲಿ ಸಲ್ಲಿಸಿದ ಬಾಂಡ್ ಈವರೆಗೆ ಕೈ ಸೇರಿಲ್ಲ. 2010ರ ಏಪ್ರಿಲ್ 9ರಂದು ಅರ್ಜಿ ಸಲ್ಲಿಸಿದ್ದರು. ಬಾಂಡ್ ಪಡೆಯಲೇಬೇಕೆಂಬ ಹಠದಿಂದ ವಿಚಾರಿಸಿದರೆ, ಸಿಕ್ಕದ್ದು ಉಡಾಫೆ ಉತ್ತರ. ಇದರಿಂದ ಬೇಸತ್ತ ವಸಂತ್ ಮತ್ತೊಂದು ಪ್ರಯತ್ನವಾಗಿ 2014ರ ಜನವರಿ 20ರಂದು ಇಲಾಖೆಯ ಬೆಂಗಳೂರಿನ ಕೇಂದ್ರ ಕಚೇರಿಗೆ ಹೋಗಿ ವಿಚಾರಿಸಿದರು. ಅಲ್ಲಿಂದ ಫೆ.10ರಂದು ಜಿಲ್ಲಾ ಕಚೇರಿಗೆ ಪತ್ರ ಬಂತು. ಯಾಕೆ ವಿಳಂಬವಾಗಿದೆ, ಇದಕ್ಕೆ ಕಾರಣ ಏನು? ತಕ್ಷಣ ದಾಖಲೆ ಸಹಿತ ವರದಿ ಸಲ್ಲಿಸುವಂತೆ ಕೇಳಿತು. ನಂತರ ಸಿಡಿಪಿಒ ಅಧಿಕಾರಿಗಳು, ಅರ್ಜಿ ಅವಧಿ ಮೀರಿ ಬಂದಿದೆ. ಇವರಿಗೂ ಬಾಂಡ್ ವಿತರಿಸುವಂತೆ ಉಪನಿರ್ದೇಶಕರ ಕಚೇರಿಗೆ ಪ್ರಸ್ತಾವ ಸಲ್ಲಿಸಿದ್ದೇವೆ ಎಂದು ವಸಂತ್ಗೆ ಹಿಂಬರಹ ನೀಡಿ ಕೈ ತೊಳೆದುಕೊಂಡರು.
ಲೋಕಾಯುಕ್ತ :
ವಸಂತ್ ಕೊನೆ ಪ್ರಯತ್ನವೆಂಬಂತೆ ಕದ ತಟ್ಟಿದ್ದು ಲೋಕಾಯುಕ್ತ ಕಚೇರಿ. ಅಂದಿನ ಲೋಕಾಯುಕ್ತ ಅಧೀಕ್ಷಕ ಟಿ.ಶ್ರೀಧರ್ ಕೇಂದ್ರ ಕಚೇರಿಗೆ ಭೇಟಿ ನೀಡಿ ಅನುಷಾ ವಸಂತ್ಕುಮಾರ್ಗೆ ಭಾಗ್ಯಲಕ್ಷ್ಮಿಬಾಂಡ್ ನೀಡುವಂತೆ ಕೋರಿದರು. ಇದಕ್ಕೆ ಜಿಲ್ಲಾ ಕಚೇರಿಯಿಂದ ಮಂಜೂರಾತಿ ಆದೇಶ ಪ್ರತಿ ಕಳುಹಿಸಿಕೊಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದು ದೂರಿನ ವಿಚಾರಣೆ ಮುಕ್ತಾಯಗೊಳಿಸಿರುವುದಾಗಿ ಪತ್ರ ಬರೆದರು.
ತಪ್ಪದ ಕಿರಿಕಿರಿ:
ಆದರೆ ಈವರೆಗೆ ವಸಂತ್ಗೆ ಮಾತ್ರ ಬಾಂಡ್ ಸಿಕ್ಕಿಲ್ಲ. ಈ ಬಗ್ಗೆ ಪದೇ ಪದೇ ಸಿಡಿಪಿಒಗೆ ವಿಚಾರಿಸಿದರೆ ಉಪದ್ರವದ ಮಾತುಗಳು. 'ನೀನೊಬ್ಬನೇ ಅಲ್ಲ, ನಿನ್ನಂಥ ಸಾವಿರಾರು ಅರ್ಜಿಗಳು ಪೆಂಡಿಂಗ್ ಇವೆ. ಆರು ತಿಂಗಳು ಕಾದರೆ ಬಾಂಡ್ ಸಿಗುತ್ತದೆ 'ಎಂದಿದ್ದಾರೆ.
ನನ್ನ ಮಗಳು ಅನುಷಾಗೆ 2010ರಲ್ಲಿ ಭಾಗ್ಯಲಕ್ಷ್ಮಿ ಬಾಂಡ್ಗೆ ಅರ್ಜಿ ಸಲ್ಲಿಸಿದ್ದೆ. ಈಗಲೂ ಸಿಕ್ಕಿಲ್ಲ. ಪ್ರಶ್ನಿಸಿದರೆ ಅಧಿಕಾರಿಗಳ ಉಡಾಫೆ ಉತ್ತರ. ಇದರಿಂದ ಬೇಸತ್ತು ಮೀಡಿಯಾ ಬಳಿ ಹೋಗುವುದಾಗಿ ಹೇಳಿದೆ. 'ಆರು ತಿಂಗಳು ಕಾದರೆ ಬಾಂಡ್ ಸಿಗುತ್ತದೆ. ನಿನ್ನಂತೆಯೇ ಸಾವಿರ ಅರ್ಜಿದಾರರು ಕಾಯುತ್ತಿಲ್ಲವೇ' ಎನ್ನುತ್ತಾರೆ.
-ವಸಂತ್ಕುಮಾರ್, ಅರ್ಜಿದಾರ
ಭಾಗ್ಯಲಕ್ಷ್ಮಿ ಬಾಂಡ್ ಪಡೆಯಲು 2011ರವರೆಗೆ ಆನ್ಲೈನ್ ವ್ಯವಸ್ಥೆ ಇರಲಿಲ್ಲ. ಆಗ ಒಂದಷ್ಟು ಅರ್ಜಿಗಳು ಬಾಕಿ ಇದ್ದವು. ರಾಜ್ಯಾದ್ಯಂತ ಬಾಕಿ ಅರ್ಜಿಗಳ ಬಗ್ಗೆ ಸರಕಾರದ ಹಂತದಲ್ಲಿ ಚರ್ಚೆ ನಡೆದಿದೆ. ಶೀಘ್ರದಲ್ಲೇ ಮಂಜೂರಾಗಲಿವೆ.
ವಿಜಯ್ಕುಮಾರ್, ಡಿಡಿ, ಇಲಾಖೆ
--
'ಹೆಣ್ಣು' ಯಾರಿಗೂ ಹೊರೆಯಲ್ಲ, ಜೀವಗಳ ಪೊರೆಯಬಲ್ಲಳು, ತಾನೂ ಜೀವಿಸಬಲ್ಲಳು. ಓದು, ಮದುವೆ, ಕುಟುಂಬ ಹೀಗೆ ಎಲ್ಲೂ ಆಕೆ ಅವಲಂಬಿ ಆಗದೆ ಸ್ವಾವಲಂಬಿ ಆಗಬೇಕು..
ಇಂಥಾದ್ದೊಂದು ಮಹತ್ವದ ಉದ್ದೇಶ ಹೊತ್ತು ಮಾಜಿ ಸಿಎಂ ಯಡಿಯೂರಪ್ಪ ಸರಕಾರ ಜಾರಿಗೆ ತಂದ 'ಭಾಗ್ಯಲಕ್ಷ್ಮಿ ಬಾಂಡ್' ಯೋಜನೆ ಹೆಣ್ಣು ಹೆತ್ತವರ ಪಾಲಿಗೆ ಅಕ್ಷರಶಃ ಲಕ್ಷ್ಮಿಯೇ ಹೌದು..! ಆದರೆ ಸಾವಿರಾರು ಮಕ್ಕಳಿಗೆ ಇನ್ನೂ ಬಾಂಡ್ ಕೈಸೇರಿಲ್ಲ. ಸರಿ ಸುಮಾರು 45, 323 ಅರ್ಜಿಗಳು ಕಡತದಲ್ಲಿ ಕೊಳೆಯುತ್ತಿವೆ.
ಇದಕ್ಕೆ ಮುಖ್ಯ ಕಾರಣ, ಅಧಿಕಾರಿಗಳ ನಿರ್ಲಕ್ಷ್ಯ ಎನ್ನುತ್ತಾರೆ ಪೋಷಕರು. ಹಂಗೇನಿಲ್ಲ ಅವಧಿ ಮೀರಿ ಸಲ್ಲಿಸಿದ್ದರಿಂದ ಇಷ್ಟು ಅರ್ಜಿಗಳು ಬಾಕಿಯಿವೆ ಎಂಬುದು ಅಧಿಕಾರಿಗಳ ಸಮಜಾಯಿಷಿ. ಅದೇನೇ ಇರಲಿ, ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆಗೆ ಪೇರೆಂಟ್ಸ್ ಅಲೆಯುತ್ತಿರುವುದಂತೂ ಸ್ಪಷ್ಟ.
ತಾಂತ್ರಿಕ ಸಮಸ್ಯೆ:
2006ರಿಂದ 2010ರವರೆಗೆ ಅರ್ಜಿ ಸಲ್ಲಿಕೆಗೆ ಆನ್ಲೈನ್ ವ್ಯವಸ್ಥೆ ಇರಲಿಲ್ಲ. ಹಾಗಾಗಿ ಇಷ್ಟು ಅರ್ಜಿ ಪೆಂಡಿಂಗ್ ಇವೆ ಎನ್ನುತ್ತದೆ ಇಲಾಖೆ. ಆದರೆ 2010ರ ನಂತರ ಆನ್ಲೈನ್ಗೆ ಅಪ್ಡೇಟ್ ಆಯಿತು. ಆಮೇಲೂ ದಾವಣಗೆರೆ ಜಿಲ್ಲೆ ಒಂದರಲ್ಲೇ 3682 ಅರ್ಜಿಗಳಿವೆ. ಇದಕ್ಕೂ ಪೂರ್ವ 1838 ಅರ್ಜಿಗಳಿದ್ದವು. ಇದಕ್ಕೆ ಇಲಾಖೆ ನೀಡುವ ಕಾರಣ 'ಕಂಪ್ಯೂಟರ್ನಲ್ಲಿ ಕಾಪಿ ಪೇಸ್ಟ್ ವೇಳೆ ಮಾಹಿತಿ ಬಿಟ್ಟುಹೋಗಿದೆ' ಎಂಬುದು. ಹಾಗಾದರೆ ಸಮಸ್ಯೆ ಇದೆ. ಅದು ರೂಪಾಂತರಗೊಂಡಿದೆ.
2ನೇ ಮಗುವಿಗೆ ಬಂತು:
ದಾವಣಗೆರೆಯ ಎಸ್ಪಿಎಸ್ ನಗರದ ದರ್ಜಿ ವಸಂತ್ಕುಮಾರ್ರ ಎರಡನೇ ಮಗಳಿಗೆ ಭಾಗ್ಯಲಕ್ಷ್ಮಿ ಬಾಂಡ್ ಸಿಕ್ಕಿದೆ. ಆದರೆ 2010ರಲ್ಲಿ ಮೊದಲ ಮಗಳ ಹೆಸರಿನಲ್ಲಿ ಸಲ್ಲಿಸಿದ ಬಾಂಡ್ ಈವರೆಗೆ ಕೈ ಸೇರಿಲ್ಲ. 2010ರ ಏಪ್ರಿಲ್ 9ರಂದು ಅರ್ಜಿ ಸಲ್ಲಿಸಿದ್ದರು. ಬಾಂಡ್ ಪಡೆಯಲೇಬೇಕೆಂಬ ಹಠದಿಂದ ವಿಚಾರಿಸಿದರೆ, ಸಿಕ್ಕದ್ದು ಉಡಾಫೆ ಉತ್ತರ. ಇದರಿಂದ ಬೇಸತ್ತ ವಸಂತ್ ಮತ್ತೊಂದು ಪ್ರಯತ್ನವಾಗಿ 2014ರ ಜನವರಿ 20ರಂದು ಇಲಾಖೆಯ ಬೆಂಗಳೂರಿನ ಕೇಂದ್ರ ಕಚೇರಿಗೆ ಹೋಗಿ ವಿಚಾರಿಸಿದರು. ಅಲ್ಲಿಂದ ಫೆ.10ರಂದು ಜಿಲ್ಲಾ ಕಚೇರಿಗೆ ಪತ್ರ ಬಂತು. ಯಾಕೆ ವಿಳಂಬವಾಗಿದೆ, ಇದಕ್ಕೆ ಕಾರಣ ಏನು? ತಕ್ಷಣ ದಾಖಲೆ ಸಹಿತ ವರದಿ ಸಲ್ಲಿಸುವಂತೆ ಕೇಳಿತು. ನಂತರ ಸಿಡಿಪಿಒ ಅಧಿಕಾರಿಗಳು, ಅರ್ಜಿ ಅವಧಿ ಮೀರಿ ಬಂದಿದೆ. ಇವರಿಗೂ ಬಾಂಡ್ ವಿತರಿಸುವಂತೆ ಉಪನಿರ್ದೇಶಕರ ಕಚೇರಿಗೆ ಪ್ರಸ್ತಾವ ಸಲ್ಲಿಸಿದ್ದೇವೆ ಎಂದು ವಸಂತ್ಗೆ ಹಿಂಬರಹ ನೀಡಿ ಕೈ ತೊಳೆದುಕೊಂಡರು.
ಲೋಕಾಯುಕ್ತ :
ವಸಂತ್ ಕೊನೆ ಪ್ರಯತ್ನವೆಂಬಂತೆ ಕದ ತಟ್ಟಿದ್ದು ಲೋಕಾಯುಕ್ತ ಕಚೇರಿ. ಅಂದಿನ ಲೋಕಾಯುಕ್ತ ಅಧೀಕ್ಷಕ ಟಿ.ಶ್ರೀಧರ್ ಕೇಂದ್ರ ಕಚೇರಿಗೆ ಭೇಟಿ ನೀಡಿ ಅನುಷಾ ವಸಂತ್ಕುಮಾರ್ಗೆ ಭಾಗ್ಯಲಕ್ಷ್ಮಿಬಾಂಡ್ ನೀಡುವಂತೆ ಕೋರಿದರು. ಇದಕ್ಕೆ ಜಿಲ್ಲಾ ಕಚೇರಿಯಿಂದ ಮಂಜೂರಾತಿ ಆದೇಶ ಪ್ರತಿ ಕಳುಹಿಸಿಕೊಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದು ದೂರಿನ ವಿಚಾರಣೆ ಮುಕ್ತಾಯಗೊಳಿಸಿರುವುದಾಗಿ ಪತ್ರ ಬರೆದರು.
ತಪ್ಪದ ಕಿರಿಕಿರಿ:
ಆದರೆ ಈವರೆಗೆ ವಸಂತ್ಗೆ ಮಾತ್ರ ಬಾಂಡ್ ಸಿಕ್ಕಿಲ್ಲ. ಈ ಬಗ್ಗೆ ಪದೇ ಪದೇ ಸಿಡಿಪಿಒಗೆ ವಿಚಾರಿಸಿದರೆ ಉಪದ್ರವದ ಮಾತುಗಳು. 'ನೀನೊಬ್ಬನೇ ಅಲ್ಲ, ನಿನ್ನಂಥ ಸಾವಿರಾರು ಅರ್ಜಿಗಳು ಪೆಂಡಿಂಗ್ ಇವೆ. ಆರು ತಿಂಗಳು ಕಾದರೆ ಬಾಂಡ್ ಸಿಗುತ್ತದೆ 'ಎಂದಿದ್ದಾರೆ.
ನನ್ನ ಮಗಳು ಅನುಷಾಗೆ 2010ರಲ್ಲಿ ಭಾಗ್ಯಲಕ್ಷ್ಮಿ ಬಾಂಡ್ಗೆ ಅರ್ಜಿ ಸಲ್ಲಿಸಿದ್ದೆ. ಈಗಲೂ ಸಿಕ್ಕಿಲ್ಲ. ಪ್ರಶ್ನಿಸಿದರೆ ಅಧಿಕಾರಿಗಳ ಉಡಾಫೆ ಉತ್ತರ. ಇದರಿಂದ ಬೇಸತ್ತು ಮೀಡಿಯಾ ಬಳಿ ಹೋಗುವುದಾಗಿ ಹೇಳಿದೆ. 'ಆರು ತಿಂಗಳು ಕಾದರೆ ಬಾಂಡ್ ಸಿಗುತ್ತದೆ. ನಿನ್ನಂತೆಯೇ ಸಾವಿರ ಅರ್ಜಿದಾರರು ಕಾಯುತ್ತಿಲ್ಲವೇ' ಎನ್ನುತ್ತಾರೆ.
-ವಸಂತ್ಕುಮಾರ್, ಅರ್ಜಿದಾರ
ಭಾಗ್ಯಲಕ್ಷ್ಮಿ ಬಾಂಡ್ ಪಡೆಯಲು 2011ರವರೆಗೆ ಆನ್ಲೈನ್ ವ್ಯವಸ್ಥೆ ಇರಲಿಲ್ಲ. ಆಗ ಒಂದಷ್ಟು ಅರ್ಜಿಗಳು ಬಾಕಿ ಇದ್ದವು. ರಾಜ್ಯಾದ್ಯಂತ ಬಾಕಿ ಅರ್ಜಿಗಳ ಬಗ್ಗೆ ಸರಕಾರದ ಹಂತದಲ್ಲಿ ಚರ್ಚೆ ನಡೆದಿದೆ. ಶೀಘ್ರದಲ್ಲೇ ಮಂಜೂರಾಗಲಿವೆ.
ವಿಜಯ್ಕುಮಾರ್, ಡಿಡಿ, ಇಲಾಖೆ
--